ಯಕ್ಷಗಾನ ಕಲಾರಂಗದ ಸದಸ್ಯ ನಂದಕುಮಾರ್ ನಿಧನ

ಉಡುಪಿ, ಸೆ.18: ಉಡುಪಿ ರಂಗಭೂಮಿಯ ನಿಕಟಪೂರ್ವ ಉಪಾಧ್ಯಕ್ಷ, ಸಿಂಡಿಕೇಟ್ ಬ್ಯಾಂಕಿನ ನಿವೃತ್ತ ಅಧಿಕಾರಿ, ಉಡುಪಿಯ ಹೆಚ್ಚಿನ ಸೇವಾಸಂಸ್ಥೆ, ಸಂಘಟನೆಗಳ ಸದಸ್ಯರಾಗಿದ್ದ ನಂದಕುಮಾರ್(69) ಇಂದು ಅಲ್ಪಕಾಲದ ಅಸೌಖ್ಯದಿಂದ ನಿಧನರಾದರು.
ಯಕ್ಷಗಾನ ಕಲಾರಂಗದ ಆಜೀವ ಸದಸ್ಯರಾಗಿದ್ದ ಅವರು ಕಲಾಪ್ರೋತ್ಸಾಹಕರಾಗಿದ್ದರು. ಪತ್ನಿ ಇಬ್ಬರು ಪುತ್ರಿಯರನ್ನು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ನಂದಕುಮಾರ್ ನಿಧನಕ್ಕೆ ಸಂಸ್ಥೆಯ ಅಧ್ಯಕ್ಷ ಎಂ.ಗಂಗಾಧರ್ ಹಾಗೂ ಕಾರ್ಯದರ್ಶಿ ಮುರಳಿ ಕಡೆಕಾರ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
Next Story





