ಖೋಖೋ ಪಂದ್ಯಾಟ: ಭಂಡಾಕಾರ್ಸ್-ಹಾಲಾಡಿಗೆ ಪ್ರಶಸ್ತಿ

ಕುಂದಾಪುರ, ಸೆ.19: ಉಡುಪಿ ಜಿಲ್ಲಾ ಪದವಿಪೂರ್ವ ಶಿಕ್ಷಣ ಇಲಾಖೆ ಮತ್ತು ವರಸಿದ್ಧಿ ವಿನಾಯಕ ಪದವಿ ಪೂರ್ವ ಕಾಲೇಜು ಕೆರಾಡಿ ಇವುಗಳ ಜಂಟಿ ಆಶ್ರಯದಲ್ಲಿ ಪದವಿ ಪೂರ್ವ ವಿಭಾಗದ ಬಾಲಕ-ಬಾಲಕಿಯರ ತಾಲೂಕು ಮಟ್ಟದ ಖೋ-ಖೋ ಪಂದ್ಯಾಟ-2022 ಕೆರಾಡಿಯ ವರಸಿದ್ಧಿ ವಿನಾಯಕ ಪದವಿ ಪೂರ್ವ ಕಾಲೇಜು ಕ್ರೀಡಾಂಗಣದಲ್ಲಿ ಸೋಮವಾರ ನಡೆಯಿತು.
ಬಾಲಕರ ವಿಭಾಗದಲ್ಲಿ ಕುಂದಾಪುರ ಭಂಡಾಕಾರ್ಸ್ ಪದವಿಪೂರ್ವ ಕಾಲೇಜು ಪ್ರಥಮ ಹಾಗೂ ಹಾಲಾಡಿ ಸರಕಾರಿ ಪದವಿಪೂರ್ವ ಕಾಲೇಜು ದ್ವಿತೀಯ ಮತ್ತು ಬಾಲಕಿಯರ ವಿಭಾಗದಲ್ಲಿ ಹಾಲಾಡಿ ಸರಕಾರಿ ಪದವಿ ಪೂರ್ವ ಕಾಲೇಜು ಪ್ರಥಮ ಹಾಗೂ ಬಿದ್ಕಲ್ಕಟ್ಟೆ ಸರಕಾರಿ ಪದವಿ ಪೂರ್ವ ಕಾಲೇಜು ದ್ವಿತೀಯ ಸ್ಥಾನ ಗೆದ್ದುಕೊಂಡಿದೆ.
ಉತ್ತಮ ಆಟಗಾರರಾಗಿ ಭಂಡಾಕಾರ್ಸ್ ಕಾಲೇಜಿನ ಸಂದೀಪ್, ಉತ್ತಮ ಆಟಗಾರ್ತಿಯಾಗಿ ಹಾಲಾಡಿ ಕಾಲೇಜಿನ ತ್ರಿಶಾ ಪ್ರಶಸ್ತಿ ಪಡೆದರು. ಪಂದ್ಯಾಟ ವನ್ನು ಕೆರಾಡಿ ಗ್ರಾಪಂ ಅಧ್ಯಕ್ಷೆ ಗಿರಿಜಾ ಶೆಡ್ತಿ ಉದ್ಘಾಟಿಸಿದರು. ವರಸಿದ್ಧಿ ವಿನಾಯಕ ಪದವಿ ಪೂರ್ವ ಕಾಲೇಜಿನ ಸಂಚಾಲಕ ಕೆರಾಡಿ ಚಂದ್ರಶೇಖರ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.
ವರಸಿದ್ಧಿ ವಿನಾಯಕ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಪ್ರಸಾದ್ ಕುಮಾರ್ ಶೆಟ್ಟಿ ಅಧ್ಯಕ್ಷತೆಯಲ್ಲಿ ಸಮಾರೋಪ ಜರುಗಿತು. ಈ ಸಂದರ್ಭದಲ್ಲಿ ಕೆರಾಡಿ ಗ್ರಾಪಂ ಸದಸ್ಯರಾದ ರಾಘವೇಂದ್ರ ಕೊಠಾರಿ, ಮಂಜು ಕೊಠಾರಿ, ದಿನೇಶ್ ನಾಯ್ಕ್, ಕುಂದಾಪುರ ತಾಲೂಕು ಕ್ರೀಡಾಕೂಟದ ಸಂಚಾಲಕ ರಾಮ ಶೆಟ್ಟಿ, ಉದ್ಯಮಿ ಅಶ್ವಥ್ ಶೆಟ್ಟಿ ಕೆರಾಡಿ, ವರಸಿದ್ಧಿ ಸೇವಾ ಸಂಸ್ಥೆಯ ರವಿ ಕೊಠಾರಿ, ಭಾಸ್ಕರ ಶೆಟ್ಟಿ, ಸತೀಶ್, ಅಶೋಕ್ ಕುಮಾರ್ ಉಪಸ್ಥಿತರಿದ್ದರು.
ಸಂಸ್ಥೆಯ ಕನ್ನಡ ಉಪನ್ಯಾಸಕ ಅರುಣ್ ಕುಮಾರ್ ಶೆಟ್ಟಿ ಸ್ವಾಗತಿಸಿದರು. ಅರ್ಥಶಾಸ್ತ್ರ ಉಪನ್ಯಾಸಕ ವಿಶ್ವನಾಥ್ ವಂದಿಸಿದರು.







