ಆಶ್ರಮದದಿಂದ ವೃದ್ಧ ನಾಪತ್ತೆ

ಕಾಪು: ಉದ್ಯಾವರದ ಹಿರಿಯ ನಾಗರಿಕರ ಕನಸಿನ ಮನೆಯಲ್ಲಿ ಆಶ್ರಯ ಪಡೆದಿದ್ದ ಹಿರಿಯ ನಾಗರಿಕರೊಬ್ಬರು ವಾಯು ವಿಹಾರಕ್ಕೆ ತೆರಳಿದವರು ವಾಪಾಸ್ಸು ಬಾರದೆ ನಾಪತ್ತೆಯಾಗಿದ್ದಾರೆ.
ನಾಪತ್ತೆಯಾದವರನ್ನು ಗಂಗೊಳ್ಳಿಯ ಸದಾನಂದ ಪೂಜಾರಿ(78) ಎಂದು ಗುರುತಿಸಲಾಗಿದೆ. ಈ ಹಿಂದೆ ಇವರು ಕುಂದಾಪುರದಲ್ಲಿ ಆಟೋ ಚಾಲಕರಾಗಿ ದ್ದರೆಂದು ತಿಳಿದುಬಂದಿದೆ. ಇವರ ಬಗ್ಗೆ ಮಾಹಿತಿ ಸಿಕ್ಕಿದಲ್ಲಿ ಕಾಪು ಪೋಲಿಸ್ ಠಾಣೆಗೆ ತಿಳಿಸಬೇಕು ಎಂದು ಸಮಾಜಸೇವಕ ನಿತ್ಯಾನಂದ ಒಳಕಾಡು ಅವರು ಸೂಚಿಸಿದ್ದಾರೆ.
Next Story





