Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಓ ಮೆಣಸೇ
  4. ಓ ಮೆಣಸೇ...

ಓ ಮೆಣಸೇ...

ಪಿ.ಎ. ರೈಪಿ.ಎ. ರೈ24 Oct 2022 12:05 AM IST
share
ಓ ಮೆಣಸೇ...

ಇಡೀ ಜಗತ್ತಿನಲ್ಲೇ ಪಾಕಿಸ್ತಾನ ಅತ್ಯಂತ ಅಪಾಯಕಾರಿ ದೇಶ - ಜೋ ಬೈಡನ್, ಅಮೆರಿಕ ಅಧ್ಯಕ್ಷ
 ನಿಮ್ಮ ಮಿತ್ರನಾಗಿರುವ ಯಾವ ದೇಶ ಅಪಾಯಕಾರಿ ಅಲ್ಲ ಹೇಳಿ?

ಭಾರತವನ್ನು ದ್ವೇಷ, ಹಿಂಸೆ, ನಿರುದ್ಯೋಗ ಮುಕ್ತ ಮಾಡುವುದೇ ಭಾರತ್ ಜೋಡೊ ಯಾತ್ರೆಯ ಉದ್ದೇಶ - ಬಿ.ಕೆ.ಹರಿಪ್ರಸಾದ್, ವಿ.ಪ. ನಾಯಕ
 ಕನಿಷ್ಠ ಕಾಂಗ್ರೆಸ್‌ನೊಳಗಿರುವ ನಿರುದ್ಯೋಗ ಅಳಿದರೂ ಭಾರತ್ ಜೋಡೊ ಸಾರ್ಥಕ.

ನಮಗೆ ಎಲ್ಲ ಪ್ರಾದೇಶಿಕ ಭಾಷೆಗಳು ಕೂಡಾ ರಾಷ್ಟ್ರೀಯ ಭಾಷೆಗಳಾಗಿವೆ - ಧರ್ಮೇಂದ್ರ ಪ್ರಧಾನ್, ಕೇಂದ್ರ ಸಚಿವ
ಹಾಗಿದ್ದರೆ ಉತ್ತರ ಭಾರತೀಯರು ಒಂದೆರಡು ಪ್ರಾದೇಶಿಕ ಭಾಷೆಗಳನ್ನು ಕಲಿಯಬಾರದೇ?
 
ಆತ್ಮ ಸಾಕ್ಷಾತ್ಕಾರದಿಂದ ಬ್ರಾಹ್ಮಣತ್ವ ಸಿಗುತ್ತದೆ ಹೊರತು ಜಾತಿಯಿಂದಲ್ಲ - ಬಾಬಾ ರಾಮ್‌ದೇವ್, ಯೋಗ ಗುರು
 ಪತಂಜಲಿ ಕಂಪೆನಿ ಆತ್ಮ ಸಾಕ್ಷಾತ್ಕಾರವನ್ನು ಯಾವಾಗ ಮಾರುಕಟ್ಟೆಗೆ ಬಿಡುಗಡೆ ಮಾಡುತ್ತದೆ?

ಆರೆಸ್ಸೆಸ್‌ನ ಬಗ್ಗೆ ಟೀಕೆ ಮಾಡುವ ಒಂದು ವರ್ಗ ಇದೆ. ಅವರು ಆರೆಸ್ಸೆಸ್ ಬಗ್ಗೆ ಜ್ಞಾನ ಪಡೆದುಕೊಳ್ಳಬಹುದು - ಪ್ರಮೋದ್ ಮಧ್ವರಾಜ್, ಮಾಜಿ ಸಚಿವ
 ಆರೆಸ್ಸೆಸ್‌ನ ಬಗ್ಗೆ ಜ್ಞಾನ ಪಡೆದುಕೊಂಡ ಬಳಿಕ ಅವರು ಟೀಕಿಸಲು ಶುರು ಮಾಡಿದ್ದು.

ನಾನು ರಾಹುಲ್ ಗಾಂಧಿಯಂತೆ ಪೆದ್ದನಲ್ಲ - ಶ್ರೀರಾಮುಲು, ಸಚಿವ
 ಹೌದು ದೇಶ ಒಡೆದು ಸುಲಭದಲ್ಲಿ ಮತ ಕೇಳುವ ದಾರಿ ಇರುವಾಗ ದೇಶ ಜೋಡಿಸಿ ಮತ ಕೇಳಲು ಹೊರಟಿರುವುದು ಪೆದ್ದುತನವೇ ಸರಿ.

ಭಾರತದ ರೂಪಾಯಿ ವೌಲ್ಯ ಕುಸಿಯುತ್ತಿಲ್ಲ, ಅಮೆರಿಕದ ಡಾಲರ್ ವೌಲ್ಯ ಏರಿಕೆ ಕಾಣುತ್ತಿದೆ - ನಿರ್ಮಲಾ ಸೀತಾರಾಮನ್, ಕೇಂದ್ರ ಸಚಿವೆ
 ಭಾರತದಲ್ಲಿ ಹಸಿವು ಏರಿದ್ದು ಅಲ್ಲ, ನೇಪಾಳದಲ್ಲಿ ಹಸಿವು ಕುಸಿದದ್ದು ಎಂದು ಸಮರ್ಥಿಸಿದಂತೆ.

ಗುಲಾಮಗಿರಿಯ ಅಂಶಗಳು ನಮ್ಮ ರಕ್ತದಲ್ಲಿವೆ. ಇದನ್ನು ತೊಲಗಿಸಿ ಆಡಳಿತ ಸೂತ್ರ ನೀಡಲು ಪ್ರಧಾನಿ ಮೋದಿ ಮುಂದಾಗಿದ್ದಾರೆ - ಡಿ.ವಿ.ಸದಾನಂದ ಗೌಡ, ಮಾಜಿ ಸಿಎಂ
 ನಿಮ್ಮ ರಕ್ತದಲ್ಲಿ ಇರುವುದರಿಂದಲೇ ನೀವು ಆರೆಸ್ಸೆಸ್ ಗುಲಾಮರಾಗಿರುವುದು.

ಮೀನು ಸಸ್ಯಾಹಾರಿ. ವಿದೇಶಗಳಲ್ಲಿ ಮೀನನ್ನು ಸಸ್ಯಾಹಾರಿ ಎಂದು ವ್ಯಾಖ್ಯಾನ ಮಾಡುತ್ತಾರೆ - ಬಸವರಾಜ್ ಬೊಮ್ಮಾಯಿ, ಸಿಎಂ
ವಿದೇಶದಲ್ಲಿ ಮೀನು ಮಾಂಸಾಹಾರಿ ಎಂದು ಗುರುತಿಸಲ್ಪಟ್ಟರೆ ಇಲ್ಲಿ ತಿನ್ನಲು ನಿಷೇಧ ಮಾಡುತ್ತೀರಾ ?

ಬಿಜೆಪಿ-ಕಾಂಗ್ರೆಸ್ ಭರಾಟೆ ಏನೇ ಇದ್ದರೂ ಜನರ ಒಲವು ಮಾತ್ರ ಜೆಡಿಎಸ್ ಪರ ಇದೆ - ಕುಮಾರಸ್ವಾಮಿ, ಮಾಜಿ ಸಿಎಂ
ಜೆಡಿಎಸ್ ಒಲವು ಬಿಜೆಪಿಯ ಪರವಾಗಿದೆಯೋ, ಕಾಂಗ್ರೆಸ್ ಪರವಾಗಿದೆಯೋ?

ವರುಣಾ ಕ್ಷೇತ್ರದಿಂದ ಸಿದ್ದರಾಮಯ್ಯ ಸ್ಪರ್ಧಿಸಿದರೆ ನಾನು ಬೇರೆ ಯಾವುದೇ ಕ್ಷೇತ್ರದಿಂದ ಸ್ಪರ್ಧಿಸದೆ ಅವರ ಪರ ಕೆಲಸ ಮಾಡುತ್ತೇನೆ - ಡಾ.ಯತೀಂದ್ರ ಸಿದ್ದರಾಮಯ್ಯ, ಶಾಸಕ
ವರುಣಾ ಕ್ಷೇತ್ರದ ಟಿಕೆಟ್ ಕೊಟ್ಟರೆ ಮಾತ್ರ ಸ್ಪರ್ಧಿಸುತ್ತೇನೆ ಎಂದು ಅಪ್ಪನಿಗೆ ಬೆದರಿಕೆಯೇ?

ಮತಕ್ಕಾಗಿ ದಲಿತರನ್ನು ರಾಜಕಾರಣಿಗಳು ಒಡೆಯುತ್ತಿದ್ದಾರೆ - ಶ್ರೀನಿವಾಸ ಪ್ರಸಾದ್, ಸಂಸದ
ಒಡೆಯಿರಿ ಎಂದು ನೀವಾಗಿ ತಲೆಯನ್ನು ಒಪ್ಪಿಸಿದರೆ ಅವರು ಒಡೆಯದೆ ಇರುತ್ತಾರೆಯೇ?

ಕಾಶ್ಮೀರಿಗಳಿಗೆ ನ್ಯಾಯ ಸಿಗುವವರೆಗೂ ಪಂಡಿತರ ಹತ್ಯೆಗಳು ನಿಲ್ಲುವುದಿಲ್ಲ - ಫಾರೂಕ್ ಅಬ್ದುಲ್ಲಾ, ಕಾಶ್ಮೀರ ಮಾಜಿ ಸಿಎಂ
ಪಂಡಿತರ ಹತ್ಯೆಗಳಿಂದ ಕಾಶ್ಮೀರಿಗಳಿಗೆ ನ್ಯಾಯ ಸಿಗುತ್ತದೆ ಎಂದು ಭಾವಿಸುತ್ತೀರಾ?

ಸುರತ್ಕಲ್ ಟೋಲ್ ಗೇಟ್ ಸ್ಥಾಪನೆಯಾದಾಗ ಮೊದಲು ವಿರೋಧಿಸಿದ್ದು ನಮ್ಮ ಪಕ್ಷ - ನಳಿನ್ ಕುಮಾರ್ ಕಟೀಲು, ಸಂಸದ
ಈಗ ಯಾಕೆ ಬೆಂಬಲಿಸುತ್ತಿದ್ದೀರಿ? ಅದನ್ನು ಹೇಳಿ.

ಬಿಲ್ಕಿಸ್ ಬಾನು ಪ್ರಕರಣದಲ್ಲಿ ಅಪರಾಧಿಗಳ ಬಿಡುಗಡೆ ಕಾನೂನು ಪ್ರಕಾರ ನಡೆದಿದೆ - ಪ್ರಹ್ಲಾದ ಜೋಶಿ, ಕೇಂದ್ರ ಸಚಿವ
ಅತ್ಯಾಚಾರವೇ ಕಾನೂನು ಪ್ರಕಾರ ನಡೆದಿದೆ ಎಂದು ಹೇಳಲಿಲ್ಲ, ಪುಣ್ಯ.

ರಾಜ್ಯದಲ್ಲಿ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ನೀಡುವ ವಿಚಾರದ ಬಗ್ಗೆ ಸರಕಾರ ಗಂಭೀರ ಚಿಂತನೆ ನಡೆಸಿದೆ- ಎಂ.ಟಿ.ಬಿ.ನಾಗರಾಜ್, ಸಚಿವ
ಅಂದರೆ, ಅವರು ಶೋಷಿತ ಸಮುದಾಯಕ್ಕೆ ಸೇರಿರಬೇಕಾಗಿಲ್ಲ ಎಂದಾಯಿತು.

ಇಂಗ್ಲಿಷನ್ನು ಮನುಷ್ಯನ ಬುದ್ಧಿವಂತಿಕೆಯ ಮಾನದಂಡವಾಗಿ ನೋಡಬಾರದು - ನರೇಂದ್ರ ಮೋದಿ, ಪ್ರಧಾನಿ
ನಿಮಗೆ ಇಂಗ್ಲಿಷ್ ಗೊತ್ತಿಲ್ಲ ಎನ್ನುವ ಕಾರಣಕ್ಕಾಗಿಯೇ?

ಸಾಂಘಿಕ ಪ್ರಯತ್ನದಿಂದ ನಾವು ಕಾಂಗ್ರೆಸನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುತ್ತೇವೆ - ಶಶಿ ತರೂರು, ಕಾಂಗ್ರೆಸ್ ಮುಖಂಡ
ಕೇಸರಿ ಸಂಘದ ಬೆಂಬಲದಿಂದ ಎಂದು ಹೇಳುತ್ತಿರಬೇಕು

ಹಿಂದೆ ಭಾರತ ಶಾಂತಿಯ ಸಂಕೇತವಾದ ಪಾರಿವಾಳಗಳನ್ನು ಹಾರಿಬಿಡುತ್ತಿತ್ತು. ಈಗ ಚೀತಾಗಳನ್ನು ಬಿಡುವ ಸಾಮರ್ಥ್ಯವನ್ನು ಹೊಂದಿದೆ - ನರೇಂದ್ರ ಮೋದಿ, ಪ್ರಧಾನಿ
ಅತ್ಯಾಚಾರ ಅಪರಾಧಿಗಳನ್ನು ಹೊರಬಿಡುತ್ತಿರುವುದು ಕೂಡ ಭಾರತದ ಸಾಧನೆಯೇ ಆಗಿದೆ.

ಸಚಿವ ಸ್ಥಾನ ಕೊಡಿ ಎಂದು ಕೇಳುವ ಸ್ವಭಾವ ನನ್ನದಲ್ಲ- ತಿಪ್ಪಾರೆಡ್ಡಿ, ಶಾಸಕ
ಕೊಡುವುದಿಲ್ಲ ಎನ್ನುವುದು ಖಚಿತವಾಗಿರುವಾಗ ಕೇಳಲು ಹೋಗಬಾರದು.

ಎಲ್ಲ ವರ್ಗದವರನ್ನು ಗುರುತಿಸಿ ಒಟ್ಟುಗೂಡಿಸಿಕೊಂಡು ಮೀಸಲಾತಿ ಕಲ್ಪಿಸಿರುವುದು ನಾನು ಮಾತ್ರ - ದೇವೇಗೌಡ, ಮಾಜಿ ಪ್ರಧಾನಿ
ತಮ್ಮ ಕುಟುಂಬದ ಎಲ್ಲ ವರ್ಗದವರನ್ನು ಗುರುತಿಸಿ ಎಂದರೆ ಸರಿಯಾಗುತ್ತದೆ.

share
ಪಿ.ಎ. ರೈ
ಪಿ.ಎ. ರೈ
Next Story
X