ಜಮ್ಮುಕಾಶ್ಮೀರ: ಗುಂಡಿನ ಕಾಳಗದಲ್ಲಿ ನಾಗರಿಕ ಸಾವು
ಶ್ರೀನಗರ, ಆ. 6: ಜಮ್ಮು ಹಾಗೂ ಕಾಶ್ಮೀರದ ಕುಲ್ಗಾಂವ್ನಲ್ಲಿ ಭದ್ರತಾ ಪಡೆ ಹಾಗೂ ಶಂಕಿತ ಉಗ್ರರ ನಡುವೆ ನಡೆದ ಗುಂಡಿನ ಕಾಳಗದಲ್ಲಿ ಓರ್ವ ನಾಗರಿಕ ಮೃತಪಟ್ಟಿದ್ದಾನೆ.
ಮೃತಪಟ್ಟ ನಾಗರಿಕನನ್ನು ಮಂಝೂರ್ ಲೋನೆ ಎಂದು ಗುರುತಿಸಲಾಗಿದೆ. ಎನ್ಕೌಂಟರ್ ಸಂದರ್ಭ ಗಂಭೀರ ಗಾಯಗೊಂಡ ಲೋನೆ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ, ಚಿಕಿತ್ಸೆ ಸಂದರ್ಭ ಅವರು ಮೃತಪಟ್ಟರು ಎಂದು ಕಾಶ್ಮೀರ ವಲಯ ಪೊಲೀಸ್ ಟ್ವೀಟ್ ಮಾಡಿದೆ.
ಈ ಗುಂಡಿನ ಚಕಮಕಿಯಲ್ಲಿ ಯೋಧ ಕಿರಣ್ ಸಿಂಗ್ ಕೂಡ ಗಾಯಗೊಂಡಿದ್ದಾರೆ. ಅವರನ್ನು ಶ್ರೀನಗರದ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ನಡುವೆ ಹೆಚ್ಚುವರಿ ಡಿ.ಜಿ. ವಿಜಯ್ ಕುಮಾರ್, ಸ್ಥಳೀಯರಲ್ಲದ ಕಾರ್ಮಿಕರ ಮೇಲೆ ಗುರುವಾರ ನಡೆಸಿದ ದಾಳಿ ಹಿಂದೆ ಇರುವ ಲಷ್ಕರೆ ತಯ್ಯಿಬದ ಇಬ್ಬರು ಉಗ್ರರನ್ನು ಗುರುತಿಸಲಾಗಿದೆ ಎಂದಿದ್ದಾರೆ.
Next Story