Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಕಡಲ್ಕೊರೆತಕ್ಕೆ ತಡೆ ಹೇಗೆ?

ಕಡಲ್ಕೊರೆತಕ್ಕೆ ತಡೆ ಹೇಗೆ?

ಒಲಿವರ್ ಡಿ’ಸೋಜಾ, ಮುಂಬೈಒಲಿವರ್ ಡಿ’ಸೋಜಾ, ಮುಂಬೈ17 Sept 2022 10:27 AM IST
share
ಕಡಲ್ಕೊರೆತಕ್ಕೆ ತಡೆ ಹೇಗೆ?

ಕರ್ನಾಟಕದ ಮಂಗಳೂರಿನಿಂದ ಅಸ್ನೋಟಿ ತನಕದ ಕರಾವಳಿಯುದ್ದಕ್ಕೂ ಮಳೆಗಾಲದಲ್ಲಿ ಎತ್ತರದ ಹಾಗೂ ಬೋರ್ಗರೆಯುವ ಸಮುದ್ರದ ಅಲೆಗಳಿಂದಾಗಿ ಸಮುದ್ರ ಕೊರೆತ ಉಂಟಾಗುತ್ತದೆ. ಪ್ರತೀ ವರ್ಷವೂ ನೂರಾರು ತೆಂಗಿನ ಹಾಗೂ ಇತರ ಮರಗಳು, ಮನೆಗಳು ಸಮುದ್ರ ಸೇರುತ್ತವೆ. ಈ ಮೊದಲು ಬಹಳಷ್ಟು ಕಾರ್ಪೊರೇಟರ್‌ಗಳು, ಮಹಾನಗರ ಪಾಲಿಕೆ ಆಯುಕ್ತರು, ಸಂಸದರು ಇದಕ್ಕಾಗಿ ಶಾಶ್ವತ ತಡೆಗೋಡೆ ಕಟ್ಟುತ್ತೇವೆ ಎಂದು ಹೇಳಿದ್ದೂ ಕಳೆದ ನಲವತ್ತು ವರ್ಷಗಳಿಂದ ಮಾಧ್ಯಮಗಳಲ್ಲಿ ಪ್ರಕಟವಾಗುತ್ತಲೇ ಇವೆ. ಇದನ್ನೇ ನೆಪವಾಗಿಟ್ಟುಕೊಂಡು ನಾವು ಆರಿಸಿ ಕಳಿಸಿದ ನಾಯಕರು ಆಸ್ಟ್ರೇಲಿಯ, ಚೀನಾ, ಅಮೆರಿಕ ಎಂದು ನಮ್ಮ ತೆರಿಗೆ ಹಣದಲ್ಲೇ ‘ಸ್ಟಡಿ ಟೂರ್’ ಹೋಗಿ ಬಂದರು. ಆದರೆ ಆದದ್ದೇನೂ ಇಲ್ಲ. ಪ್ರತೀವರ್ಷ ಸಮುದ್ರವು ಇನ್ನೂ ಹೆಚ್ಚಾಗಿ ಪಕ್ಕದ ಗೋಡೆಗಳನ್ನು ಬೀಳಿಸಿ ಒಳಬಂದು ಲಕ್ಷಾಂತರ ರೂ. ನಷ್ಟವನ್ನುಂಟು ಮಾಡುತ್ತದೆ.

ಪರಿಹಾರವೇನು?

ಮುಂಬೈ 7 ಸಣ್ಣ ದ್ವೀಪಗಳ ಸಂಗಮ. ಆ ದ್ವೀಪಗಳ ಮಧ್ಯೆ ಮಣ್ಣು, ಕಾಂಕ್ರಿಟ್ ತುಂಬಿಸಿ ಸಮುದ್ರ ಒಳನುಗ್ಗದಂತೆ ಟೆಟ್ರಾಪಾಡ್‌ಗಳನ್ನು ಅಡ್ಡಲಾಗಿ ಹಾಕಲಾಗಿದೆ. ಕಳೆದ 6 ದಶಕಗಳಿಂದ ಒಮ್ಮೆಯೂ ತಡೆಗೋಡೆಗೆ ಹಾನಿಯಾಗಿ ನಷ್ಟವೇ ಆಗಿಲ್ಲ.

ಕರ್ನಾಟಕ ಕರಾವಳಿಯಲ್ಲಿ ಪ್ರತೀವರ್ಷ ಅತೀ ಹೆಚ್ಚಿನ ನಷ್ಟವುಂಟುಮಾಡುವ ತೊಕ್ಕೊಟ್ಟು, ಉಳ್ಳಾಲ, ಕುಂದಾಪುರ ಸಮುದ್ರ ತಟದಲ್ಲಿ ಇಂತಹುದೇ ಟೆಟ್ರಾಪಾಡ್‌ಗಳನ್ನು ಹಾಕಿ ಸಮುದ್ರ ಒಳಬಾರದಂತೆ ಶಾಶ್ವತ ತಡೆಗೋಡೆ ನಿರ್ಮಿಸಬಹುದಿತ್ತಲ್ಲ?. ಪ್ರತೀ ಟೆಟ್ರಾಪಾಡ್ ಐವತ್ತು ಟನ್ ಭಾರವಿರುತ್ತದೆ. ಕಾಂಕ್ರಿಟ್‌ನಿಂದ ತಯಾರಿಸಲ್ಪಟ್ಟ ಇವು ಒಳಬರುವ ಅಲೆಗಳ ಬಲವನ್ನು ತಡೆಯಲು ತಮ್ಮ ಟೆಟ್ರಾ ಹೈಡ್ರಲ್ ಆಕಾರವನ್ನು ಬಳಸುತ್ತವೆ. ಅವುಗಳ ವಿರುದ್ಧ ಸಮುದ್ರದ ನೀರು ಬಾರದೆ, ಬದಲಾಗಿ ನೀರು ಸುತ್ತಲೂ ಹರಿಯುವಂತೆ ಮಾಡುತ್ತದೆ ಹಾಗೂ ಇಂಟರ್‌ಲಾಕ್ ಮಾಡುವ ಮೂಲಕ ಸ್ಥಳಾಂತರವನ್ನು ಕಡಿಮೆ ಮಾಡುತ್ತದೆ. ಇಂತಹುದೇ ನಾಲ್ಕು ಕಾಲುಗಳನ್ನು ಹೊಂದಿದ ಟೆಟ್ರಾಪಾಡ್‌ಗಳನ್ನು ಗೇಟ್‌ವೇ ಆಫ್ ಇಂಡಿಯಾದಿಂದ ಇಡೀ ಮುಂಬೈ ನೆಕ್ಲೆಸ್ ಎಂದು ಕರೆಯಲಾಗುವ ಸಮುದ್ರತೀರಕ್ಕೆ ಕ್ರೇನ್‌ಗಳ ಮೂಲಕ ತಂದು ಸುರಿಯಲಾಗಿದೆ. ಅವುಗಳ ಐವತ್ತು ಟನ್ ತೂಕ ಮತ್ತು ವಿನ್ಯಾಸದಿಂದಾಗಿ ಟೆಟ್ರಾ ಪಾಡ್‌ಗಳು ಅತ್ಯಂತ ತೀವ್ರವಾದ ಹವಾಮಾನ ಪರಿಸ್ಥಿತಿಗಳಲ್ಲಿಯೂ ಹಡಗಿಗೆ ಲಂಗರು ಹಾಕಿದಂತೆ ಸಮುದ್ರತಟದಲ್ಲಿ ಸ್ಥಿರವಾಗಿ ನಿಲ್ಲುತ್ತವೆ. ಒಟ್ಟಿಗೆ ಜೋಡಿಸಲಾದ ಹಲವಾರು ಟೆಟ್ರಾಪಾಡ್‌ಗಳು ಅಲೆಗಳು ಮತ್ತು ಪ್ರವಾಹಗಳ ಶಕ್ತಿಯನ್ನು ಹೊರಹಾಕುವ ಇಂಟರ್‌ಲಾಕಿಂಗ್, ಸರಂಧ್ರ ತಡೆಗೋಡೆಯನ್ನು ರೂಪಿಸುತ್ತವೆ. ಇವು ಸವೆತ ಮತ್ತು ಪ್ರವಾಹ/ಎತ್ತರದ ಅಲೆಗಳನ್ನು ತಡೆದು ಸಮುದ್ರವು ಕರಾವಳಿಯನ್ನು ಮರುರೂಪಿಸುವುದನ್ನು ತಡೆಯುತ್ತದೆ. ಮುಂಬೈನ ಮೆರಿನ್ ಡ್ರೈವ್‌ನಲ್ಲಿ ಕಲ್ಲಿದ್ದಲು ಆಧಾರಿತ ಟಾಟಾ ವಿದ್ಯುತ್ ಕಂಪೆನಿಯಿಂದ ಸಿಗುವ ಬೂದಿಯನ್ನು ಸಂಗ್ರಹಿಸಿ ಟೆಟ್ರಾಪಾಡ್‌ಗಳನ್ನು ತಯಾರಿಸಲಾಗಿದೆ. ಗಟ್ಟಿಯಾದ ಇಟ್ಟಿಗೆಗಳನ್ನು ಇದರಿಂದ ತಯಾರಿಸಲಾಗುತ್ತಿದೆ. ಇಂತಹುದೇ ಟೆಟ್ರಾಪಾಡ್‌ಗಳನ್ನು ಸಮುದ್ರದ ದಡದಲ್ಲಿ ರಾಶಿಯಾಗಿ ಪೇರಿಸಿಟ್ಟರೆ ಇನ್ನೂರು ವರ್ಷಗಳಷ್ಟು ಕಾಲ ಕಡಲ್ಕೊರೆತ ಸಂಭವಿಸುವ ಸಾಧ್ಯತೆ ಇಲ್ಲ. ಇದನ್ನು ನಾವು ಆರಿಸಿದ ಜನನಾಯಕರಿಗೆ ತಿಳಿಸಿ ಹೇಳುವವರು ಯಾರು?

share
ಒಲಿವರ್ ಡಿ’ಸೋಜಾ, ಮುಂಬೈ
ಒಲಿವರ್ ಡಿ’ಸೋಜಾ, ಮುಂಬೈ
Next Story
X