ಬೈಕ್ ಅಪಘಾತ: ಸವಾರ ಮೃತ್ಯು
ಕಾರ್ಕಳ, ಅ.2: ಬೈಕ್ ಪಲ್ಟಿಯಾಗಿ ಸವಾರೊಬ್ಬರು ಮೃತಪಟ್ಟ ಘಟನೆ ಕೌಡೂರು ಗ್ರಾಮದ ಬೆದ್ರಬೆಟ್ಟು ಎಂಬಲ್ಲಿ ಅ.1ರಂದು ರಾತ್ರಿ ವೇಳೆ ನಡೆದಿದೆ.
ಮೃತರನ್ನು ಬೈಲೂರು ಬೆದ್ರಬೆಟ್ಟು ನಿವಾಸಿ ಸುಧಾಕರ ಆಚಾರ್ಯ(45) ಎಂದು ಗುರುತಿಸಲಾಗಿದೆ. ನಕ್ರೆ ಕಡೆಯಿಂದ ಬೈಲೂರು ಕಡೆಗೆ ಬೈಕಿನಲ್ಲಿ ಹೋಗುತ್ತಿದ್ದ ಇವರು, ವಿಪರೀತ ಮಳೆಯ ಕಾರಣ ಆಯ ತಪ್ಪಿ ರಸ್ತೆಯಲ್ಲಿ ಜಾರಿಕೊಂಡು ಹೋಗಿ ಗದ್ದೆಗೆ ಬಿದ್ದರೆನ್ನಲಾಗಿದೆ. ಇದರಿಂದ ಗಂಭೀರವಾಗಿ ಗಾಯಗೊಂಡ ಅವರು ಸ್ಥಳದಲ್ಲಿಯೇ ಮೃತಪಟ್ಟರು ಎಂದು ತಿಳಿದುಬಂದಿದೆ.
ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story