ನಾವು ಬೆಂಬಲ ಕೇಳದಿದ್ದರೂ ಜೆಡಿಎಸ್ ನಮ್ಮನ್ನು ಬೆಂಬಲಿಸಿದೆ: ಸಚಿವ ಎಸ್.ಟಿ.ಸೋಮಶೇಖರ್
ಮೈಸೂರು ಮೇಯರ್ ಚುನಾವಣೆ
ಮೈಸೂರು: 'ನಾವು ಜೆಡಿಎಸ್ ಪಕ್ಷದ ಬೆಂಬಲ ಕೋರಿರಲಿಲ್ಲ ಅವರೇ ನಮಗೆ ಬೆಂಬಲ ಸೂಚಿಸಿ ಸಹಕಾರ ನೀಡಿದ್ದಾರೆ. ಉಪ ಮೇಯರ್ ಸ್ಥಾನ ಜೆಡಿಎಸ್ ಕೈ ತಪ್ಪಿದ್ದಕ್ಕೆ ಬಿಜೆಪಿ ಕೈವಾಡವಿಲ್ಲ' ಎಂದು ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದರು.
ಮೇಯರ್ ಆಯ್ಕೆ ನಂತರ ಮಂಗಳವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜೆಡಿಎಸ್ ಉಪ ಮೇಯರ್ ಆಯ್ಕೆವಿಚಾರದಲ್ಲಿ ಬಿಜೆಪಿ ಕೈವಾಡ ಇಲ್ಲ, ಬಿಸಿಎಂ ಸ್ಥಾನಕ್ಕೆ ನಿಗದಿಯಾಗಿದ್ದ ಉಪಮೇಯರ್ ಗೆ ಜೆಡಿಎಸ್ ಅಭ್ಯರ್ಥಿ ಬಿಸಿಎಂ ಸರ್ಟಿಫಿಕೇಟ್ ನೀಡದೇ ಇರುವುದೇ ಕಾರಣ. ಹಾಗಾಗಿ ಇದರಲ್ಲಿ ನಮ್ಮ ಯಾವುದೇ ಪಾತ್ರ ಇಲ್ಲ ಎಂದು ಹೇಳಿದರು.
ಒಗ್ಗಟ್ಟಾಗಿ ಕೆಲಸ ಮಾಡಿದರೆ ಎಲ್ಲಾ ಸ್ಥಾನವನ್ನು ಪಡೆಯಬಹುದು ಎಂಬುದಕ್ಕೆ ಮೈಸೂರು ಮೇಯರ್, ಉಪಮೇಯರ್ ಬಿಜೆಪಿ ಪರವಾಗಿರುವುದೇ ಕಾರಣ. ಹಾಗಾಗಿ ನಾವು ಒಗ್ಗಟ್ಟಿನಿಂದ ಕೆಲಸ ಮಾಡಿದ್ದೇವೆ ಎಂದರು.
ನಾವು ಜೆಡಿಎಸ್ ಪಕ್ಷದವರ ಬೆಂಬಲ ಕೋರಿರಲಿಲ್ಲ, ನಾವು ಸಾಮನ್ಯ ಕ್ಷೇತ್ರಕ್ಕೆ ನಾಯಕ ಸಮುದಾಯದ ವ್ಯಕ್ತಿಯನ್ನು ಕಣಕ್ಕೆ ಇಳಿಸಿದ್ದರಿಂದ ಜೆಡಿಎಸ್ ನವರು ನಮಗೆ ಬಬಲ ಸೂಚಿಸಿದ್ದಾರೆ ಎಂದು ಹೇಳಿದರು.
ಇದನ್ನೂ ಓದಿ: ಮೈಸೂರು ಮಹಾನಗರ ಪಾಲಿಕೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ: ಮೇಯರ್ ಆಗಿ ಬಿಜೆಪಿಯ ಶಿವಕುಮಾರ್ ಆಯ್ಕೆ