Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಓ ಮೆಣಸೇ
  4. ಓ ಮೆಣಸೇ...

ಓ ಮೆಣಸೇ...

ಪಿ.ಎ. ರೈಪಿ.ಎ. ರೈ30 Aug 2022 12:35 AM IST
share
ಓ ಮೆಣಸೇ...

2024ರ ಲೋಕಸಭೆ ಚುನಾವಣೆಯು ಅರವಿಂದ ಕೇಜ್ರಿವಾಲ್ ಮತ್ತು ನರೇಂದ್ರ ಮೋದಿ ನಡುವೆ ನಡೆಯುವ ಯುದ್ಧವಾಗಲಿದೆ.-ಮನೀಷ್ ಸಿಸೋಡಿಯ, ದಿಲ್ಲಿ ಡಿಸಿಎಂ

ದೇಶದ ಜನತೆಗೆ ಮತ್ತು ಅವರ ಆಶೋತ್ತರಗಳಿಗೆ ಅದರಲ್ಲೇನಾದರೂ ಪಾತ್ರ ಇದ್ದೀತೇ?

ಯಡಿಯೂರಪ್ಪರನ್ನು ಮೂಲೆ ಗುಂಪು ಮಾಡುವ ಪ್ರಶ್ನೆಯೇ ಇಲ್ಲ -ಪ್ರಹ್ಲಾದ್ ಜೋಶಿ, ಕೇಂದ್ರ ಸಚಿವ
ಮೂಲೆ ಗುಂಪು ಮಾಡಿ ಕಡೆಗಣಿಸುವುದಕ್ಕೆ ಅವರೇನು ಬೊಮ್ಮಾಯಿಯೇನು?

ಸಿಎಂ ಬೊಮ್ಮಾಯಿ ಮತ್ತು ನಾನು ಅಣ್ಣ-ತಮ್ಮ ಇದ್ದಂತೆ.-ಆರ್.ಅಶೋಕ್, ಸಚಿವ

ಯಾರು ಅಣ್ಣ ಯಾರು ತಮ್ಮ ಎಂಬುದನ್ನು ಈಗಲೇ ಇತ್ಯರ್ಥ ಮಾಡಿಕೊಳ್ಳಿ. ಯುದ್ಧ ಸ್ಫೋಟಕ್ಕೆ ಆ ಕಾರಣವೂ ಸಾಕಾಗಿ ಬಿಡುತ್ತದೆ.

ರಾಜ್ಯದಲ್ಲಿ ಎರಡು ರಾಷ್ಟ್ರೀಯ ಪಕ್ಷಗಳ ನಡುವೆ ಜೆಡಿಎಸ್ ಮುಕ್ಕಣ್ಣನಿಗೆ ಮೂರನೇ ಕಣ್ಣು ಇದ್ದಂತೆ -ಸಿ.ಎಂ.ಇಬ್ರಾಹೀಂ, ಜೆಡಿಎಸ್ ರಾಜ್ಯಾಧ್ಯಕ್ಷ

ತನ್ನನ್ನು ನಂಬಿದವರನ್ನು ಮಣ್ಣು ಮುಕ್ಕಿಸುವ ಮುಕ್ಕಣ್ಣನ ದಾಖಲೆಯನ್ನು ಜನ ಮರೆತಿಲ್ಲ.

ಜೀವನದಲ್ಲಿ ವೌಲ್ಯಗಳನ್ನು ಅರ್ಥ ಮಾಡಿಕೊಳ್ಳುವ ಜ್ಞಾನ ಪ್ರತಿಯೊಬ್ಬರಿಗೂ ಗೊತ್ತಿರಬೇಕು -ಎಸ್.ಎಲ್.ಭೈರಪ್ಪ, ಸಾಹಿತಿ
ಅದಕ್ಕೆ ಮನುಸ್ಮತಿಯನ್ನು ಓದಬೇಕು ಅಂತೀರಾ?

ಕಾಶ್ಮೀರ ಸಮಸ್ಯೆ ಪರಿಹಾರಕ್ಕೆ ಯುದ್ಧ ಎಂದಿಗೂ ಪರಿಹಾರವಲ್ಲ.
-ಶಹಬಾಝ್ ಶರೀಫ್, ಪಾಕ್ ಪ್ರಧಾನಿ
ಎಷ್ಟು ಯುದ್ಧಗಳಲ್ಲಿ ಸೋತ ಮೇಲೆ ಮೂಡಿದ ವಿವೇಕ ಇದು?

ಸಿದ್ದರಾಮಯ್ಯರ ಕಾರಿನ ಮೇಲೆ ಡಿಕೆಶಿಯೇ ಮೊಟ್ಟೆ ಹೊಡೆಸಿರಬಹುದು -ನಳಿನ್ ಕುಮಾರ್ ಕಟೀಲು, ಸಂಸದ
ಅವರಿಗೆ ಅವಕಾಶ ಸಿಕ್ಕಿದ್ದರೆ ಅವರೇನು ಕೇವಲ ಮೊಟ್ಟೆಯಲ್ಲಿ ತೃಪ್ತಿ ಪಡುತ್ತಿದ್ದರೇ?

ಕೊಡಗಿಗೆ ಟಿಪ್ಪುಸುಲ್ತಾನ್ ಬಂದಾಗಲೇ ಕೊಡವರು ಹೆದರಲಿಲ್ಲ, ಇನ್ನು ಸಿದ್ದರಾಮಯ್ಯ ಬಂದರೆ ಹೆದರುತ್ತೇವಾ? -ಪ್ರತಾಪಸಿಂಹ, ಸಂಸದ
ಮುದಿ ಟಗರಿಗೆ ಇಷ್ಟೊಂದು ಹೆದರಿದವರು ಯುವ ಹುಲಿಗೆ ಎಷ್ಟು ಹೆದರಿರಬಹುದು!

ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ನಿಭಾಯಿಸುವುದಕ್ಕೆ ಹತ್ತಾರು ಜನರಿಗೆ ಯೋಗ್ಯತೆ ಇದೆ. ನನಗೆ ಆ ಜವಾಬ್ದಾರಿ ಸಿಕ್ಕಿದರೆ ನಿಭಾಯಿಸುತ್ತೇನೆ
-ಸುನೀಲ್ ಕುಮಾರ್, ಸಚಿವ
ಅಷ್ಟೇಕೆ ಆತುರ? ಈಗ ಉಳ್ಳವರು ವಿರಮಿಸುವ ತನಕವಾದರೂ ಕಾಯಿರಿ.

ಚಿರತೆ ಕಾರ್ಯಾಚರಣೆ ನಡೆಯುವ ಸ್ಥಳಕ್ಕೆ ಹೋಗಲು ನನಗೆ ಭಯವಾಗುತ್ತದೆ. ಹೀಗಾಗಿ ಅಲ್ಲಿಗೆ ನಾನು ಹೋಗುವುದಿಲ್ಲ. -ಉಮೇಶ್ ಕತ್ತಿ, ಸಚಿವ

ಧೈರ್ಯವಾಗಿ ಹೋಗಿ ಸಾರ್. ಚಿರತೆ ಕಾರ್ಯಾಚರಣೆಯ ವೇಳೆ ಕತ್ತೆಗಳಿಗೆ ಯಾವುದೇ ಅಪಾಯವಿಲ್ಲ.

ಹಿಂದೆಂದೂ ಇಲ್ಲದ ರೀತಿಯಲ್ಲಿ ಭಾರತದಲ್ಲಿ ವಿಧ್ವಂಸಕ ಕೃತ್ಯಗಳನ್ನು ನಡೆಸಲು ಉಗ್ರಗಾಮಿ ಬಣಗಳು ಸಂಚು ರೂಪಿಸಿವೆ.
-ಅಮಿತ್ ಶಾ, ಕೇಂದ್ರ ಸಚಿವ
ನೀವು ದೇಶದೊಳಗಿನ ಚುನಾಯಿತ ಸರಕಾರಗಳನ್ನು ಬೀಳಿಸುತ್ತಿರುವುದು ಆ ಸಂಚಿನ ಭಾಗ ಅಲ್ಲತಾನೇ?


ಜನರಿಗೆ ಸ್ವಾತಂತ್ರ ಹೋರಾಟದ ಅರಿವೇ ಇಲ್ಲ. -ಯಡಿಯೂರಪ್ಪ, ಮಾಜಿ ಸಿಎಂ
ಇದ್ದಿದ್ದರೆ ಭ್ರಷ್ಟ ಫುಡಾರಿಗಳ ದಾಸ್ಯವನ್ನು ಸ್ವೀಕರಿಸುತ್ತಿರಲಿಲ್ಲ.

ಕೇಂದ್ರ ಸರಕಾರವು ಸಮಯಕ್ಕೆ ಸರಿಯಾಗಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿಲ್ಲ -ನಿತಿನ್ ಗಡ್ಕರಿ, ಕೇಂದ್ರ ಸಚಿವ
ನೀವೂ ಅಷ್ಟೇ. ಯಾವಾಗಲೋ ಹೇಳಬೇಕಾಗಿದ್ದ ಇಂತಹ ಮಾತನ್ನು ಈಗ ಹೇಳುತ್ತಿದ್ದೀರಲ್ಲಾ!

ಮುಸ್ಲಿಮರನ್ನು ಭಾವನಾತ್ಮಕವಾಗಿ, ಮಾನಸಿಕವಾಗಿ ಶೋಷಿಸುವುದೇ ಬಿಜೆಪಿಯ ನೀತಿ -ಅಸದುದ್ದೀನ್ ಉವೈಸಿ, ಸಂಸದ
ಅವರು ನಿಮ್ಮ ಬಗ್ಗೆ ಹೇಳಿದ್ದನ್ನೇ ನೀವು ಪುನರಾವರ್ತಿಸುತ್ತಿದ್ದೀರಿ. ನಿಮ್ಮ ಕಡೆಯಿಂದ ಏನಾದರೂ ಹೇಳಿ.

ದೈವ ಸಂಕಲ್ಪಇದ್ದರೆ ಯಾರು ಬೇಕಾದರೂ ಸಿಎಂ ಆಗಬಹುದು
-ಕುಮಾರಸ್ವಾಮಿ, ಮಾಜಿ ಸಿಎಂ
ಈ ಹಿಂದೆ ನೀವು ಸಿಎಂ ಆಗಿದ್ದನ್ನು ನೆನಪಿಸಿಕೊಂಡಾಗಲೆಲ್ಲಾ ಜನರು ದೇವ ಸಂಕಲ್ಪವನ್ನು ಬಯ್ಯಲಾರಂಭಿಸ್ತಾರೆ.

ಆಂಧ್ರಪ್ರದೇಶದಲ್ಲಿ ಸಿಎಂ ಜಗನ್‌ಮೋಹನ್ ರೆಡ್ಡಿ ಗಢ ಗಢ ನಡುಗುವ ಕಾಲ ಸನ್ನಿಹಿತವಾಗಿದೆ
-ಸೋನು ವೀರಾಜು, ಆಂಧ್ರ ಬಿಜೆಪಿ ಅಧ್ಯಕ್ಷ
ಅಷ್ಟು ದೊಡ್ಡ ಸಂಖ್ಯೆಯಲ್ಲಿ ಸೂಟ್ ಕೇಸ್‌ಗಳು ಅಲ್ಲಿಗೆ ತಲುಪಿವೆಯೇ?

ಆರೆಸ್ಸೆಸ್ ಭಾರತವನ್ನು ಇಡೀ ವಿಶ್ವಕ್ಕೆ ಮಾದರಿಯಾಗಿಸಲು ಶ್ರಮಿಸುತ್ತಿದೆ -ಮೋಹನ್ ಭಾಗವತ್, ಆರೆಸ್ಸೆಸ್ ಸರಸಂಘ ಚಾಲಕ
ಶ್ರೀಲಂಕಾ ಮಾದರಿಯನ್ನು ಜಗತ್ತು ನೋಡಿದೆ. ಈಗ ಇನ್ನೊಂದು ಮಾದರಿಯ ಅಗತ್ಯವೇನಿದೆ?

ನನಗೆ ಹೊಂದಾಣಿಕೆ ರಾಜಕಾರಣ ಗೊತ್ತಿಲ್ಲ, ಆ ರೀತಿ ಮಾಡಿದ್ದರೆ ಇಂದು ನಾನು ಸಿಎಂ ಆಗಿರುತ್ತಿದ್ದೆ.
-ಬಸನಗೌಡ ಪಾಟೀಲ್ ಯತ್ನಾಳ್, ಶಾಸಕ
ಗೊತ್ತಿಲ್ಲದೇ ಇಷ್ಟೆಲ್ಲಾ ಹೊಂದಾಣಿಕೆ ಮಾಡಿಕೊಂಡವರು, ಗೊತ್ತಿದ್ದರೆ ಏನೆಲ್ಲಾ ಮಾಡುತ್ತಿದ್ದಿರೋ!

ಬಿಜೆಪಿ ತನ್ನ ಅಧಿಕಾರವನ್ನು ಉಳಿಸಿಕೊಳ್ಳುವ ಕೊನೆಯ ಪ್ರಯತ್ನವಾಗಿ ಸಾವರ್ಕರ್ ಹೆಸರನ್ನು ಬಳಸುತ್ತಿದೆ.
-ಅಖಿಲ ಭಾರತ ಹಿಂದೂ ಮಹಾಸಭಾ
ಅವರ ಬತ್ತಳಿಕೆಯಲ್ಲಿ ಅಸ್ತ್ರಗಳ ಕೊರತೆ ಇಲ್ಲ. ಅವರು ಗೋಡ್ಸೆಯನ್ನು ಇನ್ನೂ ಪೂರ್ಣ ಪ್ರಮಾಣದಲ್ಲಿ ಬಳಸಿಕೊಂಡಿಲ್ಲ.

ಮದ್ರಸಗಳಿಗೆ ಭೇಟಿ ನೀಡಿ ಅಲ್ಲಿ ಮಕ್ಕಳಿಗೆ ‘ಶಿಕ್ಷಣ ಹಕ್ಕು ಕಾಯ್ದೆ’ ಅನುಸಾರ ಶಿಕ್ಷಣ ದೊರೆಯುತ್ತಿದೆಯೇ ಎಂಬುದನ್ನು ಪರಿಶೀಲನೆ ನಡೆಸಲಾಗುವುದು -ಬಿ.ಸಿ.ನಾಗೇಶ್, ಸಚಿವ
ಪ್ರಜ್ಞಾ ಠಾಕೂರ್ ಎಂಬ ಭಯೋತ್ಪಾದಕಿ ಈ ಪೈಕಿ ಯಾವ ಮದ್ರಸದಲ್ಲಿ ಕಲಿತದ್ದೆಂದು ಕಂಡು ಹಿಡಿಯಿರಿ.

share
ಪಿ.ಎ. ರೈ
ಪಿ.ಎ. ರೈ
Next Story
X