Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಈ ಹೊತ್ತಿನ ಹೊತ್ತಿಗೆ
      • ಜನಚರಿತೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಅಂತಾರಾಷ್ಟ್ರೀಯ
  4. ರಾಣಿ ಎಲಿಝಬೆತ್ ನಿಧನದ ಮಾಹಿತಿಯನ್ನು...

ರಾಣಿ ಎಲಿಝಬೆತ್ ನಿಧನದ ಮಾಹಿತಿಯನ್ನು ಅರಮನೆಯಲ್ಲಿನ ಜೇನ್ನೊಣಗಳಿಗೆ ನೀಡಿದ್ದೇಕೆ?

ವಾರ್ತಾಭಾರತಿವಾರ್ತಾಭಾರತಿ11 Sept 2022 5:01 PM IST
share
ರಾಣಿ ಎಲಿಝಬೆತ್ ನಿಧನದ ಮಾಹಿತಿಯನ್ನು ಅರಮನೆಯಲ್ಲಿನ ಜೇನ್ನೊಣಗಳಿಗೆ ನೀಡಿದ್ದೇಕೆ?

ಲಂಡನ್,ಸೆ.11: ರಾಣಿ ಎರಡನೇ ಎಲಿಝಬೆತ್ ಅವರ ನಿಧನವು ಬ್ರಿಟನ್ ನ ರಾಜ ಅಥವಾ ರಾಣಿಯ ನಿಧನದ ಬೆನ್ನಿಗೇ ಆರಂಭಿಸಲಾಗುವ ರಾಜ ಮನೆತನದ ಹಲವಾರು ಶಿಷ್ಟಾಚಾರಗಳನ್ನು ಬೆಳಕಿಗೆ ತಂದಿದೆ.

ಕುತೂಹಲಕಾರಿ ಸಂಪ್ರದಾಯದಂತೆ ಅರಮನೆಯಲ್ಲಿನ ಜೇನ್ನೊಣಗಳಿಗೆ ರಾಣಿಯ ನಿಧನದ ಮಾಹಿತಿಯನ್ನು ನೀಡಲಾಗಿದೆ. ಬಕಿಂಗ್ಹ್ಯಾಮ್ ಅರಮನೆ ಮತ್ತು ಕ್ಲಾರೆನ್ಸ್ ಹೌಸ್ ನ ಆವರಣಗಳಲ್ಲಿರುವ ಗೂಡುಗಳಲ್ಲಿ ಸಾಕಲಾಗಿರುವ ಜೇನ್ನೊಣಗಳಿಗೆ ರಾಣಿ ನಿಧನವಾಗಿರುವುದನ್ನು ಅವುಗಳ ಪಾಲಕ ಜಾನ್ ಚಾಪೆಲ್ (79) ಪಿಸುಗುಟ್ಟುವ ಧ್ವನಿಯಲ್ಲಿ ನೀಡಿದ್ದಾರೆ.

‘ನೀವು ಈಗ ರಾಜ ಮೂರನೇ ಚಾರ್ಲ್ಸ್ ರನ್ನು ಹೊಸ ಒಡೆಯನಾಗಿ ಹೊಂದಿದ್ದೀರಿ’ ಎಂದು ಚಾಪೆಲ್ ಈ ಜೇನ್ನೊಣಗಳಿಗೆ ತಿಳಿಸಿದ್ದಾರೆ.

ಗುರುವಾರ ಸ್ಕಾಟ್ಲಂಡ್ ನ ಬಾಲ್ಮೋರ್ ಅರಮನೆಯಲ್ಲಿ ರಾಣಿ ನಿಧನರಾದ ಬಳಿಕ ಶತಮಾನಗಳಷ್ಟು ಹಳೆಯದಾದ ಮತ್ತು ಮೂಢನಂಬಿಕೆ ಎಂದು ಪರಿಗಣಿಸಲಾಗಿರುವ ಈ ಸಂಪ್ರದಾಯವನ್ನು ನಡೆಸಲು ಚಾಪೆಲ್ ಮರುದಿನ ಬಕಿಂಗ್ಹ್ಯಾಮ್ ಅರಮನೆ ಮತ್ತು ಕ್ಲಾರೆನ್ಸ್ ಹೌಸ್ಗೆ ಪ್ರಯಾಣಿಸಿದ್ದರು.
  
ತಾನು ಜೇನುಹುಟ್ಟುಗಳ ಸುತ್ತ ಕಪ್ಪು ರಿಬ್ಬನ್ಗಳನ್ನು ಕಟ್ಟಿ, ಅವುಗಳ ಒಡತಿ ನಿಧನರಾಗಿದ್ದಾರೆ ಮತ್ತು ಈಗ ನೂತನ ಒಡೆಯರು ಅಧಿಕಾರಕ್ಕೇರಿದ್ದಾರೆ ಎಂದು ಜೇನ್ನೊಣಗಳಿಗೆ ಮಾಹಿತಿ ನೀಡಿದ್ದಾಗಿ ಚಾಪೆಲ್ ತಿಳಿಸಿದರು. ಸಂಪ್ರದಾಯದಂತೆ ಈ ಮಾಹಿತಿಯನ್ನು ಜೇನ್ನೊಣಗಳಿಗೆ ಪಿಸುಗುಟ್ಟುವ ಧ್ವನಿಯಲ್ಲೇ ನೀಡಬೇಕು. ಜೇನ್ನೊಣಗಳಿಗೆ ಅವುಗಳ ನೂತನ ಒಡೆಯನ ಬಗ್ಗೆ ಮಾಹಿತಿ ನೀಡದಿದ್ದರೆ ಮತ್ತು ಆತನೊಂದಿಗೆ ಚೆನ್ನಾಗಿರುವಂತೆ ಅವುಗಳನ್ನು ಆಗ್ರಹಿಸದಿದ್ದರೆ ಅವು ಜೇನನ್ನು ಉತ್ಪಾದಿಸುವುದಿಲ್ಲ, ಗೂಡನ್ನು ಬಿಟ್ಟು ತೆರಳುತ್ತವೆ ಅಥವಾ ಸಾಯುತ್ತವೆ ಎಂಬ ನಂಬಿಕೆ ಈ ಶಿಷ್ಟಾಚಾರದ ಹಿಂದಿದೆ.

‘ಕ್ಲಾರೆನ್ಸ್ ಹೌಸ್ನಲ್ಲಿ ಎರಡು ಮತ್ತು ಬಕಿಂಗ್ಹ್ಯಾಮ್ ಅರಮನೆಯಲ್ಲಿ ಐದು ಜೇನು ಹುಟ್ಟುಗಳಿವೆ. ವರ್ಷದ ಈ ಸಮಯದಲ್ಲಿ ಪ್ರತಿ ಹುಟ್ಟಿನಲ್ಲಿ ಕನಿಷ್ಠ 20,000 ಜೇನ್ನೊಣಗಳು ಇರುತ್ತವೆ. ಹೆಚ್ಚೂ ಇರಬಹುದು, ಅವುಗಳನ್ನು ಲೆಕ್ಕ ಮಾಡುವುದರಲ್ಲಿ ನಾನು ಚೆನ್ನಾಗಿಲ್ಲ. ಬೇಸಿಗೆಯಲ್ಲಿ ಮಿಲಿಯನ್ಗೂ ಹೆಚ್ಚು ಜೇನ್ನೊಣಗಳಿರುತ್ತವೆ ’ಎಂದು ಕಳೆದ 15 ವರ್ಷಗಳಿಂದ ಅರಮನೆಯ ಜೇನ್ನೊಣಗಳ ಅಧಿಕೃತ ಪಾಲಕರಾಗಿರುವ ಚಾಪೆಲ್ ಹೇಳಿದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X