ಶಂಕರಪುರ ಮಲ್ಲಿಗೆ ಕನಿಷ್ಠ ದರ ಹೆಚ್ಚಳಕ್ಕೆ ಆಗ್ರಹಿಸಿ ಮನವಿ

ಶಿರ್ವ, ಅ.17: ಶಂಕರಪುರ ಮಲ್ಲಿಗೆಯ ಕನಿಷ್ಠ ದರ ಹೆಚ್ಚಿಸುವಂತೆ ಒತ್ತಾಯಿಸಿ ಶಂಕರಪುರ(ಉಡುಪಿ)ಮಲ್ಲಿಗೆ ಬೆಳೆಗಾರರ ಸಂಘದ ವತಿಯಿಂದ ಮಲ್ಲಿಗೆ ವರ್ತಕರ ಸಂಘದ ಅಧ್ಯಕ್ಷ ಇಗ್ನೇಷಿಯಸ್ ಡಿಸೋಜ ಸಹಿತ ಎಲ್ಲಾ ವರ್ತಕರಿಗೆ ಏಕಕಾಲದಲ್ಲಿ ಮನವಿಯನ್ನು ಶಂಕರಪುರದಲ್ಲಿ ರವಿವಾರ ಸಲ್ಲಿಸಲಾಯಿತು.
ಹವಾಮಾನ ವೈಪರೀತ್ಯ, ಕೀಟ ರೋಗ ಭಾದೆಗೊಂಡು ಮಲ್ಲಿಗೆ ಬೆಳೆಗಾರರು ಸಂಕಷ್ಟದಲ್ಲಿದ್ದು ಇಳುವರಿ ಕುಂಠಿತವಾಗುತ್ತಿದೆ. ಮಲ್ಲಿಗೆ ಬೆಳೆಗಾರರು ಮತ್ತು ಅವರ ಅವಲಂಬಿತರ ಹಿತಾಸಕ್ತಿಯನ್ನು ರಕ್ಷಿಸುವಲ್ಲಿ ಕನಿಷ್ಠ ದರ ಕುಸಿತದ ಸಂದರ್ಭದಲ್ಲಿ ಹೆಚ್ಚಿನ ದರ ನಿಗದಿಗೊಳಿಸಿ ದರ ಸಮತೋಲನಕ್ಕೆ ಪ್ರಯತ್ನಿಸು ವಂತೆ ವಿನಂತಿಸಲಾಯಿತು.
ಈ ಸಂದರ್ಭದಲ್ಲಿ ಸಂಘದ ಗೌರವಾಧ್ಯಕ್ಷ ರಾಮಕೃಷ್ಣ ಶರ್ಮ ಬಂಟಕಲ್ಲು, ಸಂಘದ ಅಧ್ಯಕ್ಷ ಹಾಗೂ ಕುರ್ಕಾಲು ಗ್ರಾಪಂ ಅಧ್ಯಕ್ಷ ಮಹೇಶ್ ಶೆಟ್ಟಿ ಬಿಳಿ ಯಾರು, ಪ್ರಧಾನ ಕಾರ್ಯದರ್ಶಿ ಭಾಸ್ಕರ ಆಚಾರ್ಯ ಬಿಳಿಯಾರು, ಸದಸ್ಯ ರಾದ ಅಶೋಕ್ ಅಮೀನ್, ಅರುಣ್ ಮಡಿವಾಳ, ಪ್ರಮೀಳ ಗಣೇಶ ಆಚಾರ್ಯ, ರಜನಿ, ಜಯಂತಿ, ಸದಸ್ಯರು, ಮಲ್ಲಿಗೆ ಬೆಳೆಗಾರರು ಉಪಸ್ಥಿತರಿದ್ದರು.





