ಅಕ್ರಮ ದನದ ಮಾಂಸ ಸಾಗಾಟ ಆರೋಪ : ಓರ್ವನ ಬಂಧನ
![ಅಕ್ರಮ ದನದ ಮಾಂಸ ಸಾಗಾಟ ಆರೋಪ : ಓರ್ವನ ಬಂಧನ ಅಕ್ರಮ ದನದ ಮಾಂಸ ಸಾಗಾಟ ಆರೋಪ : ಓರ್ವನ ಬಂಧನ](https://www.varthabharati.in/sites/default/files/images/articles/2022/08/21/346757-1661099541.png)
ಬೈಂದೂರು: ಕಾರಿನಲ್ಲಿ ಅಕ್ರಮವಾಗಿ ದನದ ಮಾಂಸ ಸಾಗಾಟ ಮಾಡುತ್ತಿದ್ದ ಆರೋಪಿದಲ್ಲಿ ಓರ್ವನನ್ನು ಪೊಲೀಸರು ಯಡ್ತರೆ ಗ್ರಾಮದ ಹೊಸ ಬಸ್ ನಿಲ್ದಾಣದ ಬಳಿ ಬಂಧಿಸಿದ್ದಾರೆ.
ಭಟ್ಕಳ ನಿವಾಸಿ ಮಹಮ್ಮದ್ ಗೌಸ್ ಗವಾಯಿ (37) ಬಂಧಿತ ಆರೋಪಿ. ಇನ್ನೋರ್ವ ಆರೋಪಿ ನಜ್ಮುಲ್ ಎಂಬಾತ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಕುಂದಾಪುರ ಕಡೆಯಿಂದ ಭಟ್ಕಳ ಕಡೆಗೆ ಹೋಗುತ್ತಿದ್ದ ಕಾರನ್ನು ಪೊಲೀಸರು ತಡೆದು ಪರಿಶೀಲಿಸಿದಾಗ ಪತ್ತೆಯಾಗಿದೆ. ಕಾರಿನಲ್ಲಿದ್ದ 22 ಸಾವಿರ ರೂ. ಮೌಲ್ಯದ 150 ಕೆ.ಜಿ. ಮಾಂಸವನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story