ಶಿರ್ವ, ಅ.3: ಬಂಟಕಲ್ಲು ಸಮೀಪದ ಹೇರೂರು ಮುರತಂಗಡಿ ದೇವಯ್ಯ ಪ್ರಭು(೮೭) ವಯೋಸಹಜ ಅನಾರೋಗ್ಯದಿಂದ ರವಿವಾರ ರಾತ್ರಿ ಸ್ವಗೃಹದಲ್ಲಿ ನಿಧನರಾದರು.
27 ವರ್ಷಗಳ ಕಾಲ ಮಣಿಪಾಲ ಉದಯವಾಣಿಯಲ್ಲಿ ಉದ್ಯೋಗದಲ್ಲಿದ್ದು ನಿವೃತ್ತಿಯಾಗಿದ್ದರು, ಕೃಷಿ ಚಟುವಟಿಕೆ ಯಲ್ಲಿ ತೊಡಗಿಸಿಕೊಂಡಿದ್ದ ಇವರು ಪತ್ನಿ, ಇಬ್ಬರು ಪುತ್ರರು, ನಾಲ್ವರು ಪುತ್ರಿಯರನ್ನು ಅಗಲಿದ್ದಾರೆ.