ಐಎಎಸ್ ಅಧಿಕಾರಿಗಳ ವರ್ಗಾವಣೆ; ಮೈಸೂರು ಜಿಲ್ಲಾಧಿಕಾರಿಯಾಗಿ ಡಾ.ರಾಜೇಂದ್ರ ಕೆ.ವಿ
ಬೆಂಗಳೂರು, ಅ.21: ರಾಜ್ಯ ಸರಕಾರ ಹಲವು ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದ್ದು, ನಾಲ್ವರಿಗೆ ಹೆಚ್ಚುವರಿ ಹೊಣೆ ನೀಡಲಾಗಿದೆ.
ಕಪಿಲ್ ಮೋಹನ್- ಎಸಿಎಸ್, ಪ್ರವಾಸೋದ್ಯಮ ಇಲಾಖೆ, ಅನಿಲ್ ಕುಮಾರ್ ಟಿ.ಕೆ.- ಪ್ರಧಾನ ಕಾರ್ಯದರ್ಶಿ, ಕಂದಾಯ ಇಲಾಖೆ ( ಹೆಚ್ಚುವರಿ ಹೊಣೆ) ಅನಿಲ್ ಕುಮಾರ್ ಹಾಲಿ ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ.
ಡಾ. ಪ್ರಸಾದ್ ಎನ್.ವಿ.- ಕಾರ್ಯದರ್ಶಿ, ಕಾರ್ಮಿಕ ಇಲಾಖೆ (ಹೆಚ್ಚುವರಿ ಹೊಣೆ) ಪ್ರಸಾದ್ ಹಾಲಿ ಸಾರಿಗೆ ಇಲಾಖೆ ಕಾರ್ಯದರ್ಶಿಯಾಗಿದ್ದಾರೆ. ಜಯರಾಂ ಎನ್.– ಕಾರ್ಯದರ್ಶಿ, ಕಂದಾಯ ಇಲಾಖೆ (ಹೆಚ್ಚುವರಿ ಹೊಣೆ) ಜಯರಾಂ ಹಾಲಿ ಜಿಡಬ್ಲ್ಯೂಎಸ್ ಎಸ್ ಬಿ ಅಧ್ಯಕ್ಷರಾಗಿದ್ದಾರೆ. ಡಾ. ಕುಮಾರ- ಜಿಲ್ಲಾಧಿಕಾರಿ, ದಕ್ಷಿಣ ಕನ್ನಡ ( ಹೆಚ್ಚುವರಿ ಹೊಣೆ) ಡಾ. ಕುಮಾರ ಹಾಲಿ ದಕ್ಷಿಣ ಕನ್ನಡ ಜಿ.ಪಂ. ಸಿಇಓ ಆಗಿದ್ದಾರೆ.
ಡಾ. ಬಗಾದಿ ಗೌತಮ್-ನಿರ್ದೇಶಕ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಶ್ರೀವಿದ್ಯಾ ಪಿ.ಐ– ಸಿಇಓ, ಇ-ಆಡಳಿತ ಕೇಂದ್ರ ಬೆಂಗಳೂರು, ರಮೇಶ್ ಡಿ.ಎಸ್- ಜಿಲ್ಲಾಧಿಕಾರಿ, ಚಾಮರಾಜನಗರ, ಡಾ.ಗೋಪಾಲಕೃಷ್ಣ ಹೆಚ್.ಎನ್- ಜಿಲ್ಲಾಧಿಕಾರಿ, ಮಂಡ್ಯ, ಜಾನಕಿ ಕೆ.ಎಂ-ಹೆಚ್ಚುವರಿ ಯೋಜನಾ ನಿರ್ದೇಶಕಿ, ಸಕಾಲಡಾ. ರಾಜೇಂದ್ರ ಕೆ.ವಿ- ದಕ್ಷಿಣ ಕನ್ನಡದಿಂದ ಮೈಸೂರು ಜಿಲ್ಲಾಧಿಕಾರಿಯನ್ನಾಗಿ ವರ್ಗಾವಣೆ ಮಾಡಲಾಗಿದೆ.
ಅಶ್ವಥಿ ಎಸ್- ಆಯುಕ್ತೆ, ಪಶು ಸಂಗೋಪನಾ ಇಲಾಖೆ, ಮುಲ್ಲೈ ಮುಹಿಲನ್ – ಉತ್ತರ ಕನ್ನಡ ಜಿಲ್ಲಾಧಿಕಾರಿಯಾಗಿದ್ದ ಇವರು ಆಯುಕ್ತ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಗೆ ವರ್ಗಾವಣೆಯಾಗಿದ್ದಾರೆ.
ಪ್ರಭುಲಿಂಗ್ ಕವಳಿಕಟ್ಟಿ-ಜಿಲ್ಲಾಧಿಕಾರಿ, ಉತ್ತರ ಕನ್ನಡ, ಎಂ.ಎಸ್. ದಿವಾಕರ-ಜಿ.ಪಂ. ಸಿಇಓ, ಚಿತ್ರದುರ್ಗ, ದಿವ್ಯಪ್ರಭು ಜಿ.ಆರ್.ಜೆ.- ಜಿಲ್ಲಾಧಿಕಾರಿ, ಚಿತ್ರದುರ್ಗ, ನಳಿನಿ ಅತುಲ್- ಅಧ್ಯಕ್ಷ, ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ, ರಘುನಂದನ್ ಮೂರ್ತಿ- ಜಿಲ್ಲಾಧಿಕಾರಿ, ಹಾವೇರಿ, ಭನ್ವರ್ ಸಿಂಗ್ ಮೀನಾ- ನಿಯಂತ್ರಕ, ಕೆಪಿಎಸ್ ಸಿ, ಪ್ರಕಾಶ್ ಜಿ.ಟಿ.- ನಿರ್ದೇಶಕ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಡಾ. ಆಕಾಶ್ ಎಸ್.- ಸಿಇಓ, ಜಿ.ಪಂ. ಕೊಡಗು.