Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಗೌತಮ್ ಅದಾನಿ ಸಂಪತ್ತು 141.4 ಶತಕೋಟಿ...

ಗೌತಮ್ ಅದಾನಿ ಸಂಪತ್ತು 141.4 ಶತಕೋಟಿ ಡಾಲರ್‌ಗೆ ಏರಿಕೆ

ವಾರ್ತಾಭಾರತಿವಾರ್ತಾಭಾರತಿ6 Sept 2022 9:25 PM IST
share
ಗೌತಮ್ ಅದಾನಿ ಸಂಪತ್ತು 141.4 ಶತಕೋಟಿ ಡಾಲರ್‌ಗೆ ಏರಿಕೆ

ಹೊಸದಿಲ್ಲಿ,ಸೆ.6: ಭಾರತದ ಉದ್ಯಮ ದಿಗ್ಗಜ ಗೌತಮ್ ಅದಾನಿ ಶ್ರೀಮಂತಿಕೆಯಲ್ಲಿ ವಾರೆನ್‌ಬಫೆಟ್, ಬಿಲ್‌ಗೇಟ್ಸ್ ಅವರನ್ನು ಹಿಂದಿಕ್ಕಿದ್ದು ಜಗತ್ತಿನ ಮೂರನೆ ಅತಿ ದೊಡ್ಡ ಕುಬೇರನೆನಿಸಿಕೊಂಡಿದ್ದಾರೆ. ಇದೀಗ ಅವರು ಜೆಫ್‌ಬೆಜೊಸ್ ಹಾಗೂ ಎಲೊನ್ ಮಸ್ಕ್ ಅರ ಸಂಪತ್ತಿಗೂ ಸರಿಸಾಟಿಯಾಗುವತ್ತ ನಾಗಾಲೋಟದಿಂದ ಸಾಗುತ್ತಿದ್ದಾರೆಂದು ಖ್ಯಾತ ವಾಣಿಜ್ಯ ವಿಷಯಗಳ ಸುದ್ದಿಸಂಸ್ಥೆ ಬ್ಲೂಮ್‌ಬರ್ಗ್ ವರದಿ ಮಾಡಿದೆ.

  ಕೊರೋನಾ ಹಾವಳಿಯ ಬಳಿಕ ಜಗತ್ತಿನ ಹಲವಾರು ಭಾರೀ ಶ್ರೀಮಂತರ ಸಂಪತ್ತಿನ ಏರಿಕೆಯಲ್ಲಿ ಹಿಂಜರಿತವುಂಟಾಗಿದೆಯಾದರೂ, ಇದೇ ಸಂದರ್ಭದಲ್ಲಿ ಅದಾನಿಯವರ ಒಟ್ಟು ಸಂಪತ್ತಿನ ಮೌಲ್ಯವು ದುಪ್ಪಟ್ಟು ಹೆಚ್ಚಳವಾಗಿದ್ದು, 64.8 ಶತಕೋಟಿ ಡಾಲರ್‌ಗಳಿಂದ 141.4 ಶತಕೋಟಿ ಡಾಲರ್‌ಗೆ ಏರಿಕೆಯಾಗಿದೆ. ಆ ಮೂಲಕ ಅವರು ಜಗತ್ತಿನ ಮೂರನೇ ಅತಿ ದೊಡ್ಡ ಶ್ರೀಮಂತನ ಸ್ಥಾನವನ್ನು ಆಲಂಕರಿಸಿದ್ದಾರೆಂದು ಬ್ಲೂಮ್‌ಬರ್ಗ್‌ನ ಶತಕೋಟ್ಯಾಧೀಶರ ಸೂಚ್ಯಂಕದ ಕುರಿತಾದ ವರದಿ ತಿಳಿಸಿದೆ.

  ಅದಾನಿಯ ಸಂಪತ್ತು ಶರವೇಗದಲ್ಲಿ ಹೆಚ್ಚುತ್ತಿರುವುದು ಅವರ ಕಂಪೆನಿಗಳ ಮೌಲ್ಯಮಾಪನದ ಅವಶ್ಯಕತೆಯನ್ನು, ತನ್ನ ಉದ್ಯಮ ಸಾಮ್ರಾಜ್ಯವನ್ನು ನಿಯಂತ್ರಿಸಲು ಅವರು ಅನುಸರಿಸುತ್ತಿರುವ ಕ್ರಮಗಳು ಹಾಗೂ ಭಾರತ ಸರಕಾರದ ಜೊತೆ ಅವರಿಗಿರುವ ನಂಟಿನ ಬಗ್ಗೆ ಹೊಸ ಚರ್ಚೆಗೆ ಎಡೆ ಮಾಡಿಕೊಟ್ಟಿದೆ ಎಂದು ವರದಿ ಹೇಳಿದೆ.

     ಗೌತಮ್ ಆದಾನಿ ಒಡೆತನದ ‘ಅದಾನಿ ಗ್ರೀನ್ ಎನರ್ಜಿ ಲಿಮಿಟೆಡ್’ ಹಾಗೂ ‘ಅದಾನಿ ಟೋಟಲ್ ಗ್ಯಾಸ್ ಲಿಮಿಟೆಡ್’ 750ಕ್ಕೂ ಪಟ್ಟು ಅಧಿಕ ಲಾಭವನ್ನು ಕಾಣುತ್ತಿದೆ. ಇದೇ ವೇಳೆ ಅದಾನಿ ಎಂಟರ್‌ಪ್ರೈಸಸ್ ಲಿಮಿಟೆಡ್ ಹಾಗೂ ಅದಾನಿ ಟ್ರಾನ್ಸ್‌ಮಿಶನ್ ಲಿಮಿಟೆಡ್‌ನ ಮೌಲ್ಯವು 400 ಪಟ್ಟು ಹೆಚ್ಚಳವಾಗಿದೆ. ಇದಕ್ಕೆ ಹೋಲಿಸಿದರೆ ಮಸ್ಕ್ ಅವರ ವಾಹನ ಉದ್ಯಮ ಕಂಪೆನಿ ಟೆಸ್ಲಾ ಹಾಗೂ ಬೆರೆಸ್ ಅವರ ಆನ್‌ಲೈನ್ ಮಾರ್ಕೆಟಿಂಗ್ ಕಂಪೆನಿ ಅಮೆಝಾನ್‌ನ ಆದಾಯದಲ್ಲಿ 100 ಪಟ್ಟು ಹೆಚ್ಚಳವಾಗಿದೆ. ಭಾರತದ ಇನ್ನೋರ್ವ ಬಿಲಿಯಾಧೀಶ ಉದ್ಯಮಿ ಮುಕೇಶ್ ಅಂಬಾನಿಯವರ ರಿಲಾಯನ್ಸ್ ಇಂಡಸ್ಟ್ರೀಸ್‌ನ ಲಿಮಿಟೆಡ್‌ನ ವ್ಯಾಪಾರದಲ್ಲಿ 28 ಪಟ್ಟು ಹೆಚ್ಚಳವಾಗಿದೆ ಎಂದು ಬ್ಲೂಮ್‌ಬರ್ಗ್ ವರದಿ ಗಮನಸೆಳೆದಿದೆ.

  ಹಲವು ವರ್ಷಗಳಿಂದ ಇಂಧನ, ಗಣಿಗಾರಿಕೆ ಕ್ಷೇತ್ರದಲ್ಲಿ ಬಹುತೇಕವಾಗಿ ಹೂಡಿಕೆ ಮಾಡುತ್ತಿದ್ದ ಗೌತಮ್ ಆದಾನಿ ಇತ್ತೀಚಿನ ವರ್ಷಗಳಲ್ಲಿ ತನ್ನ ಉದ್ಯಮವನ್ನು ಬಂದರು,ವಿಮಾನನಿಲ್ದಾಣ ಸೇರಿದಂತೆ ವಿವಿಧ ಉದ್ಯಮಗಳಿಗೆ ವಿಸ್ತರಿಸಿರುವುದರ ಬಗ್ಗೆ ಬ್ಲೂಮ್‌ಬರ್ಗ್ ವರದಿ ಗಮನಸೆಳೆದಿದೆ. ಕಳೆದ ವರ್ಷ ಕ್ರೆಡಿಟ್ ಸೈಟ್ಸ್ ಸಂಸ್ತೆಯ ವರದಿಯೊಂದು ಅದಾನಿಯವರ ಭಾರೀ ಸಾಲದೊಂದಿಗೆ ತನ್ನ ಉದ್ಯಮ ಸಾಮ್ರಾಜ್ಯವನ್ನು ವಿಸ್ತರಿಸುತ್ತಿರುವುದು ಹಾಗೂ ವ್ಯಾಪಕವಾಗಿ ಹೂಡಿಕೆಗಳನ್ನು ಮಾಡುತ್ತಿರವ ಬಗ್ಗೆ ಆತಂಕ ವ್ಯಕ್ತಪಡಿಸಿತ್ತು.

         ‘‘ಅದಾನಿಯವರು ಆಕ್ರಮಣಕಾರಿಯಾದ ರೀತಿಯಲ್ಲಿ ರಿಸ್ಕ್ ತೆಗೆದುಕೊಳ್ಳುವ ಮೂಲಕ, ತ್ವರಿತವಾಗಿ ಸಾಲವನ್ನು ಸಂಪಾದಿಸುವ ಮೂಲಕ ಹಾಗೂ ಸರಕಾರದ ಜೊತೆಗಿನ ಚಾಣಾಕ್ಷತನದ ನಂಟಿನ ಮೂಲಕ ಅದಾನಿ ಅಸಾಧಾರಣವಾದ ಸಂಪತ್ತಿನ ಸಾಮ್ರಾಜ್ಯವನ್ನು ಸೃಷ್ಟಿಸಿದ್ದಾರೆ ಎಂದು ಭಾರತದಲ್ಲಿನ ಶ್ರೀಮಂತರು ಹಾಗೂ ಅಸಮಾನತೆಯ ಬಗ್ಗೆ ಬೆಳಕುವ ಚೆಲ್ಲುವ ‘ ದಿ ಬಿಲಯನೇರ್ ರಾಜ್’ನ ಲೇಖಕ ಜೇಮ್ಸ್ ಕ್ರಾಬ್‌ಟ್ರೀ ತಿಳಿಸಿರುವುದನ್ನು ಬ್ಲೂಮ್‌ಬರ್ಗ್ ವರದಿಯಲ್ಲಿ ಪ್ರಸ್ತಾವಿಸಿದೆ. ‘‘ ಕೇವಲ ಒಂದು ದಶಕದ ಅವಧಿಯಲ್ಲಿ ಅದಾನಿ ಶ್ರೀಮಂತಿಕೆ ಶೃಂಗಕ್ಕೇರಿರುವುದು ಹಾಗೂ ಏಶ್ಯದ ಉದ್ಯಮ ದಿಗ್ಗಜಗರ ಪಟ್ಟಿಯಲ್ಲಿ ಸ್ಥಾನ ಪಡೆದಿರುವುದು ಆಧುನಿಕ ಭಾರತದಲ್ಲಿ ವ್ಯಾಪಕವಾದ ಅಸಮಾನತೆಯನ್ನು ಪ್ರತಿನಿದಿಸುತ್ತದೆ’’ ಎಂದು ಜೇಮ್ಸ್ ಕ್ರಾಬ್‌ಟ್ರೀ ಬಣ್ಣಿಸಿರುವುದನ್ನು ಕೂಡಾ ಬ್ಲೂಮ್‌ಬರ್ಗ್ ವರದಿಯಲ್ಲಿ ಉಲ್ಲೇಖಿಸಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X