ಮೈಸೂರು ದಸರಾ ಜಂಬೂ ಸವಾರಿ: ಹೆಗ್ಗುಂಜೆ ಹೋಳಿ ಗುಮಟೆ ನೃತ್ಯಕ್ಕೆ ದ್ವಿತೀಯ ಬಹುಮಾನ

ಉಡುಪಿ, ಅ.15: ವಿಶ್ವವಿಖ್ಯಾತ ಮೈಸೂರು ದಸರಾ ಜಂಬೂ ಸವಾರಿ ಮೆರವಣಿಗೆಯಲ್ಲಿ ಭಾಗವಹಿಸಿದ ಅತ್ಯುತ್ತಮ ತಂಡಗಳಿಗೆ ಬಹುಮಾನವನ್ನು ಇಂದು ಸಂಜೆ ಘೋಷಿಸಲಾಗಿದ್ದು ಉಡುಪಿ ಜಿಲ್ಲೆ ಮಂದಾರ್ತಿ ಹೆಗ್ಗುಂಜೆಯ ಕುಡುಬಿಯರ ತಂಡ ದ್ವಿತೀಯ ಬಹುಮಾನ ಗೆದ್ದುಕೊಂಡಿದೆ.
ಮಂದಾರ್ತಿ ಹೆಗ್ಗುಂಜೆಯ ಶ್ರೀಮಲ್ಲಿಕಾರ್ಜುನ ಕುಡುಬಿ ಜನಪದ ಕಲಾ ಸಂಘದ ಹೋಳಿ ಗುಮಟೆ ನೃತ್ಯ ತಂಡ ಇದರಲ್ಲಿ ಭಾಗವಹಿಸಿದ್ದು, ಈ ತಂಡಕ್ಕೆ ಎರಡನೇ ಬಹುಮಾನ ಬಂದಿರುವುದಾಗಿ ಮಾಹಿತಿ ಬಂದಿದೆ.

Next Story





