Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. 20 ರೂ.ಗಾಗಿ ಜಗಳ: ಆಪ್ ಸರಕಾರ ಮತ್ತು...

20 ರೂ.ಗಾಗಿ ಜಗಳ: ಆಪ್ ಸರಕಾರ ಮತ್ತು ಬಿಜೆಪಿ ಎಂಸಿಡಿ ನಡುವೆ ಸಂಘರ್ಷದಿಂದ ಕಂಗಾಲಾಗಿರುವ ಗೋವುಗಳು

ವಾರ್ತಾಭಾರತಿವಾರ್ತಾಭಾರತಿ9 Oct 2022 8:07 PM IST
share
20 ರೂ.ಗಾಗಿ ಜಗಳ: ಆಪ್ ಸರಕಾರ ಮತ್ತು ಬಿಜೆಪಿ ಎಂಸಿಡಿ ನಡುವೆ ಸಂಘರ್ಷದಿಂದ ಕಂಗಾಲಾಗಿರುವ ಗೋವುಗಳು

ಹೊಸದಿಲ್ಲಿ,ಅ.9: ಗುಜರಾತಿನಲ್ಲಿ ಆಪ್ ಅಧಿಕಾರಕ್ಕೆ ಬಂದರೆ ದಿಲ್ಲಿಯಲ್ಲಿರುವಂತೆ ಪ್ರತಿ ಹಸುವಿನ ಪೋಷಣೆಗಾಗಿ ದಿನಕ್ಕೆ 40 ರೂ.ಭತ್ಯೆಯನ್ನು ಜಾನುವಾರುಗಳ ಮಾಲಿಕರಿಗೆ ನೀಡುವುದಾಗಿ ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಇತ್ತೀಚಿಗೆ ಹೇಳಿದ್ದಾರೆ. ಆದರೆ ದಿಲ್ಲಿಯಲ್ಲಿ ಆಪ್ ಸರಕಾರ ಮತ್ತು ಬಿಜೆಪಿ ನಡುವಿನ ಕಚ್ಚಾಟದಿಂದಾಗಿ ಅಲ್ಲಿಯ ಗೋಶಾಲೆಗಳು ಅತಂತ್ರಗೊಂಡಿವೆ.

ಸರಕಾರದಿಂದ ಬಾಕಿಯಾಗಿರುವ ಹಣ,ಹಣಕಾಸಿನ ಕೊರತೆ, ಹೆಚ್ಚುತ್ತಿರುವ ಗೋಶಾಲೆಗಳ ನಿರ್ವಹಣೆ ವೆಚ್ಚದ ಕುರಿತು ಆಪ್ ನೇತೃತ್ವದ ದಿಲ್ಲಿ ಸರಕಾರ ಮತ್ತು ಬಿಜೆಪಿ ಆಡಳಿತದ ದಿಲ್ಲಿ ಮಹಾನಗರ ಪಾಲಿಕೆ (ಎಂಸಿಡಿ) ನಡುವೆ ನಿರಂತರ ವಾಗ್ವಾದಗಳಿಂದಾಗಿ ಗೋಶಾಲೆಗಳ ಮಾಲಿಕರು ಕಠಿಣ ಸಮಯವನ್ನು ಎದುರಿಸುತ್ತಿದ್ದಾರೆ ಮತ್ತು ಸಾಮರ್ಥ್ಯಕ್ಕಿಂತ ಹೆಚ್ಚಿನ ಹಸುಗಳು ತುಂಬಿರುವ ಗೋಶಾಲೆಗಳನ್ನು ನಿರ್ವಹಿಸಲು ಹೆಚ್ಚಿನ ಸಾಲಗಳ ಸುಳಿಯಲ್ಲಿ ಸಿಲುಕುತ್ತಿದ್ದಾರೆ.

ದಿಲ್ಲಿಯಲ್ಲಿ ಸರಕಾರಿ ಸಂಯೋಜಿತ ನಾಲ್ಕು ಗೋಶಾಲೆಗಳಿದ್ದು, ಗಾಯಗೊಂಡಿರುವ,ಪರಿತ್ಯಕ್ತ,ಬಿಡಾಡಿ ಹಸುಗಳನ್ನು ಎಂಸಿಡಿ ರಕ್ಷಿಸಿ ಇಲ್ಲಿಗೆ ಸಾಗಿಸುತ್ತದೆ. ಈ ಗೋಶಾಲೆಗಳು ಪ್ರತಿ ಹಸುವಿಗೆ ದಿನಕ್ಕೆ 20 ರೂ.ಗಳ ಪೋಷಣೆ ಭತ್ಯೆಯನ್ನು ಸರಕಾರದಿಂದ ಪಡೆಯುತ್ತಿವೆ,ಆದರೆ ಎಂಸಿಡಿ ನೀಡಬೇಕಿದ್ದ 20 ರೂ.ಗಳ ಪೋಷಣೆ ಭತ್ಯೆ 2018ರಿಂದ ಬಾಕಿಯಿದೆ. ಪ್ರತಿ ಹಸುವಿಗೆ ಪ್ರತಿದಿನ ಒಟ್ಟು 40 ರೂ.ಗಳ ಸರಕಾರಿ ನೆರವು ಗೋಶಾಲೆಗಳ ಮಾಲಿಕರಿಗೆ ದೊರೆಯಬೇಕಿತ್ತು.

‘ಹಸುವೊಂದರ ಪೋಷಣೆಗಾಗಿ ಪ್ರತಿ ದಿನ ಸುಮಾರು 103 ರೂ.ವೆಚ್ಚವಾಗುತ್ತಿದೆ,ಅಂದರೆ ಇಲ್ಲಿರುವ 8,500 ಗೋವುಗಳಿಗೆ ಒಟ್ಟು ಎಂಟು ಲ.ರೂ.ಅಗತ್ಯವಿದೆ. ಇದರ ಜೊತೆಗೆ ಸಿಬ್ಬಂದಿಗಳ ವೇತನ,ಆಸ್ಪತ್ರೆ ಬಿಲ್‌ಗಳು,ಔಷಧಿಗಳು,ವಿದ್ಯುತ್‌ನಂತಹ ಹೆಚ್ಚುವರಿ ವೆಚ್ಚಗಳೂ ಇವೆ. ಗೋಶಾಲೆಗೆ ತರಲಾಗುತ್ತಿರುವ ಹಸುಗಳ ಸಂಖ್ಯೆ ಹೆಚ್ಚುತ್ತಲೇ ಇದೆ. 300 ಜನರ ತಂಡವು ಅವುಗಳನ್ನು ನೋಡಿಕೊಳ್ಳುತ್ತಿದೆ. ದಿಲ್ಲಿ ಸರಕಾರವು ತನ್ನ ಪಾಲಿನ ಹಣವನ್ನು ನಮಗೆ ರವಾನಿಸುತ್ತಿದೆ,ಆದರೆ ಕಳೆದ 3-4 ವರ್ಷಗಳಿಂದಲೂ ಎಂಸಿಡಿಯಿಂದ ಹಣ ಬಂದಿಲ್ಲ. ಈಗ ಎಲ್ಲದಕ್ಕೂ ನಾವು ದೇಣಿಗೆಗಳನ್ನು ಅವಲಂಬಿಸಿದ್ದೇವೆ ’ ಎಂದು ಶ್ರೀಕೃಷ್ಣ ಗೋಶಾಲಾದ ಜನರಲ್ ಮ್ಯಾನೇಜರ್ ವಿಜಯೇಂದ್ರ ಧ್ಯಾನಿ ಅಳಲು ತೋಡಿಕೊಂಡರು.

ಗೋಶಾಲೆಗಳು ದಿಲ್ಲಿ ಸರಕಾರದ ನೇರ ಆಡಳಿತಾತ್ಮಕ ನಿಯಂತ್ರಣದಲ್ಲಿವೆ. ಅದು ಅವುಗಳಿಗೆ ಹಣದ ಹಂಚಿಕೆ ಮಾಡುತ್ತದೆ. ಕಾಯ್ದೆಯಂತೆ ಗೋಶಾಲೆಗಳ ಸಂಪೂರ್ಣ ಜವಾಬ್ದಾರಿ ದಿಲ್ಲಿ ಸರಕಾರದ್ದಾಗಿದೆ ಎಂದು ಎಂಸಿಡಿಯ ಪಶು ಇಲಾಖೆಯ ನಿರ್ದೇಶಕ ಡಾ.ವಿ.ಕೆ.ಸಿಂಗ್ ಹೇಳಿದ್ದಾರೆ.

 ಇದನ್ನು ಅಲ್ಲಗಳೆದಿರುವ ದಿಲ್ಲಿ ಸರಕಾರದ ಪಶು ಸಂಗೋಪನೆ ಇಲಾಖೆಯ ನಿರ್ದೇಶಕ ಡಾ.ರಾಕೇಶ ಸಿಂಗ್ ಅವರು,‘ಗೋಶಾಲೆಗಳು ನಮಗೆ ಸೇರಿರಬಹುದು,ಆದರೆ ಅಲ್ಲಿ ಹಸುಗಳನ್ನು ತಂದು ತುಂಬುತ್ತಿರುವುದು ಎಂಸಿಡಿ. ಹೀಗಾಗಿ ಅದು ಎಲ್ಲ ಜವಾಬ್ದಾರಿಗಳನ್ನು ಹಂಚಿಕೊಳ್ಳಬೇಕು ’ಎಂದಿದ್ದಾರೆ.

ಈ ನಡುವೆ ಹಣ ಪಾವತಿಸದ್ದಕ್ಕಾಗಿ ಗೋಶಾಲೆಗಳ ಮಾಲಿಕರು ಎಂಸಿಡಿ ವಿರುದ್ಧ ನ್ಯಾಯಾಲಯದ ಮೊರೆ ಹೋಗಿದ್ದಾರೆ. ದಿಲ್ಲಿ ಸರಕಾರವನ್ನೂ ಅವರು ಪ್ರಕರಣದಲ್ಲಿ ಕಕ್ಷಿಯಾಗಿಸಿದ್ದಾರೆ.

ನಗರದ ಮಧ್ಯ ಹಲವಾರು ಅಕ್ರಮ ಡೇರಿಗಳಿವೆ. ಅಲ್ಲಿಯ ಹಸುಗಳು ಹಾಲು ನೀಡುವುದನ್ನು ನಿಲ್ಲಿಸಿದ ಬಳಿಕ ಅವುಗಳನ್ನು ರಸ್ತೆಗಳಲ್ಲಿ ತೊರೆಯಲಾಗುತ್ತದೆ. ಇಂತಹ ಡೇರಿಗಳನ್ನು ನಿಯಂತ್ರಿಸಲು ಬಿಜೆಪಿ ನೇತೃತ್ವದ ಎಂಸಿಡಿ ವಿಫಲಗೊಂಡಿದೆ ಎಂದು ಆಪ್ ದೂರಿದ್ದರೆ,ಇದೆಲ್ಲ ಅಗ್ಗದ ರಾಜಕೀಯ ಎಂದು ಬಿಜೆಪಿ ತಳ್ಳಿಹಾಕಿದೆ. ಒಟ್ಟಾರೆಯಲ್ಲಿ ಇವರೆಡರ ನಡುವಿನ ಹಗ್ಗಜಗ್ಗಾಟದಿಂದ ಗೋಶಾಲೆಗಳು ಸಂಕಷ್ಟದಿಂದ ಒದ್ದಾಡುತ್ತಿವೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X