ವೇದಗಳ ಕುರಿತ ವಿಚಾರಗೋಷ್ಠಿ ಸಮಾರೋಪ
![ವೇದಗಳ ಕುರಿತ ವಿಚಾರಗೋಷ್ಠಿ ಸಮಾರೋಪ ವೇದಗಳ ಕುರಿತ ವಿಚಾರಗೋಷ್ಠಿ ಸಮಾರೋಪ](https://www.varthabharati.in/sites/default/files/images/articles/2022/08/28/347534-1661691167.jpg)
ಉಡುಪಿ: ಸೋದೆ ವಾದಿರಾಜ ಮಠದ ಅಂಗಸಂಸ್ಥೆಯಾದ ಶ್ರೀಭಾವಿಸಮೀರ ತತ್ವ ಪ್ರಸಾರಣ ಪ್ರತಿಷ್ಠಾನ ಹಾಗೂ ಯೋಗ ಕ್ಷೇಮ ಟ್ರಸ್ಟ್ ಚೆನ್ನೈ ಇದರ ಸಹಯೋಗದಲ್ಲಿ ವೇದ ವಾಂಗ್ಮಯದ ಸಾರ್ವಕಾಲಿಕತೆ ಎಂಬ ವಿಷಯದ ಕುರಿತ ವಿಚಾರಗೋಷ್ಠಿಯ ಸಮಾರೋಪ ಸಮಾರಂಭ ಶನಿವಾರ ಉಡುಪಿಯ ಸೋದೆ ವಾದಿರಾಜ ಮಠದಲ್ಲಿ ನಡೆಯಿತು.
ಸೋದೆ ಶ್ರೀವಾದಿರಾಜ ಮಠದ ಶ್ರೀವಿಶ್ವವಲ್ಲಭ ತೀರ್ಥ ಸ್ವಾಮೀಜಿ, ಭೀಮನಕಟ್ಟೆ ಮಠದ ಶ್ರೀರಘುವರೇಂದ್ರ ತೀರ್ಥ ಸ್ವಾಮೀಜಿ ಹಾಗೂ ಶೀರೂರು ಮಠದ ಶ್ರೀವೇದವರ್ಧನ ತೀರ್ಥ ಸ್ವಾಮೀಜಿ ಆಶೀರ್ವಚನ ನೀಡಿದರು.
ಮುಖ್ಯ ಅತಿಥಿಗಳಾಗಿ ಲಾಲ್ ಬಹಾದ್ದೂರ್ ಶಾಸ್ತ್ರೀ ರಾಷ್ಟ್ರೀಯ ವಿಶ್ವವಿದ್ಯಾ ಲಯದ ಕುಲಪತಿ ಪ್ರೊ.ಮುರಳಿ ಮನೋಹರ ಪಾಠಕ್, ಅಯೋಧ್ಯೆಯ ರಾಮ ಮನೋಹರ ಲೋಹೀಯಾ ವಿಶ್ವವಿದ್ಯಾಲಯದ ಸಂಸ್ಕೃತ ವಿಭಾಗದ ಮಾಜಿ ಅಧ್ಯಕ್ಷ ಪ್ರೊ.ಜ್ವಲಂತಕುಮಾರ ಶಾಸ್ತ್ರೀ ವಿಶೇಷ ಉಪನ್ಯಾಸ ನೀಡಿದರು.
ಅಷ್ಟಾವಧಾನಿ ಸುಬ್ರಹ್ಮಣ್ಯ ಭಟ್ ಉಪನ್ಯಾಸ ನೀಡಿದರು. ಚಿದಾನಂದ ಶಾಸ್ತ್ರೀ, ವಿಷ್ಣು ಹತ್ವಾರ್, ರಾಧಾಕೃಷ್ಣ ಬಿ.ಪ್ರಸಾದ್ ಜೋಶಿ ಪ್ರಬಂಧ ಮಂಡಿಸಿದರು. ನಿಪ್ಪಾಣಿ ಗುರುರಾಜ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು. ಡಾ. ಸುಮನ್ ಆಚಾರ್ಯ ಸ್ವಾಗತಿಸಿದರು. ಜಂಬುಖಂಡಿ ವಾದಿರಾಜ ಆಚಾರ್ಯ ವಂದಿಸಿದರು.