Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಚೀನಿ ಲೋನ್ ಆ್ಯಪ್ ಪ್ರಕರಣ:ಪೇಟಿಎಂ...

ಚೀನಿ ಲೋನ್ ಆ್ಯಪ್ ಪ್ರಕರಣ:ಪೇಟಿಎಂ ಸೇರಿದಂತೆ ಪಾವತಿ ಆ್ಯಪ್‌ಗಳಿಗೆ ಈ.ಡಿ.ದಾಳಿ,46.67 ಕೋ.ರೂ.ಜಪ್ತಿ

ವಾರ್ತಾಭಾರತಿವಾರ್ತಾಭಾರತಿ16 Sept 2022 9:24 PM IST
share
ಚೀನಿ ಲೋನ್ ಆ್ಯಪ್ ಪ್ರಕರಣ:ಪೇಟಿಎಂ ಸೇರಿದಂತೆ ಪಾವತಿ ಆ್ಯಪ್‌ಗಳಿಗೆ ಈ.ಡಿ.ದಾಳಿ,46.67 ಕೋ.ರೂ.ಜಪ್ತಿ

ಹೊಸದಿಲ್ಲಿ,ಸೆ.16: ಜಾರಿ ನಿರ್ದೇಶನಾಲಯ (ಈ.ಡಿ.)ವು ಚೀನಿ ಲೋನ್ ಆ್ಯಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಶೋಧ ಕಾರ್ಯಾಚರಣೆಗಳನ್ನು ನಡೆಸಿದ ಬಳಿಕ ವಿವಿಧ ಬ್ಯಾಂಕ್ ಖಾತೆಗಳು ಹಾಗೂ ಪೇಟಿಎಂ,ಈಸ್‌ಬಝ್,ರೇಝರ್‌ಪೇ ಮತ್ತು ಕ್ಯಾಷ್‌ಫ್ರೀ ಪೇಮೆಂಟ್ ಗೇಟ್‌ವೇಗಳಲ್ಲಿ ಇರಿಸಲಾಗಿದ್ದ 46.77 ಕೋ.ರೂ.ಗಳನ್ನು ಸ್ತಂಭನಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ.ಡಿ.ಸೆ.14ರಂದು ದಿಲ್ಲಿ,ಉತ್ತರ ಪ್ರದೇಶದ ಗಾಝಿಯಾಬಾದ್ ಮತ್ತು ಲಕ್ನೋ,ಮುಂಬೈ ಹಾಗೂ ಬಿಹಾರದ ಗಯಾದಲ್ಲಿಯ ಆರು ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆಗಳನ್ನು ನಡೆಸಿತ್ತು.

ಆ್ಯಪ್ ಆಧಾರಿತ ಸಾಲ ನೀಡಿಕೆಯ ಎಚ್‌ಪಿಝಡ್ ಟೋಕನ್ ಮತ್ತು ಸಂಬಂಧಿತ ಘಟಕಗಳ ವಿರುದ್ಧ ಾಖಲಾಗಿರುವ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ದಿಲ್ಲಿ,ಗುರ್ಗಾಂವ್,ಮುಂಬೈ, ಪುಣೆ,ಚೆನ್ನೈ,ಹೈದರಾಬಾದ್,ಜೈಪುರ,ಜೋಧಪುರ ಮತ್ತು ಬೆಂಗಳೂರಿನಲ್ಲಿಯ ಪೇಟಿಎಂ,ಈಸ್‌ಬಝ್,ರೇಝರ್‌ಪೇ ಹಾಗೂ ಕ್ಯಾಷ್‌ಫ್ರೀಗೆ ಸೇರಿದ ಇತರ 16 ಕಚೇರಿಗಳಲ್ಲಿಯೂ ಅಧಿಕಾರಿಗಳು ಶೋಧ ಕಾರ್ಯಾಚರಣೆಗಳನ್ನು ನಡೆಸಿದ್ದರು.

ಶೋಧ ಕಾರ್ಯಾಚರಣೆಗಳ ಸಂದರ್ಭ ಪೇಮೆಂಟ್ ಗೇಟ್‌ವೇಗಳಲ್ಲಿಯ ಆರೋಪಿ ಸಂಸ್ಥೆಗಳ ವರ್ಚುವಲ್ ಖಾತೆಗಳಲ್ಲಿ ಭಾರೀ ಪ್ರಮಾಣದ ಹಣವನ್ನು ಈ.ಡಿ.ಪತ್ತೆ ಹಚ್ಚಿದೆ.

ಈಸ್‌ಬಝ್ (ಪುಣೆ) ಬಳಿ 33.36 ಕೋ.ರೂ.,ರೇಝರ್‌ಪೇ (ಬೆಂಗಳೂರು) ಬಳಿ 8.21 ಕೋ.ರೂ.,ಕ್ಯಾಷ್‌ಫ್ರೀ (ಬೆಂಗಳೂರು) ಬಳಿ 1.28 ಕೋ.ರೂ. ಹಾಗೂ ಪೇಟಿಎಂ (ದಿಲ್ಲಿ) ಬಳಿ 1.11 ಕೋ.ರೂ.ಗಳು ಪತ್ತೆಯಾಗಿವೆ. ವಿವಿಧ ಬಾ  ್ಯಂಕ್ ಖಾತೆಗಳು ಮತ್ತು ವರ್ಚುವಲ್ ಖಾತೆಗಳಲ್ಲಿ ಒಟ್ಟು 46.67 ಕೋ.ರೂ.ಗಳನ್ನು ಪತ್ತೆ ಹಚ್ಚಿ ಸ್ತಂಭನಗೊಳಿಸಲಾಗಿದೆ ಎಂದು ಈ.ಡಿ.ಹೇಳಿಕೆಯಲ್ಲಿ ತಿಳಿಸಿದೆ.

ಕಳೆದ ವರ್ಷ ನಾಗಾಲ್ಯಾಂಡ್ ಪೊಲೀಸರು ದಾಖಲಿಸಿದ್ದ ಎಫ್‌ಐಆರ್‌ನ ಆಧಾರದಲ್ಲಿ ಈ.ಡಿ.ಅಕ್ರಮ ಹಣ ವರ್ಗಾವಣೆ ತನಿಖೆಯನ್ನು ನಡೆಸುತ್ತಿದೆ.

ಎಚ್‌ಪಿಝಡ್ ಟೋಕನ್ ಅನ್ನು ಲಿಲಿಯನ್ ಟೆಕ್ನೋಕ್ಯಾಬ್ ಪ್ರೈ.ಲಿ.ಮತ್ತು ಶಿಗೂ ಟೆಕ್ನಾಲಜಿ ಪ್ರೈ.ಲಿ.ನಿರ್ವಹಿಸುತ್ತಿದ್ದವು ಎನ್ನುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಶಿಗೂ ಟೆಕ್ನಾಲಜಿ ವಿವಿಧ ಚೀನಿ ನಿಯಂತ್ರಿತ ಕಂಪನಿಗಳೊಂದಿಗೂ ನಂಟು ಹೊಂದಿದೆ. ವಿವಿಧ ಆ್ಯಪ್‌ಗಳ ನಿರ್ವಹಣೆ,ಗೇಮಿಂಗ್‌ಗಾಗಿ ವೆಬ್‌ಸೈಟ್‌ಗಳು,ಸಾಲ ಮತ್ತು ಇತರ ನೆಪಗಳಲ್ಲಿ ವಿವಿಧ ಇತರ ಕಂಪನಿಗಳು ಸಾರ್ವಜನಿಕರಿಂದ ಹಣ ಸ್ವೀಕರಿಸುತ್ತಿದ್ದವು ಎನ್ನುವುದೂ ಬಹಿರಂಗಗೊಂಡಿದೆ ಎಂದು ಈ.ಡಿ.ಹೇಳಿಕೆಯಲ್ಲಿ ತಿಳಿಸಿದೆ.

 ಈ ವಂಚನೆಗಳಲ್ಲಿ ಭಾಗಿಯಾಗಿರುವ ವಿವಿಧ ಕಂಪನಿಗಳ ಹಿಂದೆ ಗುರುಗ್ರಾಮದ ಜಿಲಾನ್ ಕನ್ಸಲ್ಟಂಟ್ಸ್ ಇಂಡಿಯಾ ಪ್ರೈ.ಲಿ.ನ ಪಾತ್ರವನ್ನು ಈ.ಡಿ.ಶಂಕಿಸಿದೆ.

Xಮ್ಯಾಡ್ ಎಲಿಫಂಟ್ ನೆಟ್‌ವರ್ಕ್ ಟೆಕ್ನಾಲಜಿ ಪ್ರೈ.ಲಿ.ಎಂಬ ಇಂತಹ ಸಂಸ್ಥೆಯೊಂದು 10 ಫೈನಾನ್ಶಿಯಲ್ ಲಿ.ಜೊತೆ ಒಪ್ಪಂದ ಮಾಡಿಕೊಂಡು ಯೋ-ಯೋ ಕ್ಯಾಷ್,ತುಫಾನ್ ರುಪೀಸ್ ಮತ್ತು ಕೋಕೋ ಕ್ಯಾಷ್‌ನಂತಹ ವಿವಿಧ ಸಾಲ ಆ್ಯಪ್‌ಗಳನ್ನು ನಿರ್ವಹಿಸುತ್ತಿತ್ತು. ಇದೇ ರೀತಿ ಸು ಹುಯಿ ಟೆಕ್ನಾಲಜಿ ಪ್ರೈ.ಲಿ. ನಿಮಿಷಾ ಫೈನಾನ್ಸ್ ಇಂಡಿಯಾ ಪ್ರೈ.ಲಿ.ಜೊತೆ ಒಪ್ಪಂದದ ಮೇರೆಗೆ ಲೋನ್ ಆ್ಯಪ್‌ಗಳನ್ನು ಕಾರ್ಯಾಚರಿಸುತ್ತಿತ್ತು ಎಂದು ಈ.ಡಿ.ತಿಳಿಸಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X