ಬೆಂಗಳೂರಿನ ರಸ್ತೆಗಳಲ್ಲಿ ಓಡಾಡಿದರೆ ಮಂಗಳ ಗ್ರಹದಲ್ಲಿ ಸಂಚರಿಸಿದ ಅನುಭವ: ಕಾಂಗ್ರೆಸ್ ವ್ಯಂಗ್ಯ

ಬೆಂಗಳೂರಿನ ರಸ್ತೆಗಳಲ್ಲಿ ಓಡಾಡಿದರೆ
ಮಂಗಳ ಗ್ರಹದಲ್ಲಿ ಸಂಚರಿಸಿದ ಅನುಭವ ಪಡೆಯಬಹುದು!!
ಜನತೆ ಜೀವ ಕೈಯಲ್ಲಿ ಹಿಡಿದು ರಸ್ತೆಗೆ ಇಳಿಯಬೇಕಾದ ಸ್ಥಿತಿ ಇದೆ.
ವೇದಿಕೆ ಮೇಲೆ ದಮ್ಮು ತಾಕತ್ತಿನ ಸವಾಲು ಹಾಕುವ @BSBommai ಅವರೇ, ರಸ್ತೆ ಗುಂಡಿ ಮುಚ್ಚುವಲ್ಲಿ ತಾವು ದಮ್ಮು ತಾಕತ್ತು ತೋರಬೇಕಲ್ಲವೇ?#SayCM pic.twitter.com/qQEcbQ0Ayx
ಬೆಂಗಲೂರು: 'ಬೆಂಗಳೂರಿನ ರಸ್ತೆಗಳಲ್ಲಿ ಓಡಾಡಿದರೆ ಮಂಗಳ ಗ್ರಹದಲ್ಲಿ ಸಂಚರಿಸಿದ ಅನುಭವ ಪಡೆಯಬಹುದು' ಎಂದು ವ್ಯಂಗ್ಯವಾಡಿರುವ ಕಾಂಗ್ರೆಸ್, ರಸ್ತೆ ಗುಂಡಿ ವಿಚಾರವಾಗಿ ರಾಜ್ಯ ಸರಕಾರವನ್ನು ತರಾಟೆಗೆ ತೆಗೆದುಕೊಂಡಿದೆ.
ಈ ಸಂಬಂಧ ಟ್ವೀಟ್ ಮಾಡಿರುವ ಕಾಂಗ್ರೆಸ್, 'ಜನರು ಜೀವ ಕೈಯಲ್ಲಿ ಹಿಡಿದು ರಸ್ತೆಗೆ ಇಳಿಯಬೇಕಾದ ಸ್ಥಿತಿ ಇದೆ. ವೇದಿಕೆ ಮೇಲೆ ದಮ್ಮು ತಾಕತ್ತಿನ ಸವಾಲು ಹಾಕುವ ಮುಖ್ಯಂತ್ರಿ ಬಸವರಾಜ ಬೊಮ್ಮಾಯಿ ಅವರೇ, ರಸ್ತೆ ಗುಂಡಿ ಮುಚ್ಚುವಲ್ಲಿ ತಾವು ಧಮ್ಮು ತಾಕತ್ತು ತೋರಬೇಕಲ್ಲವೇ? ಎಂದು ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.
''ವಿಶ್ವ ಬಂಡವಾಳ ಹೂಡಿಕೆದಾರರ ಸಮಾವೇಶ ನಡೆಸಲು ಮುಂದಾಗಿರುವ ಸರ್ಕಾರ ಈಗಾಗಲೇ ಹೂಡಿಕೆ ಮಾಡಿದವರ ಕೊಡುತ್ತಿರುವ ಉಡುಗೊರೆ - ರಸ್ತೆ ಗುಂಡಿಗಳು. ಪೀಣ್ಯದಲ್ಲಿರುವ ರಸ್ತೆ ಗುಂಡಿಗಳಿಂದ ವಹಿವಾಟಿಗೆ ತೊಂದರೆಯಾಗುತ್ತಿದೆ, ಆರ್ಥಿಕತೆಗೆ ಪೆಟ್ಟು ಬೀಳುತ್ತಿದೆ.ಇದೇನಾ ತಾವು ಹೂಡಿಕೆದಾರರಿಗೆ ನೀಡುವ ಭರವಸೆ, ಸೌಲಭ್ಯಗಳು?' ಎಂದು ಮುಖ್ಯಮಂತ್ರಿಗಳನ್ನು ಕಾಂಗ್ರೆಸ್ ಪ್ರಶ್ನೆ ಮಾಡಿದೆ.
ಬೆಂಗಳೂರಿನ ರಸ್ತೆಗಳಲ್ಲಿ ಓಡಾಡಿದರೆ
— Karnataka Congress (@INCKarnataka) October 26, 2022
ಮಂಗಳ ಗ್ರಹದಲ್ಲಿ ಸಂಚರಿಸಿದ ಅನುಭವ ಪಡೆಯಬಹುದು!!
ಜನತೆ ಜೀವ ಕೈಯಲ್ಲಿ ಹಿಡಿದು ರಸ್ತೆಗೆ ಇಳಿಯಬೇಕಾದ ಸ್ಥಿತಿ ಇದೆ.
ವೇದಿಕೆ ಮೇಲೆ ದಮ್ಮು ತಾಕತ್ತಿನ ಸವಾಲು ಹಾಕುವ @BSBommai ಅವರೇ, ರಸ್ತೆ ಗುಂಡಿ ಮುಚ್ಚುವಲ್ಲಿ ತಾವು ದಮ್ಮು ತಾಕತ್ತು ತೋರಬೇಕಲ್ಲವೇ?#SayCM pic.twitter.com/qQEcbQ0Ayx







