ಮಂಗಳೂರು: ಪ್ರೆಸಿಡೆನ್ಸಿ ಕಾಲೇಜ್ ಆವರಣದಲ್ಲಿ ಉಚಿತ ಆರೋಗ್ಯ ಶಿಬಿರ

ಮಂಗಳೂರು: ಪ್ರೆಸಿಡೆನ್ಸಿ ಶಾಲೆ ಮತ್ತು ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ನಡೆದ ಸತತ ಎರಡನೇ ವರ್ಷದ ಉಚಿತ ಆರೋಗ್ಯ ಶಿಬಿರವನ್ನು ಸುಮಾರು 1500 ಜನರ ಉಪಸ್ಥಿತಿಯಲ್ಲಿ ನೆರವೇರಿಸಲಾಯಿತು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಂಗಳೂರಿನ ಮಹಾನಗರ ಪಾಲಿಕೆಯ ಮೇಯರ್ ಪ್ರೇಮಾನಂದ ಶೆಟ್ಟಿ ಆಗಮಿಸಿದ್ದರು. ಇವರೊಂದಿಗೆ ಮಂಗಳೂರಿನ ಕಾರ್ಪೋರೇಟರ್ ಭಾಸ್ಕರ ಮೊಯ್ಲಿ, ನೀರುಮಾರ್ಗ ಗ್ರಾಮ ಪಂ. ಅಧ್ಯಕ್ಷೆ ಧನವಂತೆ. ವಿ, ಉಪಾಧ್ಯಕ್ಷೆ ಯಶೋಧ ಜಿ, ಪಂಚಾಯಿತಿ ಸದಸ್ಯರಾದ ಮೈಕಲ್ ಅಂತೋನಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಮೇಯರ್ ಕಾರ್ಯಕ್ರಮ ಉದ್ಘಾಟಿಸಿದರು.
ಪ್ರೆಸಿಡೆನ್ಸಿ ಶಾಲೆ (ಸಿ.ಬಿ.ಎಸ್.ಇ) ಮತ್ತು ಪದವಿ ಪೂರ್ವ ವಸತಿ ಕಾಲೇಜು, ಸುಮಾರು 45 ವರುಷಗಳಿಂದ ಸಮಾಜಕ್ಕೆ ಉತ್ತಮ ಸೇವೆಯನ್ನು ನೀಡುತ್ತ ಬರುತ್ತಿದೆ. ಶಾಲೆಯು Pre KG - Grade XII ತನಕ CBSE ಪಟ್ಯಕ್ರಮವನ್ನು ಹೊಂದಿರುತ್ತದೆ ಮತ್ತು ಪಿ ಯು ಮಕ್ಕಳಿಗೆ JEE, NEET ತರಗತಿಗಳನ್ನು ನಡೆಸುತ್ತಿದೆ.
ಮೇಯರ್ ಅವರು ಶಾಲೆ ಮತ್ತು ಕಾಲೇಜಿನ ಸಮಾಜಮುಖಿ ಕಾರ್ಯಕ್ರಮಗಳನ್ನು ಪ್ರಶಂಸೆ ವ್ಯಕ್ತಪಡಿಸಿ ಮುಂದೆಯೂ ಒಳ್ಳೆಯ ಕಾರ್ಯಕ್ರಮಗಳನ್ನು ನಡೆಸುವಂತೆ ಸಲಹೆ ನೀಡಿದರು.