ರಾಯಚೂರು ತಲುಪಿದ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೊ ಯಾತ್ರೆ
ರಾಯಚೂರು: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ನೇತೃತ್ವದ ಭಾರತ್ ಜೋಡೊ ಪಾದಯಾತ್ರೆಯು ರಾಯಚೂರು ಜಿಲ್ಲೆ ಪ್ರವೇಶಿಸಿದ್ದು, ಅ 23ರವರೆಗೆ ಜಿಲ್ಲೆಯ ವಿವಿಧೆಡೆ ಭಾರತ್ ಜೋಡೊ ಪಾದಯಾತ್ರೆಯ ಅಂಗವಾಗಿ ಕಾಂಗ್ರೆಸ್ ನಾಯಕರು ಸಂಚರಿಸಲಿದ್ದಾರೆ.
ತುಂಗಭದ್ರಾ ಸೇತುವೆಯ ಮೂಲಕ ಮುನ್ನಡೆಯಲಿರುವ ಯಾತ್ರೆಯು ಗಿಲ್ಲೆಸುಗೂರು, ಕೆರೆಬುದೂರು, ಯರಗೇರಾ, ರಾಯಚೂರು ನಗರ, ಶಕ್ತಿನಗರ ಮಾರ್ಗದಲ್ಲಿ ಮುನ್ನಡೆಯಲಿದೆ.
ಪಾದ ಯಾತ್ರೆ ಮಧ್ಯೆ ರೈತರು, ಸ್ಥಳೀಯರ ಜೊತೆಗೆ ರಾಹುಲ್ ಗಾಂಧಿ ಸಂವಾದ ನಡೆಸಲಿದ್ದಾರೆ.