Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ವಿವೇಕ ಮೂಡಿಸಿದ ಸಂಪಾದಕೀಯ

ವಿವೇಕ ಮೂಡಿಸಿದ ಸಂಪಾದಕೀಯ

-ವಿಜಯ ಕುಮಾರ್, ಮಡಿಕೇರಿ-ವಿಜಯ ಕುಮಾರ್, ಮಡಿಕೇರಿ23 Aug 2022 12:07 AM IST
share

ಮಾನ್ಯರೇ,

ನಿನ್ನೆಯ ''ಅಕ್ರಮ ಗೋವುಗಳ ತಪಾಸಣೆಯ ಹೆಸರಲ್ಲಿ ಹೆದ್ದಾರಿ ದರೋಡೆ'' ಸಂಪಾದಕೀಯ ನಿಜಕ್ಕೂ ದಿಟ್ಟತನದಿಂದ ಕೂಡಿದ್ದು, ಪರಿಣಾಮಕಾರಿ ಬರಹ. ಅರಿವುಗೇಡಿಗಳಿಗೆ ವಿವೇಕ ಮೂಡಿಸುವಂತಹದ್ದು, ರೈತರು, ದಲಿತರ ಬಗ್ಗೆ ಅತೀವ ಕಳಕಳಿಯಿಂದ ಕೂಡಿರುವಂತಹದ್ದು. ಸಂವಿಧಾನದ ಚೌಕಟ್ಟಿನೊಳಗೇ ಮುಂದೊಂದು ದಿನ ರೈತಾಪಿ ವರ್ಗ ಈ 'ದರೋಡೆಕೋರ'ರ ವಿರುದ್ಧ ಬಂಡೇಳಬಹುದೆಂಬ ವಾಸ್ತವವನ್ನು ಮನದಟ್ಟು ಮಾಡುವಂತಹದ್ದು. ಇಂತಹ 'ದರೋಡೆಕೋರ'ರನ್ನು ಅದೇಗೆ ಒದ್ದು ಮಟ್ಟ ಹಾಕಬೇಕೆನ್ನುವ ನಿಟ್ಟಿನಲ್ಲಿ 'ಸಕಲೇಶಪುರ ಘಟನೆ' ರಾಜ್ಯಾದ್ಯಂತ ರೈತರಿಗೆ, ಬಡವರಿಗೆ ಸ್ಪಷ್ಟ ಸೂಚನೆ ನೀಡಿದಂತಿದೆ. ಪೊಲೀಸರು ಇಂತಹ ಅಶಾಂತಿಗೆ ಅವಕಾಶ ನೀಡಬಾರದೆಂಬ ಬುದ್ಧಿಮಾತನ್ನು ಈ ಸಂಪಾದಕೀಯ ಪದೇ ಪದೇ ಒತ್ತಿ ಹೇಳಿದೆ. ಮಾನವತೆಯ ಬೆಳ್ಳಿ ಬೆಳಕಲ್ಲಿ ಊರುಕೇರಿಗಳ ಜನರೆಲ್ಲರೂ ಒಗ್ಗೂಡಿ ಕಷ್ಟ ಸುಖಗಳನ್ನು ಹಂಚಿಕೊಳ್ಳುತ್ತಾ ಶಾಂತಿಯಿಂದ ಪರಸ್ಪರ ಹೆಗಲು ನೀಡುತ್ತಾ ಹಿಂದೆ ಇದ್ದಂತೆ ಬದುಕುವ ಆಶಯ ಈ ಸಂಪಾದಕೀಯದಲ್ಲಿ ಎದ್ದು ಕಂಡಿದೆ.

ಹೀಗಾಗಿ ಬರಹ ಬಹಳ ಇಷ್ಟವಾಯಿತು. ಇಂತಹ ನಿಲುವು, ಧೋರಣೆ, ಸ್ಪಷ್ಟತೆಗಳ ಕಾರಣಕ್ಕಾಗಿ ಮಾತ್ರ ನನಗೆ 'ವಾರ್ತಾಭಾರತಿ' ಬಲು ಅಚ್ಚುಮೆಚ್ಚು, ಅಭಿಮಾನ. ಸಕಲೇಶಪುರದಲ್ಲಿ ಈ ಘಟನೆ ಸಂಭವಿಸಿದ ಕೆಲವೇ ಗಂಟೆಗಳಲ್ಲಿ ಸಂತ್ರಸ್ತರ ಮಾತುಗಳು ಮತ್ತು ಪ್ರತಿಭಟನೆಯ ದೃಶ್ಯಗಳ ವೀಡಿಯೊ ತುಣುಕುಗಳಿಂದ ಕೂಡಿದ ವರದಿ ಕೂಡಾ 'ವಾರ್ತಾಭಾರತಿ'ಯಲ್ಲೇ ಮೊದಲಿಗೆ ಬಂದಿದ್ದನ್ನೂ ನಾನು ಗಮನಿಸಿದ್ದೇನೆ. ಜಾಲತಾಣದ ಮೂಲಕವಾದರೂ ಇವೆಲ್ಲವೂ ಅತಿ ಹೆಚ್ಚು ಜನರಿಗೆ ತಲುಪಿದರೆ ಅದು ಓದುಗರನ್ನು ಜಾಣರನ್ನಾಗಿ ಮಾಡುವ ಮತ್ತು ಮೂರ್ಖತನದ ಕೊಚ್ಚೆಯಿಂದ ಮೇಲೆತ್ತುವ ಜನಪರ ಕೈಂಕರ್ಯದ ನಿಟ್ಟಿನಲ್ಲಿ ಸಾರ್ಥಕ ಹೆಜ್ಜೆಗಳಾಗಲಿವೆ.

share
-ವಿಜಯ ಕುಮಾರ್, ಮಡಿಕೇರಿ
-ವಿಜಯ ಕುಮಾರ್, ಮಡಿಕೇರಿ
Next Story
X