ದೇಶವಿಂದು ವೈಭವದಿಂದ ಕಂಗೊಳಿಸುತ್ತಿದೆ, ಕಾಂಗ್ರೆಸ್ಸಿಗರಿಗೆ ಹೊಟ್ಟೆ ಕಿಚ್ಚೇಕೆ?: ಬಿಜಿಪಿ

ಬೆಂಗಳೂರು: 'ನಕಲಿ ಗಾಂಧಿ ಪರಿವಾರದಂತೆ ಮೋದಿ ಸರ್ಕಾರ ಸಾಲ ಮಾಡಿ ತನ್ನ ಪರಿವಾರದ ಜೋಳಿಗೆ ತುಂಬಿಸಿಕೊಂಡಿಲ್ಲ. ದೇಶವಿಂದು ವೈಭವದಿಂದ ಕಂಗೊಳಿಸುತ್ತಿದೆ, ಕಾಂಗ್ರೆಸ್ಸಿಗರಿಗೆ ಹೊಟ್ಟೆ ಕಿಚ್ಚೇಕೆ?' ಎಂದು ಬಿಜೆಪಿ ಪ್ರಶ್ನೆ ಮಾಡಿದೆ.
ಈ ಕುರಿತು ಸರಣಿ ಟ್ವೀಟ್ ಮಾಡಿರುವ ಬಿಜೆಪಿ, 'ಸಿದ್ದರಾಮಯ್ಯ ಅವರ ಸಾಲದ ಇತಿಹಾಸ ತೆರೆದಿಡುತ್ತಿದ್ದೇವೆ. ವಿಪಕ್ಷ ನಾಯಕರಿಗೆ ತಾವು ಮಾಡಿದ ಸಾಲದ ಬಗ್ಗೆ ಜಾಣ ಮರೆವು ಏಕೆ?' ಎಂದು ಪ್ರಶ್ನಿಸಿದೆ.
''ಅಧಿಕಾರದುದ್ದಕ್ಕೂ ನಿದ್ದೆ ಮಾಡುತ್ತಾ 1 ಲಕ್ಷ ಕೋಟಿಗೂ ಅಧಿಕ ಮೊತ್ತದ ಸಾಲ ಮಾಡಿ ರಾಜ್ಯವನ್ನೇ ಸಾಲದ ಶೂಲಕ್ಕೇರಿಸಿದ್ದು ಹೇಗೆ ಮರೆಯಲು ಸಾಧ್ಯ? ಕಾಂಗ್ರೆಸ್ಸಿನ ತುಘಲಕ್ ದರ್ಬಾರಿನಲ್ಲಿ ಪ್ರತಿಯೊಬ್ಬ ಪ್ರಜೆಯ ಮೇಲೆಯೂ ₹ 44,769/- ಸಾಲದ ಹೊರೆ ಹೊರೆಸಿದ್ದನ್ನು ಮರೆತಿರಾ?'' ಎಂದು ಸಿದ್ದರಾಮಯ್ಯರನ್ನು ಪ್ರಶ್ನೆ ಮಾಡಿದೆ.
''2013 - 20 ಸಾವಿರ ಕೋಟಿ 2014 - 21 ಸಾವಿರ ಕೋಟಿ 2015 - 21 ಸಾವಿರ ಕೋಟಿ 2016 - 28 ಸಾವಿರ ಕೋಟಿ 2017 - 35 ಸಾವಿರ ಕೋಟಿ ನಿಮಗೆ ಮರೆತು ಹೋಗಿರಬಹುದು, ರಾಜ್ಯದ ಜನತೆ ಮರೆತಿಲ್ಲ'' ಎಂದು ಬಿಜೆಪಿ ಟ್ವೀಟಿಸಿದೆ.
ಮಾನ್ಯ @siddaramaiah ಅವರೇ, ನಿಮ್ಮ ಸಾಲದ ಇತಿಹಾಸ ತೆರೆದಿಡುತ್ತಿದ್ದೇವೆ.
— BJP Karnataka (@BJP4Karnataka) October 12, 2022
ಮೋದಿ ಸರ್ಕಾರ ಸಾಲ ಮಾಡಿ ತನ್ನ ಪರಿವಾರದ ಜೋಳಿಗೆ ತುಂಬಿಸಿಕೊಂಡಿಲ್ಲ "ನಕಲಿ ಗಾಂಧಿ ಪರಿವಾರದಂತೆ".
ದೇಶವಿಂದು ವೈಭವದಿಂದ ಕಂಗೊಳಿಸುತ್ತಿದೆ, ಕಾಂಗ್ರೆಸ್ಸಿಗರಿಗೆ ಹೊಟ್ಟೆಕಿಚ್ಚೇಕೆ?#ಸಾಲರಾಮಯ್ಯ pic.twitter.com/2uU1sSuD26







