ಬಪ್ಪನಾಡು: ಹೆಜ್ಜೇನು ದಾಳಿ; ನಾಲ್ವರು ಆಸ್ಪತ್ರೆಗೆ ದಾಖಲು
ಮುಲ್ಕಿ: ಬಪ್ಪನಾಡು ಸೇತುವೆ ಬಳಿಯ ದ್ವಿಚಕ್ರ ವಾಹನದ ಗ್ಯಾರೇಜ್ ಸಮೀಪದಲ್ಲಿ ಮನೆಯ ಸೆಂಟ್ರಿಂಗ್ ಕೆಲಸ ಮಾಡುತ್ತಿದ್ದ ನಾಲ್ವರು ಕಾರ್ಮಿಕರ ಮೇಲೆ ಹೆಜ್ಜೇನು ದಾಳಿ ನಡೆಸಿದ್ದು ಗಂಭೀರ ಗಾಯಗೊಂಡ ಕಾರ್ಮಿಕರು ಮುಲ್ಕಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಗಾಯಗೊಂಡವರನ್ನು ಮೂಡಬಿದ್ರೆ ಸಾಣೂರು ನಿವಾಸಿ ನಿತಿನ್ (24), ಮೂಡು ಮಾರ್ನಾಡು ವಿಶ್ವನಾಥ ಪೂಜಾರಿ(47), ಧರೆಗುಡ್ಡೆ ನಿವಾಸಿಗಳಾದ ಉಮೇಶ್ ಶೆಟ್ಟಿ(34), ಪ್ರೇಮದಾಸ(41) ಎಂದು ಗುರುತಿಸಲಾಗಿದೆ.
ಗಾಯಾಳು ಕಾರ್ಮಿಕರು ಮನೆಯೊಂದರ ಸೆಂಟ್ರಿಂಗ್ ಕೆಲಸ ಮಾಡುತ್ತಿದ್ದಾಗ ಹೆಜ್ಜೆನು ದಾಳಿ ನಡೆಸಿದೆ. ಈ ಸಂದರ್ಭ ಕಾರ್ಮಿಕರು ಪ್ರಾಣಭಯದಿಂದ ಸ್ಥಳದಿಂದ ಓಡಿದ್ದಾರೆ.
ಆಸ್ಪತ್ರೆಗೆ ಹೆಜಮಾಡಿ ಗ್ರಾಮ ಪಂಚಾಯತ್ ಸದಸ್ಯ ಪ್ರಾಣೇಶ್ ಭೇಟಿ ನೀಡಿ ಆರೋಗ್ಯ ವಿಚಾರಿಸಿ ಮಾಧ್ಯಮದೊಂದಿಗೆ ಮಾತನಾಡಿ, ಇಂತಹ ಘಟನೆಗಳು ಅಲ್ಲಲ್ಲಿ ನಡೆಯುತ್ತಿದ್ದು ಕಾರ್ಮಿಕರಿಗೆ ಸೂಕ್ತ ಭದ್ರತೆಗೆ ಸಂಬಂಧಪಟ್ಟ ಆಡಳಿತವನ್ನು ಒತ್ತಾಯಿಸಿದ್ದಾರೆ.
Next Story