ರೈತರ ಚಳುವಳಿ ಭಾರತ ಐಕ್ಯತಾ ಯಾತ್ರೆಗೆ ದೊಡ್ಡ ಸ್ಫೂರ್ತಿ: ರಾಹುಲ್ ಗಾಂಧಿ
ಬೆಂಗಳೂರು: ಭಾರತ ಐಕ್ಯತಾ ಯಾತ್ರೆ ಮಾಡಲು ನಿರ್ಧರಿಸಿದಾಗ ರೈತರ ಚಳುವಳಿ ದೊಡ್ಡ ಸ್ಫೂರ್ತಿಯಾಗಿತ್ತು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು,'ಅನ್ನದಾತರಿಗೆ ನ್ಯಾಯ ಒದಗಿಸದೆ ಈ ಹೋರಾಟ ಕೊನೆಗೊಳ್ಳುವುದಿಲ್ಲ' ಎಂದಿದ್ದಾರೆ.
''ವರ್ಷ ಕಳೆದರೂ ಲಖೀಂಪುರ ಖೇರಿಯ ಹುತಾತ್ಮ ರೈತರಿಗೆ ನ್ಯಾಯ ಸಿಕ್ಕಿಲ್ಲ. ಕಾರಣ ಒಂದೇ - ಬಿಜೆಪಿ ಯಾವಾಗಲೂ ಅಪರಾಧಿಗಳನ್ನು ರಕ್ಷಿಸುತ್ತಿದೆ. ನಾವು #ಭಾರತಐಕ್ಯತಾಯಾತ್ರೆ ಮಾಡಲು ನಿರ್ಧರಿಸಿದಾಗ, ರೈತರ ಚಳುವಳಿ ನಮಗೆ ದೊಡ್ಡ ಸ್ಫೂರ್ತಿಯಾಗಿತ್ತು. ಅನ್ನದಾತರಿಗೆ ನ್ಯಾಯ ಒದಗಿಸದೆ ಈ ಹೋರಾಟ ಕೊನೆಗೊಳ್ಳುವುದಿಲ್ಲ'' ಎಂದು ತಿಳಿಸಿದ್ದಾರೆ.
ಮೈಸೂರು ಜಿಲ್ಲೆ ಪ್ರವೇಶಿಸಿರುವ ಭಾರತ್ ಜೋಡೊ ಪಾದಯಾತ್ರೆಗೆ 2 ದಿನ ಬಿಡುವು ನೀಡಲಾಗಿದ್ದು, ಅ.6ರಂದು ಮಂಡ್ಯದ ಪಾಂಡವಪುರದಿಂದ ಪಾದಯಾತ್ರೆ ಪುನರಾರಂಭಗೊಳ್ಳಲಿದೆ.
ವರ್ಷ ಕಳೆದರೂ ಲಖೀಂಪುರ ಖೇರಿಯ ಹುತಾತ್ಮ ರೈತರಿಗೆ ನ್ಯಾಯ ಸಿಕ್ಕಿಲ್ಲ.
— Karnataka Congress (@INCKarnataka) October 4, 2022
ಕಾರಣ ಒಂದೇ - ಬಿಜೆಪಿ ಯಾವಾಗಲೂ ಅಪರಾಧಿಗಳನ್ನು ರಕ್ಷಿಸುತ್ತಿದೆ.
ನಾವು #ಭಾರತಐಕ್ಯತಾಯಾತ್ರೆ ಮಾಡಲು ನಿರ್ಧರಿಸಿದಾಗ, ರೈತರ ಚಳುವಳಿ ನಮಗೆ ದೊಡ್ಡ ಸ್ಫೂರ್ತಿಯಾಗಿತ್ತು.
ಅನ್ನದಾತರಿಗೆ ನ್ಯಾಯ ಒದಗಿಸದೆ ಈ ಹೋರಾಟ ಕೊನೆಗೊಳ್ಳುವುದಿಲ್ಲ.
- @RahulGandhi https://t.co/g5Qq5Kgjuz