ಆ.25ರಂದು ಕಲಿಯಾರ್ನಲ್ಲಿ ಸ್ವಲಾತ್ ವಾರ್ಷಿಕ, ಸನದುದಾನ ಸಮ್ಮೇಳನ
ಮಂಜೇಶ್ವರ: ಇಲ್ಲಿನ ಬಾಯಾರ್ ಸಮೀಪದ ಕಲಿಯಾರ್ ರಹ್ಮತ್ ನಗರದಲ್ಲಿ ಕಾರ್ಯಾಚರಿಸುತ್ತಿರುವ ಸ್ವಾಬಿರೀ ಮಸ್ಜಿದ್, ಜಲಾಲಿಯಾ ಹಿಫ್ಲುಲ್ ಕುರ್ಆನ್ ಕಾಲೇಜಿನ ಸನದುದಾನ ಮತ್ತು ಸ್ವಲಾತ್ನ 10ನೇ ವಾರ್ಷಿಕೋತ್ಸವ ಆ. 25ರಂದು ನಡೆಯಲಿದೆ.
ಕಾರ್ಯಕ್ರಮದ ನೇತೃತ್ವವನ್ನು ಶೈಖುನಾ ಚಪ್ಪಾರಪ್ಪಡವು ಉಸ್ತಾದ್ ವಹಿಸಲಿದ್ದಾರೆ. ಸ್ವಾಹಿಬುಲ್ ಮೌಲಾ ಅಹ್ಮದ್ ವಲಿಯುಲ್ಲಾಹಿ ಕುಞಿಪ್ಪಳ್ಳಿ ಮತ್ತು ಇತರರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
Next Story