ಬೆಂಗಳೂರು: ಪಾಕ್ ಮಾಜಿ ಪ್ರಧಾನಿ ‘ಇಮ್ರಾನ್ ಖಾನ್’ ಪುಸ್ತಕ ಬಿಡುಗಡೆ ಕಾರ್ಯಕ್ರಮ ರದ್ದು
ಸಂಘಪರಿವಾರದ ವಿರೋಧ ಹಿನ್ನೆಲೆ

ಬೆಂಗಳೂರು, ಅ.27: ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಕುರಿತ ‘ಇಮ್ರಾನ್ ಖಾನ್ ಒಂದು ಜೀವಂತ ದಂತ ಕತೆ' ಪುಸ್ತಕ ಬಿಡುಗಡೆಗೆ ಸಂಘಪರಿವಾರದ ಕಾರ್ಯಕರ್ತರು ತೀವ್ರ ವಿರೋಧ ವ್ಯಕ್ತಪಡಿಸಿದ ಹಿನ್ನೆಲೆ ಕಾರ್ಯಕ್ರಮವನ್ನು ಏಕಾಏಕಿ ರದ್ದು ಮಾಡಲಾಗಿದೆ.
ಗುರುವಾರ ಮಲ್ಲತ್ತಹಳ್ಳಿಯ ಕಲಾಗ್ರಾಮದಲ್ಲಿ ಪ್ರಮಥ ಪ್ರಕಾಶನ ಸಹಯೋಗದೊಂದಿಗೆ ಲೇಖಕ ಸುಧಾಕರ ಎಸ್.ಬಿ. ಬರೆದಿರುವ 'ಇಮ್ರಾನ್ ಖಾನ್ ಒಂದು ಜೀವಂತ ದಂತ ಕತೆ' ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮ ಸಂಜೆ ಏರ್ಪಡಿಸಲಾಗಿತ್ತು.
ಹೈಕೋರ್ಟಿನ ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್, ಮಾಜಿ ಸಚಿವೆ ಆರ್.ಲೀಲಾದೇವಿ, ಸಾಹಿತಿ ಡಾ.ವಡ್ಡಗೆರೆ ನಾಜರಾಜಯ್ಯ ಸೇರಿದಂತೆ ಪ್ರಮುಖರು ಭಾಗವಹಿಸಬೇಕಿತ್ತು. ಆದರೆ, ಹಿಂದೂ ಜನಜಾಗೃತಿ ಸಮಿತಿ ಸೇರಿದಂತೆ ಹಲವು ಸಂಘ ಪರಿವಾರದ ಕಾರ್ಯಕರ್ತರು ಈ ಪುಸ್ತಕ ಬಿಡುಗಡೆ ಮಾಡಬಾರದೆಂದು ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಿದ ಹಿನ್ನೆಲೆ ಆಯೋಜಕರು ಕಾರ್ಯಕ್ರಮ ರದ್ದುಗೊಳಿಸಿ, ಹೊರಗಡೆ ಮಾಹಿತಿ ಫಲಕ ಅಂಟಿಸಿದರು.
ಹಿಂದೂ ಜನಜಾಗೃತಿ ಸಮಿತಿ ಪುಸ್ತಕ ಬಿಡುಗಡೆ ಕಾರ್ಯಕ್ರಮ ಆಯೋಜಕರ ವಿರುದ್ಧ ದೂರು ಸಲ್ಲಿಸಿ, ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.
ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಕುರಿತ 'ಇಮ್ರಾನ್ ಖಾನ್ ಒಂದು ಜೀವಂತ ದಂತ ಕಥೆ' ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮಕ್ಕೆ #ಹಿಂದೂ ಜಾಗೃತಿ ಸಮಿತಿ ವಿರೋಧ ಹಿನ್ನೆಲೆ ಇಂದು ಪೊಲೀಸರು ಕಾರ್ಯಕ್ರಮ ರದ್ದುಗೊಳಿಸಿದರು.
— SAMEERISM✌ (@SameerDalasanur) October 27, 2022
ಕಾರ್ಯಕ್ರಮ ಆಯೋಜಕರು ಕಲಾ ಗ್ರಾಮದ ಹೊರಗಡೆ #ಕಾರ್ಯಕ್ರಮ ರದ್ದು ಎಂದು ಮಾಹಿತಿ ಹಾಕಿದ್ದಾರೆ.@Mohan_HJS https://t.co/UnUeDZZ9ny







