ಹಾಸನ: ಮಹಿಳೆಯ ಚಿನ್ನದ ಸರ ಕಸಿದು ಪರಾರಿ
ಹಾಸನ: ಮನೆಯ ಮುಂದೆ ರಂಗೋಲಿ ಹಾಕುತ್ತಿದ್ದ ಮಹಿಳೆಯ ಚಿನ್ನದ ಸರ ಕಸಿದು ಸರಗಳ್ಳ ಪರಾರಿಯಾದ ಘಟನೆ ಹಾಸನ ಜಿಲ್ಲೆ, ಹೊಳೆನರಸೀಪುರ ಪಟ್ಟಣದ ಅಕ್ಕಿ ಕುರುಬರ ಬೀದಿಯಲ್ಲಿ ಮುಂಜಾನೆ ನಡೆದಿದೆ.
ಸರಸ್ವತಿ ಎಂಬವರು ಬೆಳಗ್ಗೆ ರಂಗೋಲಿ ಹಾಕುವಾಗ ಅವರ 40 ಗ್ರಾಂ ಚಿನ್ನದ ಸರ ಕಸಿದು ಆರೋಪಿ ಪರಾರಿಯಾಗಿದ್ದಾನೆ.
ಮಹಿಳೆ ಕಿರಿಚಾಡುತ್ತಿದ್ದಂತೆ ರಂಗೋಲಿಯನ್ನು ಮುಖದ ಮೇಲೆ ಎರಚಿ ಕುತ್ತಿಗೆಯಿಂದ ಚಿನ್ನದ ಸರ ಕಸಿದು ಪರಾರಿಯಾಗುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಸ್ಥಳಕ್ಕೆ ಪೊಲೀಸರು ಭೇಟಿ, ಪರಿಶೀಲನೆ ನಡೆಸಿದ್ದಾರೆ. ಹೊಳೆನರಸೀಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
Next Story