ಬಿಹಾರ:ದೋಣಿ ಮುಳುಗಿ ಏಳು ಕೃಷಿಕಾರ್ಮಿಕರ ಸಾವು
PC: India Today
ಕಥಿಹಾರ್,ಅ.16: ಬಿಹಾರದಲ್ಲಿ ಗಂಗಾನದಿಯನ್ನು ಬರಾಂಡಿ ಉಪನದಿಯು ಸೇರುವ ಸಂಗಮದಲ್ಲಿ ದೋಣಿಯೊಂದು ಮುಳುಗಿ ಏಳು ಜನರು ಮೃತಪಟ್ಟಿದ್ದಾರೆ.ಶನಿವಾರ ಸಂಜೆ ಈ ಅವಘಡ ಸಂಭವಿಸಿದ್ದು,ದೋಣಿಯು 10 ಕೃಷಿಕಾರ್ಮಿಕರನ್ನು ಕೆಲಸದಿಂದ ವಾಪಸ್ ಕರೆತರುತ್ತಿತ್ತು. ಮೂವರು ಈಜಿ ಪಾರಾಗಿದ್ದರೆ,ಇತರ ಏಳು ಜನರು ನಾಪತ್ತೆಯಾಗಿದ್ದರು. ಸ್ಥಳೀಯ ಮುಳುಗುಗಾರರು ಮತ್ತು ಎನ್ಡಿಆರ್ಎಫ್ ಸಿಬ್ಬಂದಿಗಳು ರಾತ್ರಿಯಿಡೀ ಶೋಧ ಕಾರ್ಯಾಚರಣೆ ನಡೆಸಿ ಎಲ್ಲ ಏಳು ಜನರ ಶವಗಳನ್ನು ನದಿಯಿಂದ ಹೊರಕ್ಕೆ ತೆಗೆದಿದ್ದಾರೆ ಎಂದು ಕಥಿಹಾರ್ ಜಿಲ್ಲಾಧಿಕಾರಿ ಉದಯನ ಮಿಶ್ರಾ ತಿಳಿಸಿದರು.ದುರಂತದ ಬಗ್ಗೆ ಶೋಕ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ನಿತೀಶ ಕುಮಾರ ಅವರು ಮೃತರ ಕುಟುಂಬಗಳಿಗೆ ತಲಾ ನಾಲ್ಕು ಲ.ರೂ.ಗಳ ಪರಿಹಾರವನ್ನು ಪ್ರಕಟಿಸಿದ್ದಾರೆ.
Next Story