ಪಾವಗಡ: ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದ ಡಯಟ್ ಪ್ರಾಂಶುಪಾಲ
![ಪಾವಗಡ: ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದ ಡಯಟ್ ಪ್ರಾಂಶುಪಾಲ ಪಾವಗಡ: ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದ ಡಯಟ್ ಪ್ರಾಂಶುಪಾಲ](https://www.varthabharati.in/sites/default/files/images/articles/2022/10/11/352655-1665506427.jpeg)
ವೈ.ಎನ್. ರಾಮಕೃಷ್ಣಯ್ಯ- ಡಯಟ್ ಪ್ರಾಂಶುಪಾಲ
ಪಾವಗಡ :ಸಮಾರಂಭದಲ್ಲಿ ಊಟ ನೀಡಿದ ಹೋಟೆಲ್ ಗೆ ಬಿಲ್ ನೀಡಲು ಲಂಚ ಸ್ವೀಕರಿಸುತ್ತಿದ್ದ ಮಧುಗಿರಿ ಶೈಕ್ಷಣಿಕ ಜಿಲ್ಲೆಯ ಡಯಟ್ ಪ್ರಾಚಾರ್ಯ ವೈ.ಎನ್. ರಾಮಕೃಷ್ಣಯ್ಯ ಎಂಬುವರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.
ಇತ್ತೀಚೆಗೆ ಶಿರಾ ನಗರದಲ್ಲಿ ನಡೆದಿದ್ದ ಮಧುಗಿರಿ ಜಿಲ್ಲೆಯ ಶೈಕ್ಷಣಿಕ ಸಮಾವೇಶದಲ್ಲಿ ಅಧಿಕಾರಿಗಳು ಸಿಬ್ಬಂದಿಗಳು ಮತ್ತು ಶಿಕ್ಷಕರ ಊಟದ ವ್ಯವಸ್ಥೆಗಾಗಿ ಶಿರಾ ನಗರದ ಖಾಸಗಿ ಕೆಫೆಗೆ ವಹಿಸಲಾಗಿತ್ತು. ಕಾರ್ಯಕ್ರಮದ ನಂತರ ಬಿಲ್ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಕೆಫೆಯ ಮಾಲಕ ಹನುಮಂತರಾಜು ಎಂಬುವರ ಬಳಿ 17 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಈ ಬಗ್ಗೆ ಹನುಮಂತರಾಜು ಜಿಲ್ಲಾ ಲೋಕಾಯುಕ್ತರಿಗೆ ದೂರು ನೀಡಿದ್ದರು.
ಈ ಹಿನ್ನೆಲೆಯಲ್ಲಿ ಸೋಮವಾರ ಕಚೇರಿಯಲ್ಲಿ ಲಂಚ ಸ್ವೀಕರಿಸುವ ಸಂದರ್ಭದಲ್ಲಿ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ಹಣದ ಸಮೇತ ವಶಕ್ಕೆ ಪಡೆದಿದ್ದಾರೆ.
ಕಾರ್ಯಾಚರಣೆಯಲ್ಲಿ ಲೋಕಾಯುಕ್ತ ಡಿವೈಎಸ್ಪಿ ಸಿ ಆರ್ ರವೀಶ್. ಪಿ ಐ ರಾಮರೆಡ್ಡಿ ಮತ್ತು ಸಿಬ್ಬಂದಿ ಇದ್ದರು.
Next Story