ಮಂಜೇಶ್ವರ: ಮಿಲಾದುನ್ನಬಿ ಪ್ರಯುಕ್ತ ಪ್ರವಾದಿ ಸಂದೇಶ ಜಾಥಾ
ಮಂಜೇಶ್ವರ: ಪ್ರವಾದಿ ಮುಹಮ್ಮದ್ ಪೈಗಂಬರ್ (ಸ.ಅ) ಅವರ ಜನ್ಮದಿನ "ಮಿಲಾದುನ್ನಬಿ " ಆಚರಣೆಯು ರವಿವಾರ ಮಂಜೇಶ್ವರ ತಾಲುಕಾದ್ಯಂತ ಸಂಭ್ರಮದಲ್ಲಿ ನಡೆಯಿತು.
ಅಹ್ಲೇ ಸುನ್ನತ್ ಹನಫಿ ಜಾಮಿಯಾ ಮಸೀದಿ ನೇತೃತ್ವದಲ್ಲಿ ನಡೆದ ಜಶ್ವೇ ಮಿಲಾದ್ ಜಾಥಾ ವಿಶೇಷ ಗಮನ ಸೆಳೆಯಿತು. ಇಲ್ಲಿಯ ಮದ್ರಸ ವಿದ್ಯಾರ್ಥಿಗಳಿಂದ ಪ್ರವಾದಿ ಗುಣಗಾನದ ಹಾಡುಗಳು, ದಫ್ ನೊಂದಿಗೆ ಮಿಲಾದ್ ಜಾಥಾ ನಡೆಯಿತು.
ಜಮಾಅತ್ ಅಧ್ಯಕ್ಷ ಹಾಜಿ ಬಶೀರ್ ಆಹ್ಮದ್, ಉಪಾಧ್ಯಕ್ಷ ಅಬ್ದುಲ್ ರಶೀದ್, ಕಾರ್ಯದರ್ಶಿ ಸಯ್ಯದ್ ರಫಿಕ್, ತಹರೀಕೆ ಉರ್ದು ಕೇರಳ ರಾಜ್ಯ ಪ್ರಧಾನ ಕಾರ್ಯದರ್ಶಿ ಅಜೀಮ್ ಮಣಿಮುಂಡ, ಮಕ್ಬೂಲ್ ಆಹ್ಮದ್ ಮೊದಲಾದವರು ನೇತೃತ್ವ ನೀಡಿದರು.
ಕುಂಜತ್ತೂರು ಜಮಾಅತ್, ಉದ್ಯಾವರ ಸಾವಿರ ಜಮಾಅತ್, ಪೊಸೋಟು ಜಮಾಅತ್, ಪಾಂಡ್ಯಾಲ್ ಜಮಾಅತ್ ಹಾಗೂ ಮತ್ತಿತರ ಜಮಾಅತ್ ಗಳ ಮದ್ರಸ ಮಸೀದಿಗಳಲ್ಲಿ ನಡೆದ ಸಭಾ ಕಾರ್ಯಕ್ರಮಗಳಿಗೆ ಪ್ರವಾದಿ ಜೀವನದ ಸಂದೇಶವನ್ನು ನೀಡಲಾಯಿತು.
Next Story