Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಬಿಜೆಪಿಯ ಅಮಿತ್ ಮಾಳವೀಯ ನಿಮ್ಮ ಪೋಸ್ಟ್...

ಬಿಜೆಪಿಯ ಅಮಿತ್ ಮಾಳವೀಯ ನಿಮ್ಮ ಪೋಸ್ಟ್ ರಿಪೋರ್ಟ್‌ ಮಾಡಿದರೆ ಇನ್ಸ್ಟಾಗ್ರಾಂ ಕೂಡಲೇ ಅದನ್ನು ತೆಗೆದುಹಾಕುತ್ತದೆ !

ಜಾಹ್ನವಿ ಸೇನ್ಜಾಹ್ನವಿ ಸೇನ್11 Oct 2022 7:45 PM IST
share
ಬಿಜೆಪಿಯ ಅಮಿತ್ ಮಾಳವೀಯ ನಿಮ್ಮ ಪೋಸ್ಟ್ ರಿಪೋರ್ಟ್‌ ಮಾಡಿದರೆ ಇನ್ಸ್ಟಾಗ್ರಾಂ ಕೂಡಲೇ ಅದನ್ನು ತೆಗೆದುಹಾಕುತ್ತದೆ !

 ಹೊಸದಿಲ್ಲಿ,ಅ.11: ಬಿಜೆಪಿಯ ಐಟಿ ಸೆಲ್ ನ ಮುಖ್ಯಸ್ಥ ಅಮಿತ್ ಮಾಳವೀಯ ತನ್ನ ಪಕ್ಷಕ್ಕೆ ಮತ್ತು ಸರಕಾರಕ್ಕೆ ಅಪಥ್ಯವಾದ ಯಾವುದೇ ಪೋಸ್ಟ್ ನ ಕುರಿತು ವರದಿ ಮಾಡಿದರೆ ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಂ ಅತ್ಯಂತ ವಿಧೇಯವಾಗಿ ಅದನ್ನು ತೆಗೆದುಹಾಕುತ್ತದೆ, ಯಾವುದೇ ಪ್ರಶ್ನೆಯನ್ನು ಅದು ಕೇಳುವುದಿಲ್ಲ. ಸುದ್ದಿ ಜಾಲತಾಣ (thewire.in) ತನ್ನ ವಿಶೇಷ ವರದಿಯಲ್ಲಿ ಇದನ್ನು ಬಹಿರಂಗಗೊಳಿಸಿದೆ.

ಇತ್ತೀಚಿಗೆ ವಿಡಂಬನಾತ್ಮಕ ಅನಾಮಧೇಯ ಖಾತೆ ('Superhumans of Cringetopia')ಪೋಸ್ಟ್ ಮಾಡಿದ್ದ ಉತ್ತರಪ್ರದೇಶದ ನಿವಾಸಿ ಪ್ರಭಾಕರ ಮೌರ್ಯ ಎಂಬಾತ ರಾಜ್ಯದ ಮುಖ್ಯಮಂತ್ರಿ ಆದಿತ್ಯನಾಥರ ಪ್ರತಿಮೆಯನ್ನು ಪೂಜಿಸುತ್ತಿರುವ ವೀಡಿಯೊವನ್ನು ತೆಗೆದುಹಾಕಿದ ಇನ್ಸ್ಟಾಗ್ರಾಂ,ಈ ಪೋಸ್ಟ್ ತನ್ನ ‘ನಗ್ನತೆ ಮತ್ತು ಲೈಂಗಿಕ ವಿಷಯ ’ ಮಾರ್ಗಸೂಚಿಗಳನ್ನು ಉಲ್ಲಂಘಿಸಿತ್ತು ಎಂದು ಸಮಜಾಯಿಷಿ ನೀಡಿತ್ತು. ಈ ಸಮಜಾಯಿಷಿ ವಿಚಿತ್ರವಾಗಿತ್ತು; ಮೌರ್ಯ ಮತ್ತು ಪ್ರತಿಮೆ ಎರಡೂ ಸಂಪೂರ್ಣ ಉಡುಪನ್ನು ಧರಿಸಿದ್ದು,ಗೋಚರವಾಗುವಂಥ ಯಾವುದೇ ಲೈಂಗಿಕ ಅರ್ಥ ವೀಡಿಯೊದಲ್ಲಿರಲಿಲ್ಲ.

ಆ ಸಮಯದಲ್ಲಿ ತಮ್ಮನ್ನು ಶಿಕ್ಷಣತಜ್ಞರು ಮತ್ತು ಪತ್ರಕರ್ತರ ಗುಂಪು ಎಂದು ಕರೆದುಕೊಳ್ಳುವ (@cringearchivist) ಹ್ಯಾಂಡಲ್ ನ ಅಡ್ಮಿನ್ಗಳು ಇನ್ಸ್ಟಾಗ್ರಾಮ್ ನ ಕೃತಕ ಬುದ್ಧಿಮತ್ತೆ ಚಾಲಿತ ಮೇಲ್ವಿಚಾರಣೆ ವ್ಯವಸ್ಥೆಯಲ್ಲಿ ದೋಷವಿದೆ ಮತ್ತು ಅದು ಪೋಸ್ಟ್ ನಗ್ನತೆಯನ್ನು ತೋರಿಸುತ್ತಿದೆ ಎಂದು ತಪ್ಪಾಗಿ ಬಿಂಬಿಸಿತ್ತು ಎಂದು ಭಾವಿಸಿದ್ದರು.
ಕುತೂಹಲದ ವಿಷಯವೆಂದರೆ ವೀಡಿಯೊವನ್ನು ಪೋಸ್ಟ್ ಮಾಡಿದ್ದ ಎರಡೇ ನಿಮಿಷಗಳಲ್ಲಿ ಅದನ್ನು ತೆಗೆದುಹಾಕಲಾಗಿತ್ತು.

ಈ ವಿಷಯದ ಬೆನ್ನತ್ತಿದ thewire.in  ವಾಸ್ತವದಲ್ಲಿ ಅದು ಅಲ್ಗಾರಿದಮ್ ದೋಷವಾಗಿರಲಿಲ್ಲ ಮತ್ತು ಇನ್‌ಸ್ಟಾಗ್ರಾಂ ಬಳಕೆದಾರ (@amitmalviya) ಪೋಸ್ಟ್ ಅನ್ನು ವರದಿ ಮಾಡಿದ್ದರಿಂದಲೇ,ಅದೂ ಕೇವಲ ಎರಡು ನಿಮಿಷಗಳಲ್ಲಿ ಅದನ್ನು ತೆಗೆದುಹಾಕಲಾಗಿತ್ತು ಎನ್ನುವುದನ್ನು ಮೆಟಾದಲ್ಲಿಯ ಮೂಲದಿಂದ ತಿಳಿದುಕೊಂಡಿತ್ತು. ಈ ಹ್ಯಾಂಡಲ್ ಬಿಜೆಪಿಯ ಕುಖ್ಯಾತ ಐಟಿ ಸೆಲ್ ನ ಮುಖ್ಯಸ್ಥ ಅಮಿತ್ ಮಾಳವೀಯಗೆ ಸೇರಿದ್ದಾಗಿದೆ. 

thewire.in ಗೆ ಲಭ್ಯವಾಗಿರುವ ಆಂತರಿಕ ಇನ್ಸ್ಟಾಗ್ರಾಂ ವರದಿಯು ಕಂಪನಿಯ ಮಾಡರೇಟರ್ಗಳು ಪೋಸ್ಟ್ ಅನ್ನು ಪರಿಶೀಲಿಸದೆ ಕೇವಲ ಹ್ಯಾಂಡಲ್ ನ (ಮಾಳವೀಯ) ಗುರುತಿನ ಆಧಾರದಲ್ಲಿ ಅದನ್ನು ತಕ್ಷಣವೇ ತೆಗೆದುಹಾಕಲಾಗಿತ್ತು ಎನ್ನುವುದನ್ನು ತೋರಿಸಿದೆ. ವಾಸ್ತವದಲ್ಲಿ ಮಾಳವೀಯ ವರದಿ ಮಾಡುವ ಯಾವುದೇ ಪೋಸ್ಟ್ ಇದೇ ರೀತಿಯಲ್ಲಿ ಪರಿಗಣಿಸಲಾಗುತ್ತದೆ, ಯಾವುದೇ ಪ್ರಶ್ನೆಯನ್ನು ಕೇಳದೇ ಅದನ್ನು ತಕ್ಷಣ ಇನ್ಸ್ಟಾಗ್ರಾಮ್ನಿಂದ ಕಿತ್ತುಹಾಕಲಾಗುತ್ತದೆ. ಸೆಪ್ಟಂಬರ್ ತಿಂಗಳೊಂದರಲ್ಲೇ ಮಾಳವೀಯ ಇನ್ಸ್ಟಾಗ್ರಾಮ್ ನಲ್ಲಿಯ 705 ಪೋಸ್ಟ್ ಗಳ ಕುರಿತು ವರದಿ ಮಾಡಿದ್ದರು ಮತ್ತು ಅವೆಲ್ಲವನ್ನೂ ತೆಗೆಯಲಾಗಿತ್ತು ಎಂದು ಮೆಟಾದಲ್ಲಿಯ ಮೂಲವು thewire.inಗೆ ತಿಳಿಸಿದೆ.

ಕೃಪೆ: Thewire.in

share
ಜಾಹ್ನವಿ ಸೇನ್
ಜಾಹ್ನವಿ ಸೇನ್
Next Story
X