ಪ್ರಧಾನಿ ಮೋದಿ ಉದ್ಘಾಟಿಸಿದ ವಿಜ್ಞಾನ ಸಮಾವೇಶಕ್ಕೆ ಬಿಹಾರ, ಛತ್ತೀಸ್ ಗಢ ರಾಜ್ಯ ಗೈರು

Photo: PTI
ಹೊಸದಿಲ್ಲಿ: ಕೇಂದ್ರ ಸರಕಾರ ಆಯೋಜಿಸುವ ಕಾರ್ಯಕ್ರಮಗಳನ್ನು ತಪ್ಪಿಸಿಕೊಳ್ಳುವ ರಾಜ್ಯಗಳ ಪ್ರವೃತ್ತಿ ಹೆಚ್ಚಾಗುತ್ತಿದ್ದು ಜಾರ್ಖಂಡ್ ಹಾಗೂ ಬಿಹಾರ ರಾಜ್ಯಗಳು ಪ್ರಧಾನಿ ಮೋದಿ ಶನಿವಾರ ಉದ್ಘಾಟಿಸಿದ (Science Conclave Opened By PM Modi)ಕೇಂದ್ರ-ರಾಜ್ಯ ವಿಜ್ಞಾನ ಸಮಾವೇಶಕ್ಕೆ ಗೈರು ಹಾಜರಾಗಲು ನಿರ್ಧರಿಸಿವೆ.
ಕಾರ್ಯಕ್ರಮದಲ್ಲಿ ಎಲ್ಲಾ ಇತರ ರಾಜ್ಯ ಸರಕಾರಗಳು ಭಾಗವಹಿಸುತ್ತಿವೆ ಹಾಗೂ ಈ ಎರಡು ರಾಜ್ಯಗಳ ಅನುಪಸ್ಥಿತಿಗೆ ಅಧಿಕೃತ ಕಾರಣಕ್ಕಾಗಿ ಕಾಯಲಾಗುತ್ತಿದೆ.
ದೇಶದಾದ್ಯಂತ ದೃಢವಾದ ವಿಜ್ಞಾನ, ತಂತ್ರಜ್ಞಾನ ಮತ್ತು ನಾವೀನ್ಯತೆ (ಎಸ್ಟಿಐ) ಪರಿಸರ ವ್ಯವಸ್ಥೆಯನ್ನು ನಿರ್ಮಿಸಲು ಕೇಂದ್ರ-ರಾಜ್ಯ ಸಮನ್ವಯ ಹಾಗೂ ಸಹಯೋಗ ಕಾರ್ಯವಿಧಾನಗಳನ್ನು ಬಲಪಡಿಸುವ ಗುರಿಯನ್ನು ಹೊಂದಿರುವ ಈ ರೀತಿಯ ಮೊದಲ ಸಮಾವೇಶವು ಎರಡು ದಿನಗಳ ಕಾರ್ಯಕ್ರಮವಾಗಿದೆ.
ಕೇಂದ್ರ ಹಾಗೂ ರಾಜ್ಯ ಸರಕಾರಗಳಲ್ಲದೆ, ಉನ್ನತ ಕೈಗಾರಿಕೋದ್ಯಮಿಗಳು, ಯುವ ವಿಜ್ಞಾನಿಗಳು ಹಾಗೂ ನವೋದ್ಯಮಿಗಳು ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ.
ಅಹಮದಾಬಾದ್ನ ಸೈನ್ಸ್ ಸಿಟಿಯಲ್ಲಿ ಆಯೋಜಿಸಲಾದ ಈ ಸಮಾವೇಶವು ಡಿಜಿಟಲ್ ಆರೋಗ್ಯ ರಕ್ಷಣೆ, ರೈತರ ಆದಾಯವನ್ನು ಸುಧಾರಿಸಲು ತಾಂತ್ರಿಕ ಮಧ್ಯಸ್ಥಿಕೆಗಳು, ಶುದ್ಧ ಇಂಧನ ಮತ್ತು ಕುಡಿಯುವ ನೀರನ್ನು ಉತ್ಪಾದಿಸುವ ನಾವೀನ್ಯತೆ ಸೇರಿದಂತೆ ವಿವಿಧ ವಿಷಯಗಳ ಕುರಿತು ಸೆಷನ್ಗಳನ್ನು ಒಳಗೊಂಡಿರುತ್ತದೆ.
ಎರಡೂ ರಾಜ್ಯಗಳಲ್ಲಿನ ರಾಜಕೀಯ ಅಶಾಂತಿಯ ನಡುವೆ ಉಭಯ ರಾಜ್ಯಗಳು ಈ ನಿರ್ಧಾರಕ್ಕೆ ಬಂದಿವೆ.
ಜಾರ್ಖಂಡ್ನಲ್ಲಿ ಮುಖ್ಯಮಂತ್ರಿ ಸೊರೆನ್ ಅವರು ವಿಧಾನಸಭೆಯಲ್ಲಿ ಬಲಾಬಲ ಪರೀಕ್ಷೆಯಲ್ಲಿ ಗೆದ್ದಿದ್ದರೂ, ಅವರು ಅಧಿಕಾರದಲ್ಲಿರುವಾಗ ಸ್ವತಃ ಗಣಿಗಾರಿಕೆ ಗುತ್ತಿಗೆಯನ್ನು ನೀಡಿದ್ದಕ್ಕಾಗಿ ಅನರ್ಹಗೊಳ್ಳುವ ಭೀತಿ ಎದುರಿಸುತ್ತಿದ್ದಾರೆ.







