ಮಣಿಪಾಲ: ಅ.19ರಂದು ಮಾಲಿನಿ ಪಾರ್ಥಸಾರಥಿ ಉಪನ್ಯಾಸ
ಮಣಿಪಾಲ, ಅ.18: ‘ದಿ ಹಿಂದು’ ಪತ್ರಿಕೆಯ ಮಾಜಿ ಸಂಪಾದಕಿ, ಪ್ರಸ್ತುತ ದಿ ಹಿಂದು ಗ್ರೂಪ್ನ ಅಧ್ಯಕ್ಷೆ ಹಾಗೂ ಸಂಪಾದಕೀಯ ನಿರ್ವಹಣೆಯ ನಿರ್ದೇಶಕರಾಗಿರುವ ಮಾಲಿನಿ ಪಾರ್ಥಸಾರಥಿ ಅವರು ಬುಧವಾರ ಮಣಿಪಾಲ ಇನ್ಸ್ಟಿಟ್ಯೂಟ್ ಆಫ್ ಕಮ್ಯುನಿಕೇಷನ್ (ಎಂಐಸಿ)ನಲ್ಲಿ ಎಂ.ವಿ.ಕಾಮತ್ ದತ್ತಿನಿಧಿ ಉಪನ್ಯಾಸ ನೀಡಲಿದ್ದಾರೆ.
‘ಡಿಜಿಟಲ್ ಯುಗದಲ್ಲಿ ಪತ್ರಿಕೋದ್ಯಮದ ಮೇಲೆ ಸಾರ್ವಜನಿಕರ ವಿಶ್ವಾಸವನ್ನು ಉಳಿಸಿಕೊಳ್ಳುವುದು’ ಎಂಬ ವಿಷಯದ ಮೇಲೆ ಉಪನ್ಯಾಸ ನೀಡಲಿದ್ದಾರೆ. ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಷನ್ನ (ಮಾಹೆ) ಪ್ರೊ ಚಾನ್ಸಲರ್ ಡಾ.ಎಚ್.ಎಸ್.ಬಲ್ಲಾಳ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.
ಮಾಹೆ ರಿಜಿಸ್ಟ್ರಾರ ಡಾ.ನಾರಾಯಣ ಸಭಾಹಿತ್, ಎಂಐಸಿಯ ನಿರ್ದೇಶಕಿ ಡಾ.ಪದ್ಮಾರಾಣಿ ಅವರು ಉಪಸ್ಥಿತರಿರುವರು ಎಂದು ಎಂಐಸಿಯ ಪ್ರಕಟಣೆ ತಿಳಿಸಿದೆ.
Next Story