ಪುಂಡಾಟಿಕೆ ಮಾಡಿಕೊಂಡು ತಿರುಗುತ್ತಿರುವ ಪ್ರತಾಪ ಸಿಂಹ: ಎಚ್.ಸಿ.ಮಹದೇವಪ್ಪ ಕಿಡಿ
''ದಲಿತ ಸಂಘಟನೆಗಳು ಒಗ್ಗಟ್ಟಾದರೆ...''
ಬೆಂಗಳೂರು, ಆ.23: ವಿಶ್ವ ಗುರು ಬಸವಣ್ಣನವರೇ ಕಲ್ಲು ದೇವರು ದೇವರಲ್ಲ, ಮಣ್ಣು ದೇವರು ದೇವರಲ್ಲ ಎನ್ನುತ್ತಾ ನಮ್ಮ ಕಾಲೇ ಕಂಬ ದೇಹವೇ ದೇಗುಲ ಶಿರವೇ ಹೊನ್ನ ಕಳಸ ಎಂದಿದ್ದಾರೆ. ಇನ್ನು ಬಾಬಾ ಸಾಹೇಬರು ಯಾವ ದೇವರೂ ಮತ್ತು ಧರ್ಮವೂ ನಿಮ್ಮ ಬದುಕಿಗೆ ಸಹಾಯ ಮಾಡದು ಎಂದಿದ್ದಾರೆ. ಇನ್ನು ಕುವೆಂಪು ಅವರು ಕೂಡಾ ನೇಗಿಲ ಕುಳದೊಳಗಡಗಿದೆ ಧರ್ಮ ಎಂದಿದ್ದಾರೆ ಎಂದು ಮಾಜಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ತಿಳಿಸಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿರುವ ಅವರು, ಹೀಗಿರುವಾಗ ನಾವು ಇಂತಹ ಮಹನೀಯರ ಮಾತು ಕೇಳಬೇಕೋ ಇಲ್ಲವೇ ಸಂಸದರಾಗಿಯೂ ಪುಂಡಾಟಿಕೆ ಮತ್ತು ತರ್ಲೆ ಮಾಡಿಕೊಂಡು ತಿರುಗುತ್ತಿರುವ ಪ್ರತಾಪ ಸಿಂಹ ಅವರ ಮಾತು ಕೇಳಬೇಕೋ? ಎಂದು ಪ್ರಶ್ನಿಸಿದ್ದಾರೆ.
ದಲಿತ ಸಂಘಟನೆಗಳು ಒಗ್ಗಟ್ಟಾದರೆ, ಬಜರಂಗ ದಳದಂತಹ ಸಮಾಜ ವಿರೋಧಿ ಪುಂಡರ ಗುಂಪಿನ ಆಟ ನಡೆಯುವುದಿಲ್ಲ. ಹಿಂದು, ಮುಸ್ಲಿಮ್, ಕ್ರೈಸ್ತ ಎನ್ನದೇ ಎಲ್ಲರ ಬದುಕನ್ನೂ ಮುಳುಗಿಸುತ್ತಿರುವ ಬಿಜೆಪಿ ಹಾಗೂ ಕೋಮುವಾದಿ ಸಂಘಟನೆಗಳ ವಿರುದ್ಧ ನಡೆಯಲಿರುವ ದಲಿತ ಸಂಘಟನೆಗಳ ಐಕ್ಯತಾ ಹೋರಾಟಕ್ಕೆ ಇನ್ನು ಮುಂದೆ ಕರ್ನಾಟಕ ರಾಜ್ಯವು ಅಕ್ಷರಶಃ ಸಾಕ್ಷಿಯಾಗಲಿದೆ ಎಂದು ಮಹದೇವಪ್ಪ ತಿಳಿಸಿದ್ದಾರೆ.
ಹೀಗಿರುವಾಗ ನಾವು ಇಂತಹ ಮಹನೀಯರ ಮಾತು ಕೇಳಬೇಕೋ ಇಲ್ಲವೇ ಸಂಸದರಾಗಿಯೂ ಪುಂಡಾಡಿಕೆ ಮತ್ತು ತರ್ಲೆ ಮಾಡಿಕೊಂಡು ತಿರುಗುತ್ತಿರುವ @mepratap ಅವರ ಮಾತು ಕೇಳಬೇಕೋ?
— Dr H.C.Mahadevappa (@CMahadevappa) August 23, 2022
ದಲಿತ ಸಂಘಟನೆಗಳು ಒಗ್ಗಟ್ಟಾದರೆ, ಬಜರಂಗ ದಳದಂತಹ ಸಮಾಜ ವಿರೋಧಿ ಪುಂಡರ ಗುಂಪಿನ ಆಟ ನಡೆಯುವುದಿಲ್ಲ.
— Dr H.C.Mahadevappa (@CMahadevappa) August 23, 2022
ಹಿಂದು ಮುಸ್ಲಿಂ ಕ್ರೈಸ್ತ ಎನ್ನದೇ ಎಲ್ಲರ ಬದುಕನ್ನೂ ಮುಳುಗಿಸುತ್ತಿರುವ ಬಿಜೆಪಿ ಹಾಗೂ ಕೋಮುವಾದಿ ಸಂಘಟನೆಗಳ ವಿರುದ್ಧ ನಡೆಯಲಿರುವ ದಲಿತ ಸಂಘಟನೆಗಳ ಐಕ್ಯತಾ ಹೋರಾಟಕ್ಕೆ ಇನ್ನು ಮುಂದೆ ಕರ್ನಾಟಕ ರಾಜ್ಯವು ಅಕ್ಷರಶಃ ಸಾಕ್ಷಿಯಾಗಲಿದೆ!! pic.twitter.com/mjksNzVniH