ಬ್ರಹ್ಮಾವರ: ಬಸ್ಸಿನಲ್ಲಿ ಮಹಿಳೆಯ ಸರ ಕಳವು

ಬ್ರಹ್ಮಾವರ : ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬರ ಚಿನ್ನದ ಸರ ಕಳವು ಮಾಡಿರುವ ಘಟನೆ ಅ.18ರಂದು ಬೆಳಗ್ಗೆ ನಡೆದಿದೆ.
ಚಾಂತಾರು ಗ್ರಾಮದ ವಿದ್ಯಾನಗರ ನಿವಾಸಿ ಶೀನ ನಾಯ್ಕ ಎಂಬವರ ಪತ್ನಿ ರುಕ್ಮಿಣಿ ಬಾಯಿ(67) ಎಂಬವರು ವೇಗದೂತ ಬಸ್ಸಿನಲ್ಲಿ ಹೊಸೂರು ಗ್ರಾಮದ ಕರ್ಜೆಗೆ ಪ್ರಯಾಣಿಸುತ್ತಿದ್ದು, ಈ ವೇಳೆ ಕಳ್ಳರು, ರುಕ್ಮಿಣಿ ಬಾಯಿ ಅವರ ಕುತ್ತಿಗೆ ಯಲ್ಲಿದ್ದ ಸುಮಾರು 32 ಗ್ರಾಂನ ಚಿನ್ನದ ಸರವನ್ನು ಕಳವು ಮಾಡಿ ಪರಾರಿಯಾಗಿ ದ್ದಾರೆಂದು ದೂರಲಾಗಿದೆ. ಕಳವಾದ ಚಿನ್ನದ ಸರದ ಮೌಲ್ಯ 1,68,932 ರೂ. ಎಂದು ಅಂದಾಜಿಸಲಾಗಿದೆ.
ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





