Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಜಿಲ್ಲೆಗಳು
  3. ದಕ್ಷಿಣಕನ್ನಡ
  4. ಮಂಗಳೂರು: ನಿತಿನ್ ವಾಸ್ ತಂಡದಿಂದ...

ಮಂಗಳೂರು: ನಿತಿನ್ ವಾಸ್ ತಂಡದಿಂದ ಸಿದ್ಧಗೊಂಡಿದೆ ಪರಿಸರ ಸ್ನೇಹಿ ಪಟಾಕಿ

► ದೀಪಾವಳಿ ಸಡಗರಕ್ಕೆ ವಿಭಿನ್ನ ಪಟಾಕಿ ► ಇದು ಸಿಡಿಯುವುದಿಲ್ಲ, ಗಿಡವಾಗಿ ಬೆಳೆಯುವುದು

ವಾರ್ತಾಭಾರತಿವಾರ್ತಾಭಾರತಿ19 Oct 2022 5:58 PM IST
share
ಮಂಗಳೂರು: ನಿತಿನ್ ವಾಸ್ ತಂಡದಿಂದ ಸಿದ್ಧಗೊಂಡಿದೆ ಪರಿಸರ ಸ್ನೇಹಿ ಪಟಾಕಿ

ಮಂಗಳೂರು, ಅ. 19: ದೀಪಾವಳಿ ಹಬ್ಬದಲ್ಲಿ ದೀಪಗಳ ಜತೆಗೆ ಪಟಾಕಿಗೂ ಪ್ರಮುಖ ಸ್ಥಾನವಿದೆ. ಆದರೆ ಪಟಾಕಿಗಳು ಶಬ್ಧ ಮಾಲಿನ್ಯದ ಜತೆಗೆ ವಾಯು ಮಾಲಿನ್ಯಕ್ಕೂ ಕಾರಣವಾಗುತ್ತಿರುವುದರಿಂದ ಕಡಿಮೆ ಶಬ್ಧ, ವಾಯು ಮಾಲಿನ್ಯದ ಪಟಾಕಿಗಳನ್ನೇ ಇತ್ತೀಚೆಗೆ ಜನಸಾಮಾನ್ಯರು ಇಷ್ಟ ಪಡುತ್ತಾರೆ. ಈ ನಡುವೆ, ಮಂಗಳೂರಿನ ಪರಿಸರ ಪ್ರೇಮಿ ನಿತಿನ್ ವಾಸ್ ಈ ಬಾರಿ ವಿಶೇಷ ರೀತಿಯ ಪಟಾಕಿಗಳನ್ನು ತಯಾರಿಗೊಳಿಸುತ್ತಿದ್ದಾರೆ.

ಇದು ಸದ್ದು ಮಾಡುವುದಿಲ್ಲ, ಸಿಡಿಯುವುದಿಲ್ಲ, ಪರಿಸರ ಮಾಲಿನ್ಯವನ್ನಂತು ಮಾಡುವುದೇ ಇಲ್ಲ. ಬದಲಿಗೆ ಈ ಪಟಾಕಿಗಳನ್ನು ಹೂವಿನ ಕುಂಡ, ನೆಲಕ್ಕೆ ಹಾಕಿದರೆ ಅವುಗಳು ಗಿಡವಾಗಿ ಬೆಳೆಯುತ್ತವೆ. ಈ ಪಟಾಕಿ ಒಳಗಿರುವ ಬೀಜಗಳು ಮಣ್ಣಲ್ಲಿ ಸೇರಿ ಮೊಳಕೆಯೊಡೆದು ತರಕಾರಿ, ಹಣ್ಣಿನ ಗಿಡಗಳಾಗಿ ಪರಿಸರ ಸ್ನೇಹಿಯಾಗಿ ಜೀವ ಪಡೆಯಬಲ್ಲವು. ಪಟಾಕಿಗಳು ಒಮ್ಮೆ ಉರಿಸಿದ ಬಳಿಕ ಬೂದಿಯಾಗಿ ಬಿಡುತ್ತವೆ. ಆದರೆ ಈ ಪಟಾಕಿಗಳು ಹಾಗಲ್ಲ. ಮಣ್ಣಿಗೆ ಸೇರಿ ಗಿಡಗಳಾಗಿ, ನಮ್ಮ ಜತೆ ತಿಂಗಳುಗಳ ಕಾಲ ಇರಬಲ್ಲವು.

ಮಂಗಳೂರಿನ ಪಕ್ಷಿಕೆರೆಯಲ್ಲಿ ಪೇಪರ್ ಸೀಡ್ಸ್ ಸಂಸ್ಥೆ ಮೂಲಕ ಚಿರ ಪರಿಚಿತರಾಗಿರುವ ನಿತಿನ್ ವಾಸ್ ತಂಡ ಈ ಬಾರಿ ದೀಪಾವಳಿಗೆ ಈ ಪರಿಸರ ಸ್ನೇಹಿ ಪಟಾಕಿಗಳನ್ನು ತಯಾರಿಸುತ್ತಿದ್ದಾರೆ. ಕಳೆದ ಎರಡು ತಿಂಗಳಿನಿಂದ ಪಟಾಕಿಗಳ ತಯಾರಿ ಕಾರ್ಯ ನಡೆದಿದೆ.

ನಿತಿನ್ ವಾಸ್ ಅವರ ತಂಡ ತಯಾರಿಸುತ್ತಿರುವ ಈ ವಿನತೂನ ಪಟಾಕಿಗಳ ಪ್ಯಾಕ್ ಸುಡುಮದ್ದುಗಳಿಂದ ಕೂಡಿದ ಪಟಾಕಿಗಳನ್ನೇ ಹೋಲುತ್ತವೆ. ಬೀಡಿ ಪಟಾಕಿಯಲ್ಲಿ ಮೆಣಸು, ಟೊಮೆಟೋ, ಪಾಲಕ್, ಲಕ್ಷ್ಮೀ ಬಾಂಬ್‌ನಲ್ಲಿ ಬೀಟ್ರೋಟ್, ಸನ್ ಫ್ಲವರ್ ಸೌತೆಕಾಯಿ, ಸುಕ್ಲಿ ಬಾಂಬ್‌ನಲ್ಲಿ ಮೆಣಸಿನಕಾಯಿ, ಟೊಮೊಟೋ, ಮೂಲಂಗಿ, ರಾಕೆಟ್‌ನಲ್ಲಿ ಬೀಟ್ರೋಟ್, ಸನ್‌ಫ್ಲವರ್, ಮಳೆ (ದುರ್ಸು) ಪಟಾಕಿಯಲ್ಲಿ ಸೌತೆ, ಬೆಂಡೆಕಾಯಿ, ನೆಲಚಕ್ರದಲ್ಲಿ ಪಾಲಕ್, ಮೂಲಂಗಿ ಬೀಜಗಳನ್ನು ಹಾಕಿ ಪಟಾಕಿ ರೂಪ ನೀಡಲಾಗಿದೆ.

ನಿತಿನ್ ವಾಸ್ ನೇತೃತ್ವದ 30 ಜನರ ತಂಡ ಈ ಪಟಾಕಿಗಳನ್ನು ತಯಾರಿಸುವ ಕೆಲಸ ಮಾಡುತ್ತಿದೆ. ಆ ಮೂಲಕ ಉದ್ಯೋಗವನ್ನೂ ಸೃಷ್ಟಿಸಲಾಗಿದೆ. ಆರು ಬಗೆಯ ಈ ಪರಿಸರ ಸ್ನೇಹಿ ಪಟಾಕಿಗಳನ್ನು ಒಂದು ಬಾಕ್ಸ್ ಮಾಡಿ ಮಾರಾಟಕ್ಕೆ ತಯಾರು ಮಾಡಲಾಗುತ್ತಿದೆ.

‘‘ಹೊಸ ಪರಿಕಲ್ಪನೆಯೊಂದಿಗೆ ಈ ಬಾರಿ ಪರಿಸರ ಸ್ನೇಹಿ ಪಟಾಕಿಗಳನ್ನು ತಯಾರಿಸಲಾಗಿದೆ. ಹಬ್ಬಗಳ ಸಡಗರದಲ್ಲಿ ಪಟಾಕಿಗಳ ಜತೆಗೆ ಈ ಪರಿಸರ ಸ್ನೇಹಿ ಪಟಾಕಿಗಳು ಪರಿಸರ ಸಂರಕ್ಷಣೆಗೆ ಪೂರಕವಾಗಬಲ್ಲದು ಎಂಬ ಆಶಾವಾದದೊಂದಿಗೆ ಸುಮಾರು 30 ಮಂದಿ ಸೇರಿ ಪಟಾಕಿಗಳನ್ನು ತಯಾರಿಸಿ ಗ್ರಾಹಕರಿಗೆ ಒದಗಿಸಲಾಗುತ್ತಿದೆ. ಆರು ಬಗೆಯ ತಲಾ 2ರಂದೆ 12 ಪಟಾಕಿಗಳನ್ನು ಹಾಕಿ ಪ್ಯಾಕೆಟ್ ತಯಾರಿಸಲಾಗಿದೆ’’ ಎನ್ನುತ್ತಾರೆ ಪರಿಸರ ಪ್ರೇಮಿ ನಿತಿನ್ ವಾಸ್. 

share
ವಾರ್ತಾಭಾರತಿ
ವಾರ್ತಾಭಾರತಿ
Next Story
X