ಕರಾಯ | ಕಲ್ಲೇರಿ: ಕ್ಲಿನಿಕ್ ನಿಂದ ನಗದು ಕಳವು
ಸಹಕಾರಿ ಸಂಘಕ್ಕೆ ನುಗ್ಗಲು ವಿಫಲ ಯತ್ನ
ಉಪ್ಪಿನಂಗಡಿ, ಆ.12: ಕ್ಲಿನಿಕ್ ವೊಂದಕ್ಕೆ ನುಗ್ಗಿ ನಗದು ದೋಚಿದ ಕಳ್ಳರು, ಅದೇ ಪರಿಸರದ ಮೂರ್ತೆದಾರರ ಸೇವಾ ಸಹಕಾರಿ ಸಂಘ ಹಾಗೂ ಹೊಟೇಲ್ ವೊಂದರಿಂದ ಕಳವಿಗೆ ವಿಫಲ ಯತ್ನ ನಡೆಸಿದ ಘಟನೆ ಉಪ್ಪಿನಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯ ಬೆಳ್ತಂಗಡಿ ತಾಲೂಕಿನ ಕರಾಯ ಗ್ರಾಮದ ಕಲ್ಲೇರಿ ಪೇಟೆಯಲ್ಲಿ ಶುಕ್ರವಾರ ಬೆಳಗ್ಗೆ ಬೆಳಕಿಗೆ ಬಂದಿದೆ.
ಇಲ್ಲಿನ ಸಿಂಧೂರ ಮೆಡಿಕಲ್ಸ್ನ ಹಿಂಬದಿಯಿಂದ ನುಗ್ಗಿದ ಕಳ್ಳರು ಅದೇ ಮೆಡಿಕಲ್ನ ಮತ್ತೊಂದು ಕೊಠಡಿಯಲ್ಲಿರುವ ಕ್ಲಿನಿಕ್ನೊಳಗೆ ಕಿಟಕಿಯ ಸರಳುಗಳನ್ನು ಬಗ್ಗಿಸಿ ಒಳನುಗ್ಗಿದ್ದಾರೆ. ಅಲ್ಲಿಂದ ಸುಮಾರು ಏಳು ಸಾವಿರ ರೂ.ನಷ್ಟು ನಗದು ಕಳವುಗೈದಿದ್ದಾರೆ. ಬಳಿಕ ಹಿಂಬಾಗಿಲ ಚಿಲಕ ತೆಗೆದು ಪರಾರಿಯಾಗಿದ್ದಾರೆ.
ಇದನ್ನೂ ಓದಿ: ಜಾನ್ಸನ್ & ಜಾನ್ಸನ್ ಬೇಬಿ ಪೌಡರ್ ಮಾರಾಟವನ್ನೇ ನಿಲ್ಲಿಸಲಿರುವ ಸಂಸ್ಥೆ: ಕಾರಣವೇನು ಗೊತ್ತೇ?
ಇದೇ ಪರಿಸರದಲ್ಲಿರುವ ಮೂರ್ತೆದಾರರ ಸೇವಾ ಸಹಕಾರಿ ಸಂಘದ ಶಟರ್ನ ಎರಡು ಬೀಗವನ್ನು ತುಂಡರಿಸಿರುವ ಕಳ್ಳರು ಅದರ ಮಧ್ಯದ ಲಾಕ್ ತೆಗೆಯಲು ವಿಫಲ ಯತ್ನ ನಡೆಸಿದ್ದಾರೆ. ಅದು ಸಾಧ್ಯವಾಗದಿದ್ದಾಗ ಅಲ್ಲಿಂದ ಪರಾರಿಯಾಗಿದ್ದಾರೆ. ಪ್ರಶಾಂತ್ ಭವನ ಹೊಟೇಲ್ನ ಹಿಂಬಾಗಿಲು ಒಡೆದು ಒಳನುಗ್ಗಿರುವ ಕಳ್ಳ ಅಲ್ಲಿ ಹಣಕ್ಕಾಗಿ ತಡಕಾಡಿದ್ದಾರೆ. ಆದರೆ ಅಲ್ಲೇನು ಸಿಗದಿದ್ದಾಗ ಬರಿಗೈಯಲ್ಲಿ ಹಿಂದಿರುಗಿದ್ದಾರೆ. ಅದೇ ಪರಿಸರದಲ್ಲಿ ನಿಂತಿದ್ದ ಪಿಕಪ್ ವಾಹನವೊಂದರ ಗಾಜನ್ನು ಒಡೆದು ಹಾಕಿ ಅಲ್ಲಿಂದ ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಉಪ್ಪಿನಂಗಡಿ ಪೊಲೀಸರು ಸ್ಥಳಕ್ಕಾಗಮಿಸಿ, ಪರಿಶೀಲನೆ ನಡೆಸಿದ್ದಾರೆ.