'ಇದು ದೇಶದ ಬದಲಾವಣೆಯ ಹೊಸ ಇಂಕ್ವಿಲಾಬ್': ಮಳೆಯಲ್ಲೇ ಹೆಜ್ಜೆ ಹಾಕಿದ ರಾಹುಲ್ ಗಾಂಧಿಯ ವೀಡಿಯೊ ಹಂಚಿಕೊಂಡ ಕಾಂಗ್ರೆಸ್
ಚಿತ್ರದುರ್ಗ ಜಿಲ್ಲೆ ಪ್ರವೇಶಿಸಿದ 'ಭಾರತ್ ಜೋಡೊ' ಯಾತ್ರೆ
ಚಿತ್ರದುರ್ಗ: ಕರ್ನಾಟಕದಲ್ಲಿ 'ಭಾರತ್ ಜೋಡೋ ಯಾತ್ರೆ' ಸೋಮವಾರ 9ನೇ ದಿನಕ್ಕೆ ಕಾಲಿಟ್ಟಿದ್ದು, ಸದ್ಯ ಪಾದಯಾತ್ರೆ ಚಿತ್ರದುರ್ಗ ಜಿಲ್ಲೆ ಪ್ರವೇಸಿದೆ.
ಪಾದಯಾತ್ರೆ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ನಗರದ ಹುಳಿಯಾರು ರಸ್ತೆಯಲ್ಲಿ ಸಾಗುತ್ತಿದ್ದಾಗ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಸುರಿಯುತ್ತಿರುವ ಮಳೆಯಲ್ಲಿಯೇ ಹೆಜ್ಜೆ ಹಾಕಿದರು.
ಈ ಕುರಿತ ವಿಡಿಯೋ ಒಂದನ್ನು ಟ್ವಿಟರ್ ನಲ್ಲಿ ಹಂಚಿಕೊಂಡಿರುವ ಕರ್ನಾಟಕ ಕಾಂಗ್ರೆಸ್, ಇದು ದೇಶದ ಬದಲಾವಣೆಯ ಹೊಸ 'ಇಂಕ್ವಿಲಾಬ್' ಎಂದು ಬರೆದುಕೊಂಡಿದೆ.
''ಮಳೆ ಬರಲಿ, ಬಿರುಗಾಳಿ ಬೀಸಲಿ ಅಥವಾ ಚಂಡಮಾರುತವೇ ಬರಲಿ ಭಾರತ ಇನ್ನು ನಿಲ್ಲುವುದಿಲ್ಲ. ಹಣದುಬ್ಬರ, ನಿರುದ್ಯೋಗ ಮತ್ತು ದ್ವೇಷದ ವಿರುದ್ಧ ಜನರು ಮೌನ ಮುರಿದಿದ್ದಾರೆ. ಇದು ದೇಶದ ಬದಲಾವಣೆಯ ಹೊಸ 'ಇಂಕ್ವಿಲಾಬ್'' ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.
ಇದನ್ನೂ ಓದಿ: ಹಂಸಲೇಖ ಆರೋಗ್ಯದ ಬಗ್ಗೆ ವದಂತಿ: ಪುತ್ರಿ ತೇಜಸ್ವಿನಿ ಸ್ಪಷ್ಟನೆ
ಮಳೆ ಬರಲಿ, ಬಿರುಗಾಳಿ ಬೀಸಲಿ ಅಥವಾ ಚಂಡಮಾರುತವೇ ಬರಲಿ
— Karnataka Congress (@INCKarnataka) October 10, 2022
ಭಾರತ ಇನ್ನು ನಿಲ್ಲುವುದಿಲ್ಲ.
ಹಣದುಬ್ಬರ, ನಿರುದ್ಯೋಗ ಮತ್ತು ದ್ವೇಷದ ವಿರುದ್ಧ ಜನರು ಮೌನ ಮುರಿದಿದ್ದಾರೆ. ಇದು ದೇಶದ ಬದಲಾವಣೆಯ ಹೊಸ 'ಇಂಕ್ವಿಲಾಬ್'.#BharatJodoYatra pic.twitter.com/DNMlDuvc6V