Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಜೀವ ಉಳಿಸುವ ಪ್ರಥಮ ಚಿಕಿತ್ಸೆ

ಜೀವ ಉಳಿಸುವ ಪ್ರಥಮ ಚಿಕಿತ್ಸೆ

ಇಂದು ವಿಶ್ವ ಪ್ರಥಮ ಚಿಕಿತ್ಸೆ ಜಾಗೃತಿ ದಿನ

ಡಾ. ಮುರಲೀ ಮೋಹನ್ ಚೂಂತಾರುಡಾ. ಮುರಲೀ ಮೋಹನ್ ಚೂಂತಾರು10 Sept 2022 11:11 AM IST
share
ಜೀವ ಉಳಿಸುವ ಪ್ರಥಮ ಚಿಕಿತ್ಸೆ

ಯಾವುದೇ ರೀತಿಯ ಗಾಯ ಅಥವಾ ಅಪಘಾತಗಳಾದಾಗ ತಕ್ಷಣವೇ ಘಾಸಿಗೊಳಗಾದವರಿಗೆ ನೀಡುವ ಪ್ರಾಥಮಿಕವಾದ ಸಹಾಯವನ್ನು ಪ್ರಥಮ ಚಿಕಿತ್ಸೆ ಎನ್ನಲಾಗುತ್ತದೆ. ಇದಕ್ಕೆ ವಿಶೇಷವಾದ ತರಬೇತಿ ಅಥವಾ ಪೂರ್ವ ತಯಾರಿ ಅಗತ್ಯವಿಲ್ಲ. ಸಾಮಾನ್ಯ ಜ್ಞಾನವನ್ನು ಬಳಸಿಕೊಂಡು ಆ ಕ್ಷಣದಲ್ಲಿ ಲಭ್ಯವಿರುವ ವಸ್ತುಗಳನ್ನು ಬಳಸಿಕೊಂಡು ರೋಗಿಯ ಪ್ರಾಣವನ್ನು ರಕ್ಷಿಸುವ ಕಾರ್ಯವನ್ನು ಮಾಡಲಾಗುತ್ತದೆ. ವೈದ್ಯರ ಲಭ್ಯತೆ ಸಿಗುವವರೆಗೆ ಅಥವಾ ಸುಸಜ್ಜಿತವಾದ ಆಸ್ಪತ್ರೆ ತಲುಪುವವರೆಗೆ ರೋಗಿಯ ಪ್ರಾಣಕ್ಕೆ ಕುತ್ತು ಬರದಂತೆ ಮಾಡುವ ತಾತ್ಕಾಲಿಕ ಪರಿಶಮನ ವ್ಯವಸ್ಥೆಯನ್ನು ಪ್ರಥಮ ಚಿಕಿತ್ಸೆ ಎನ್ನಲಾಗುತ್ತದೆ. ಪ್ರಥಮ ಚಿಕಿತ್ಸೆ ನೀಡಲು ನೀವು ವೈದ್ಯರೇ ಆಗಬೇಕಿಲ್ಲ. ಇದಕ್ಕೆ ಸಮಯಪ್ರಜ್ಞೆ,, ಸಾಮಾನ್ಯ ಜ್ಞಾನ ಮತ್ತು ಒಂದಷ್ಟು ಪ್ರಸಂಗಾವಧಾನತೆ ಬಳಸಿಕೊಂಡು ಆ ಕ್ಷಣದಲ್ಲಿ ರೋಗಿಯ ಜೀವವನ್ನು ರಕ್ಷಿಸುವ ಕಾರ್ಯವನ್ನು ಪ್ರಥಮ ಚಿಕಿತ್ಸೆ ತಜ್ಞರು ಮಾಡುತ್ತಾರೆ. ಪ್ರಥಮ ಚಿಕಿತ್ಸೆ ಬಗ್ಗೆ ಜಾಗೃತಿ ಮತ್ತು ಅರಿವು ಮೂಡಿಸುವ ಸಲುವಾಗಿ ವಿಶ್ವದಾದ್ಯಂತ ಪ್ರತಿವರ್ಷ ಸೆಪ್ಟಂಬರ್ ತಿಂಗಳ ಎರಡನೇ ಶನಿವಾರದಂದು ‘ವಿಶ್ವ ಪ್ರಥಮ ಚಿಕಿತ್ಸಾ ದಿನ’ ಎಂದು ಆಚರಿಸಲಾಗುತ್ತದೆ. 2000ನೇ ಇಸವಿಯಲ್ಲಿ ಅಂತರ್‌ರಾಷ್ಟ್ರೀಯ ರೆಡ್‌ಕ್ರಾಸ್ ಸೊಸೈಟಿ ಈ ಆಚರಣೆಯನ್ನು ಜಾರಿಗೆ ತಂದಿದೆ. ಪ್ರತಿಯೊಬ್ಬರಿಗೂ ಪ್ರಥಮ ಚಿಕಿತ್ಸೆ ಬಗ್ಗೆ ಮಾಹಿತಿ ಮತ್ತು ತರಬೇತಿ ದೊರಕಬೇಕು ಎಂಬ ಆಶಯದೊಂದಿಗೆ ಈ ಆಚರಣೆಯನ್ನು ಆರಂಭಿಸಲಾಗಿದೆ. ಅಪಘಾತಗಳಾದಾಗ ರೋಗಿಯ ಪ್ರಾಣಕ್ಕೆ ಕುತ್ತುಬಾರದಂತೆ ಅಥವಾ ಆ್ಯಂಬುಲೆನ್ಸ್ ಬರುವ ವರೆಗೆ ಯಾವುದೇ ಪ್ರಾಣಾಪಾಯವಾಗದಂತೆ ಅಥವಾ ತೀವ್ರ ರಕ್ತಸ್ರಾವವಾಗುವುದನ್ನು ತಪ್ಪಿಸಲು ತಕ್ಷಣವೇ ಪ್ರಥಮ ಚಿಕಿತ್ಸೆ ಮಾಡಲಾಗುತ್ತದೆ. ಈ ರೀತಿ ತಕ್ಷಣವೇ ಪ್ರಥಮ ಚಿಕಿತ್ಸೆ ನೀಡುವುದರಿಂದ ರೋಗಿ ಬೇಗನೆ ಗುಣಮುಖವಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ ಮತ್ತು ರೋಗಿಗೆ ಯಾವುದೇ ರೀತಿಯ ಹೆಚ್ಚಿನ ಮಾರಣಾಂತಿಕ ತೊಂದರೆ ಉಂಟಾಗುವುದನ್ನು ತಪ್ಪಿಸುತ್ತದೆ. ಅಂಕಿ-ಅಂಶಗಳ ಪ್ರಕಾರ ರಸ್ತೆ ಅಪಘಾತಗಳಲ್ಲಿ 25ರಿಂದ 30 ಶೇ. ವ್ಯಕ್ತಿಗಳು ಪ್ರಥಮ ಚಿಕಿತ್ಸೆಯ ಅಲಭ್ಯತೆಯ ಕಾರಣದಿಂದಲೇ ಸಾವನ್ನಪ್ಪುತ್ತಾರೆ ಎಂದೂ ತಿಳಿದು ಬಂದಿದೆ.

  ಒಟ್ಟಿನಲ್ಲಿ ಪ್ರಥಮ ಚಿಕಿತ್ಸೆ ಎನ್ನುವುದು ಯಾವುದೇ ರೀತಿಯ ತುರ್ತು ಅವಘಡ ಅಥವಾ ಆಕಸ್ಮಿಕ ಸಂದರ್ಭಗಳಲ್ಲಿ ರೋಗಿಯ ಪ್ರಾಣಕ್ಕೆ ಕುತ್ತು ಬಂದಾಗ ನೀಡುವಂತಹ ಪ್ರಾಥಮಿಕ ಚಿಕಿತ್ಸೆ ಆಗಿರುತ್ತದೆ. ಅಪಘಾತ ನಡೆದು ಮೊದಲಿನ ಒಂದು ಗಂಟೆಯ ಅವಧಿಯನ್ನು ‘ಗೋಲ್ಡನ್ ಹವರ್’ ಎನ್ನಲಾಗುತ್ತದೆ. ಈ ಸಂದರ್ಭಗಳಲ್ಲಿ ತುರ್ತು ಪ್ರಾಥಮಿಕ ಚಿಕಿತ್ಸೆ ದೊರಕಿದಲ್ಲಿ ರೋಗಿಯ ಪ್ರಾಣವನ್ನು ಉಳಿಸಲು ಖಂಡಿತಾ ಸಾಧ್ಯವಿದೆ. ಅನಗತ್ಯ ರಕ್ತಸ್ರಾವ ಅಥವಾ ಮೆದುಳಿಗೆ ಉಂಟಾಗುವ ಹಾನಿಯನ್ನು ಪ್ರಥಮ ಚಿಕಿತ್ಸೆಯಿಂದ ತಡೆಯಬಹುದು ಎಂದು ಅಂಕಿ-ಅಂಶಗಳಿಂದ ಸಾಬೀತಾಗಿದೆ.

ಪ್ರಥಮ ಚಿಕಿತ್ಸೆ ಹೇಗೆ?

* ಗಾಯಗೊಂಡ ವ್ಯಕ್ತಿಯಿಂದ ತೀವ್ರ ರಕ್ತಸ್ರಾವವಾಗುತ್ತಿದ್ದಲ್ಲಿ ಒತ್ತಡ ಹಾಕಿ ಅಥವಾ ಬಟ್ಟೆಯಿಂದ ಗಾಯವನ್ನು ಸುತ್ತಿ ರಕ್ತಸ್ರಾವವಾಗದಂತೆ ತಡೆಯಬಹುದು.

  * ಗಾಯಗೊಂಡ ವ್ಯಕ್ತಿಯ ಎಲುಬು ಮುರಿತವಾಗಿದ್ದಲ್ಲಿ ಬ್ಯಾಂಡೇಜ್ ಹಾಕಿ ಮತ್ತಷ್ಟು ನೋವು ಮತ್ತು ರಕ್ತಸೋರದಂತೆ ತಡೆಯಬಹುದು. * ಮುಖದ ದವಡೆ ಮುರಿದಿದ್ದಲ್ಲಿ ತಲೆಯ ಸುತ್ತ ಬ್ಯಾಂಡೇಜ್ ಹಾಕಿ ನೋವು ನಿವಾರಿಸಬಹುದು. * ವಿಪರೀತ ಗಾಯದಿಂದ ಬಾಯಿ ಮೂಗಿನಿಂದ ರಕ್ತಸ್ರಾವವಾಗುತ್ತಿದ್ದಲ್ಲಿ ಉಸಿರಾಟದ ತೊಂದರೆ ಉಂಟಾಗುವುದನ್ನು ತಪ್ಪಿಸಲು ನಾಲಿಗೆಯನ್ನು ಹೊರಗೆ ಎಳೆದು ಹೊಲಿಗೆ ಹಾಕಿದಲ್ಲಿ ಅಥವಾ ಎಳೆದು ಹಿಡಿದಲ್ಲಿ ಉಸಿರಾಟ ಸಾಧ್ಯವಾಗಬಹುದು.

* ಗಾಯಗೊಂಡ ವ್ಯಕ್ತಿಯನ್ನು ಒಂದು ಬದಿಗೆ ಮಾಡಿ ಮಲಗಿಸಿದಲ್ಲಿ ಗಾಳಿನಳಿಕೆಗೆ ರಕ್ತ ಹೋಗದಂತೆ ತಡೆಯಬಹುದು ಮತ್ತು ಉಸಿರಾಟದ ತೊಂದರೆಯಾಗದಂತೆ ನೋಡಿ ಕೊಳ್ಳಬಹುದು.

* ನೀರಿನಲ್ಲಿ ಮುಳುಗಿ ವ್ಯಕ್ತಿ ಉಸಿರಾಡದಿದ್ದಾಗ ಬಾಯಿಯಿಂದ ನೀರು ಹೊರತೆಗೆದು ಕೃತಕ ಉಸಿರಾಟವನ್ನು ನೀಡಬಹುದು.

* ಕರೆಂಟ್ ಶಾಕ್ ಹೊಡೆದು ಉಸಿರಾಟ ನಿಂತಿದ್ದಲ್ಲಿ ತಕ್ಷಣವೇ ಎದೆ ಭಾಗವನ್ನು ಒತ್ತಿ ಹೃದಯ ಮರುಚಲನೆಯಾಗುವಂತೆ ಮಾಡಬಹುದು. * ವಿಷಜಂತು ಹಾಗೂ ಹಾವು ಕಚ್ಚಿದಲ್ಲಿ ಗಾಯದ ಮೇಲ್ಭಾಗದಲ್ಲಿ ಬಟ್ಟೆ ಕಟ್ಟಿ ವಿಷ ರಕ್ತಕ್ಕೆ ಸೇರದಂತೆ ತಡೆಯಬಹುದು.

*ಅಪಸ್ಮಾರ ರೋಗಿ ಅಪಸ್ಮಾರ ಬಂದು ಎತ್ತರದ ಜಾಗದಲ್ಲಿ ಇದ್ದರೆ ತಕ್ಷಣವೇ ನೆಲದಲ್ಲಿ ಮಲಗಿಸಿ ಯಾವುದೇ ಅಪಾಯದ ವಸ್ತು ಸಿಗದಂತೆ ನೋಡಿಕೊಳ್ಳಬೇಕು.

 * ಮಕ್ಕಳು ಯಾವುದಾದರೂ ಚೂರಿ, ಪೆನ್ಸಿಲ್, ನಾಣ್ಯ, ರಬ್ಬರ್ ಮುಂತಾದ ವಸ್ತು ಬಾಯಿಯಿಂದ ಗಂಟಲಿಗೆ ಸೇರಿಕೊಂಡಲ್ಲಿ ತಕ್ಷಣವೇ ತಲೆಕೆಳಗೆ ಮಾಡಿ ಬೆನ್ನಿಗೆ ಬಡಿಯುವುದರಿಂದ ಉಸಿರಾಟದ ತೊಂದರೆ ತಡೆಯಬಹುದು.

ಪ್ರಥಮ ಚಿಕಿತ್ಸೆ ಪೆಟ್ಟಿಗೆ

   ಸಾಮಾನ್ಯವಾಗಿ ಪ್ರತಿಯೊಂದು ಮನೆ, ಕಛೇರಿ, ವಾರ್ಡ್, ಸಾರ್ವಜನಿಕ ಸ್ಥಳಗಳಾದ ರೈಲ್ವೇ ನಿಲ್ದಾಣ, ಬಸ್ಸು ನಿಲ್ದಾಣ, ವಿಮಾನ ನಿಲ್ದಾಣ ಹೀಗೆ ಎಲ್ಲ ಕಡೆ ಪ್ರಥಮ ಚಿಕಿತ್ಸೆ ಪೆಟ್ಟಿಗೆ ಲಭ್ಯವಿರುತ್ತದೆ. ಪ್ರಥಮ ಚಿಕಿತ್ಸೆಗೆ ಬೇಕಾಗುವ ಎಲ್ಲಾ ಸಾಮಾನು ಮತ್ತು ಔಷಧಿಗಳು ಇದರಲ್ಲಿ ಇರುತ್ತದೆ.

 1. ಚಿಕ್ಕ, ಮಧ್ಯಮ ಮತ್ತು ದೊಡ್ಡ ಗಾತ್ರದ ಶುಚಿಯಾದ ಸೋಂಕು ರಹಿತ ಡ್ರೆಸ್ಸಿಂಗ್ ಬಟ್ಟೆ.

2. ಎರಡು-ಮೂರು ವಿಧದ ಮತ್ತು ಗಾತ್ರದ ಬ್ಯಾಂಡೇಜ್‌ಗಳು 3. ಶುಚಿಯಾದ ಕೈಚೀಲಗಳು ಮತ್ತು ಚಿಕ್ಕ ಬ್ಯಾಂಡೇಜ್ 4. ಸುಟ್ಟಗಾಯಗಳಿಗೆ ಹಚ್ಚುವ ಔಷಧಿಗಳು

5. ಸೋಂಕು ನಾಶಕ ದ್ರಾವಣಗಳಾದ ಡೆಟ್ಟಾಲ್ ಮತ್ತು ಸೋಂಕು ಬರದಂತೆ ತಡೆಯುವ ಕ್ರೀಮ್‌ಗಳು

6. ಕತ್ತರಿ ಮತ್ತು ಇಕ್ಕಳ

7. ನೋವು ನಿವಾರಕ ಔಷಧಿ ಮತ್ತು ಆ್ಯಂಟಿಬಯೋಟಿಕ್ ಕ್ರೀಮ್‌ಗಳು

8. ಬ್ಯಾಂಡೇಜ್ ಮತ್ತು ಡ್ರೆಸ್ಸಿಂಗ್‌ಗಳನ್ನು ಗಟ್ಟಿಯಾಗಿ ಬಿಗಿದು ಹಿಡಿದಿಟ್ಟುಕೊಳ್ಳುವ ಟೇಪ್‌ಗಳು

    ಒಟ್ಟಿನಲ್ಲಿ ಯಾವುದೇ ಕಛೇರಿ, ಸಾರ್ವಜನಿಕ ಸ್ಥಳ ಮತ್ತು ವಾಹನಗಳಲ್ಲಿ ಕಡ್ಡಾಯವಾಗಿ ಪ್ರಥಮ ಚಿಕಿತ್ಸಾ ಪೆಟ್ಟಿಗೆ ಇರತಕ್ಕದ್ದು. ಯಾವುದೇ ಸಂದರ್ಭಗಳಲ್ಲಿ ಅವಘಡಗಳು ಸಂಭವಿಸಿದಾಗ ತಾತ್ಕಾಲಿಕ ನೋವು ಶಮನ ಮತ್ತು ಸೋಂಕು ಬರದಂತೆ ತಡೆಯಲು ಹಾಗೂ ರಕ್ತಸ್ರಾವ ತಪ್ಪಿಸಲು ಪ್ರಥಮ ಚಿಕಿತ್ಸೆ ಪರಿಕರಗಳು ಬಹಳ ಉಪಯುಕ್ತ ಎಂದು ಸಾಬೀತಾಗಿದೆ.

ಯಾವಾಗ ಪ್ರಥಮ ಚಿಕಿತ್ಸೆ ಅಗತ್ಯ?

*ಅಪಘಾತಗಳಾಗಿ ವ್ಯಕ್ತಿ ರಕ್ತದ ಮಡುವಿನಲ್ಲಿ ಬಿದ್ದಿದ್ದಾಗ ಮತ್ತು ತೀವ್ರ ರಕ್ತಸ್ರಾವವಾಗುತ್ತಿದ್ದಾಗ.

*ಅಪಘಾತಗಳಾಗಿ ವ್ಯಕ್ತಿಯ ಕೈ, ಕಾಲು ಅಥವಾ ಇನ್ನಾವುದೇ ಎಲುಬು ಮುರಿದಿದ್ದಾಗ. ವ್ಯಕ್ತಿ ನೀರಿನಲ್ಲಿ ಮುಳುಗಿ ಉಸಿರಾಡದಿದ್ದಾಗ.

*ಕರೆಂಟ್ ಶಾಕ್ ಹೊಡೆದು ವ್ಯಕ್ತಿ ಉಸಿರಾಡದಿದ್ದಾಗ

*ಅಪಸ್ಮಾರ ರೋಗಿ ಅಪಸ್ಮಾರಕ್ಕೆ ತುತ್ತಾದಾಗ.

 *ಹಾವು ಅಥವಾ ಇನ್ನಾವುದೇ ವಿಷ ಜಂತುಗಳು ಕಚ್ಚಿದಾಗ.

 *ಎತ್ತರದ ಕಟ್ಟಡಗಳಿಂದ ಬಿದ್ದು ಮಾರಣಾಂತಿಕ ಏಟು ತಗುಲಿದಾಗ.

 *ಮಕ್ಕಳು ಆಟವಾಡುವಾಗ. ಪರಸ್ಪರ ಢಿಕ್ಕಿಯಾಗಿ ಸ್ಮತಿ ತಪ್ಪಿದಾಗ.

 *ಮಧುಮೇಹಿ ರೋಗಿಗಳು ಗ್ಲುಕೋಸ್ ಮಟ್ಟ ಕುಸಿದು ಉಸಿರಾಡದೇ ಇದ್ದಾಗ.

share
ಡಾ. ಮುರಲೀ ಮೋಹನ್ ಚೂಂತಾರು
ಡಾ. ಮುರಲೀ ಮೋಹನ್ ಚೂಂತಾರು
Next Story
X