Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಸಾಮರಸ್ಯದ ಗೂಡಿಗೆ ಕಿಚ್ಚಿಡುವವರು...

ಸಾಮರಸ್ಯದ ಗೂಡಿಗೆ ಕಿಚ್ಚಿಡುವವರು...

ಶೇಖರ ಚಿತ್ರಾಪು, ಮುಂಬೈಶೇಖರ ಚಿತ್ರಾಪು, ಮುಂಬೈ28 Oct 2022 2:59 PM IST
share
ಸಾಮರಸ್ಯದ ಗೂಡಿಗೆ  ಕಿಚ್ಚಿಡುವವರು...

ವಿಶ್ವಸಂಸ್ಥೆಯ ಮಹಾಸಚಿವರಾದ ಮಾನ್ಯ ಆ್ಯಂಟೊನಿಯೊ ಗುಟೆರಸ್ ಅವರ ಈಚೆಗಿನ ಎರಡು ದಿನಗಳ ಭಾರತ ಭೇಟಿಯ ವೇಳೆ, ‘ಜಾಗತಿಕ ಮಾನವ ಹಕ್ಕುಗಳ ದಾಖಲೆ’ಯಂತೆ ನಮ್ಮ ದೇಶದಲ್ಲಿ ಒಂದು ಸಮುದಾಯದ ಜನ ಮತ್ತೊಂದು ಸಮುದಾಯದ ಬಗ್ಗೆ ದ್ವೇಷಪೂರಿತ ಹೇಳಿಕೆ(ಹೇಟ್ ಸ್ಪೀಚ್) ಹಾಗೂ ಪ್ರತಿಹೇಳಿಕೆಗಳಿಂದ ಶಾಂತಿ ಸಾಮರಸ್ಯಗಳಲ್ಲಿ ಸಾತತ್ಯವಾಗಿ ಧಕ್ಕೆ ಬಂದಿರುವುದರ ಬಗ್ಗೆ ಚಿಂತೆ ವ್ಯಕ್ತಪಡಿಸಿ ಶೀಘ್ರ ಅವನ್ನು ನಿಯಂತ್ರಿಸುವ ಕರೆ ಕೊಟ್ಟ ಬೆನ್ನಲ್ಲೇ, ಅಕ್ಟೋಬರ್ ೨೧ರ ಶುಕ್ರವಾರ ಹೇಟ್ ಸ್ಪೀಚ್ ವಿರೋಧ ಬಗೆಗಿನ ಅರ್ಜಿ ಯಾಚಿಕೆಯೊಂದರ ವಿಚಾರಣೆಯ ವೇಳೆ ದೇಶದ ಸರ್ವೋಚ್ಚ ನ್ಯಾಯಾಲಯ ಸ್ವಲ್ಪ ಖಾರವಾಗಿಯೇ ಹೀಗೆ ಪ್ರತಿಕ್ರಿಯಿಸಿದೆ: ‘‘ಇದೀಗ ಇದು ಇಪ್ಪತ್ತೊಂದನೇ ಶತಮಾನ. ಧರ್ಮದ ಹೆಸರಿನಲ್ಲಿ ನಾವೆತ್ತ ಸಾಗುತ್ತಿದ್ದೇವೆ?’’ ಎಂದ ಸುಪ್ರೀಂ ಕೋರ್ಟ್ ಇದನ್ನು ಕೂಡಲೇ ತಹಬಂದಿಗೆ ತರುವಂತೆ ಆಡಳಿತಕ್ಕೆ ನಿರ್ದೇಶವೀಯುತ್ತಾ, ‘‘ವಿಳಂಬವಾದರೆ, ಆಗದೇ ಹೋದರೆ, ನ್ಯಾಯಾಂಗ ನಿಂದನೆಯ ಆಪಾದನೆಗೆ ನೀವು ಗುರಿಯಾಗಬೇಕಾದೀತು. ಧರ್ಮನಿರಪೇಕ್ಷ ದೇಶವೊಂದರಲ್ಲಿ ಹೀಗಾಗುತ್ತಿರುವುದು ಆಘಾತಕಾರೀ..’’ ಎಂದು ಹೇಳಿ, ಯಾರೇ ಇರಲಿ, ಮುಂದೆ ಹೀಗಾದಾಗ ಯಾವುದಕ್ಕೂ ಕಾಯದೆ ಪ್ರಕರಣ ದಾಖಲಿಸಿ ಕಠಿಣ ಕ್ರಮ ಕೈಗೊಳ್ಳಿ ಎಂದಿದೆ.

ಸಾಮಾನ್ಯವಾಗಿ ಒಂದು ವಿಚಾರ, ಚಿಂತನೆ ಮತ್ತೊಂದು ಚಿಂತನೆಯೊಂದಿಗೆ ಸಹಕಾರ ಸಹಮತವನ್ನು ನಿರಾಕರಿಸಿದಾಗ ಸಮಸ್ಯೆ ತಲೆದೋರುತ್ತದೆ, ದೂಷಣೆ ಚರ್ಚೆಗಳು ಆರಂಭವಾಗಿ ರಂಗೇರುತ್ತದೆ, ಸಂಘರ್ಷಗಳು ಸಿಡಿಯುತ್ತವೆ. ಮಾನವ ಸಹಜ ಪ್ರವೃತ್ತಿಗಳಂತೆ- ಅದು ಯಾವುದೇ ಎರಡು ಬಣ, ಜಾತಿ, ಧರ್ಮದ ನಡುವೆ ಉಂಟಾಗಬಹುದಾದರೂ ಬಹುತೇಕವಾಗಿ, ಅದರಲ್ಲಿ ಸಮಾವೇಶಗೊಂಡಿರುವ ವ್ಯಕ್ತಿ ‘ನಮ್ಮ ಜಾತಿ ಯಾ ಧರ್ಮ’ದವನೇ ಎಂಬ ಪೂರ್ವಾಗ್ರಹದ ಮೇಲೆ ಅದರ ಉತ್ಕಟತೆ ಮತ್ತು ತೀವ್ರತೆ ಮುಂತಾದುವು ನಿರ್ಧರಿತವಾಗುತ್ತವೆ ಎನ್ನುವುದು ಮಾನವಸಮಾಜ ಇತಿಹಾಸದಲ್ಲಿನ ದುರಂತಗಳು. ಆ ಮೇಲಿನ ಸ್ಥಾನ ಅಹಂ, ಅಧಿಕಾರದಾಹ, ಮತಾಂಧತೆ ನ್ಯಾಯಭ್ರಷ್ಟತೆ ಇತ್ಯಾದಿಗಳಿಗೆ!

ಭಾರತದಲ್ಲಿ ಅನೇಕ ಕಾರಣಗಳಿಂದಾಗಿ ಮಾನವತೆ, ಕಾನೂನಿನ ಎಚ್ಚರದ ಬಗೆಗಿನ ಕೊರತೆ ಸುತ್ತೆಲ್ಲ ಕಾಣಬರುತ್ತಿದೆ. ಹಾಗೆಂದು ಇದೇ ಭಾರತೀಯರು ಅಮೆರಿಕ, ಯುರೋಪ್, ಆಸ್ಟ್ರೇಲಿಯಾ, ಆಫ್ರಿಕ ಅಥವಾ ದುಬೈಯಂತಹ ದೇಶಗಳಲ್ಲಿ ವಾಸವಿರುವಾಗ ಮಾತ್ರ ತಮ್ಮ ಮಧ್ಯೆಯಿರುವ ಧಾರ್ಮಿಕ ಮತಭೇದಗಳನ್ನು ಬದಿಗಿಟ್ಟು, ಒಬ್ಬರಿಗೊಬ್ಬರು ಸಹಾಯ ಮಾಡುತ್ತಾ ಆ ದೇಶಗಳ ನೀತಿ ನಿಯಮಾವಳಿಗಳನ್ನು ಪಾಲಿಸುವುದು ಕಂಡುಬರುತ್ತದೆ. ಉದಾಹರಣೆಗೆ ಹಿಂದೂಗಳು ಬೇರೆ ದೇಶದಲ್ಲಿನ ನಿಯಮಾವಳಿಗೆ ತಲೆಬಾಗಿ ಸ್ಥಾನೀಯರೊಂದಿಗೆ ಸಾಮರಸ್ಯದಿಂದಿದ್ದು ತಂತಮ್ಮ ಕ್ಷೇತ್ರಗಳಲ್ಲಿ ಉನ್ನತಿಗೇರಿರುವುದನ್ನು ನಾವು ನೋಡಬಹುದಾಗಿದೆ. ಜಗದಗಲದಲ್ಲಿ ಸ್ಥಳಾಂತರಗೊಂಡ ಭಾರತ ಮೂಲದವರು ಹಲವು ಕಡೆ ದೊಡ್ಡ ಮಟ್ಟದ ಸಾಧನೆ ಮಾಡಿದ್ದಾರೆ. ಮುಖ್ಯ ಸ್ಥಾನಮಾನಗಳನ್ನು ದೊರಕಿಸಿಕೊಂಡಿದ್ದಾರೆ. ಉದಾಹರಣೆಗೆ ಪಿಚೈ, ನಾದೆಳ್ಳ, ಮುಂತಾದವರು... ಅಲ್ಲದೆ ಈಗ ಕಮಲಾ ಹ್ಯಾರಿಸ್, ರಿಷಿ ಸುನಕ್ ಮುಂತಾದವರು ರಾಜಕೀಯವಾಗಿ ಮಹತ್ವದ ಸ್ಥಾನಗಳನ್ನು ಅಲಂಕರಿಸಿದ್ದಾರೆ. ಜಾಹೀರಾಗಿ ಅಲ್ಲವಾದರೂ, ಹೊರದೇಶಗಳಲ್ಲಿ ಈ ಬಗೆಯ ಒಂದು ಜನಾಂಗದ ಪ್ರಗತಿ ಮತ್ತೊಂದು ದೇಶದ ಜನರಲ್ಲಿ-ಸ್ಥಾನೀಯರಲ್ಲಿ ಅಸೂಯೆ, ಅಸ್ವಸ್ಥತೆ ಉಂಟುಮಾಡಬಹುದು. ಹೊರಗಿನವರ ಸಂಖ್ಯೆ, ಪ್ರಭಾವ, ರಟ್ಟೆಬಲ ಹೆಚ್ಚಾದಾಗ ತಮ್ಮ ಅಸ್ತಿತ್ವಕ್ಕೆ, ಆರ್ಥಿಕ-ಸಾಂಸ್ಕೃತಿಕ -ರಾಜಕೀಯ ಧಾರ್ಮಿಕ ಏಕತೆಗೆ ಭಂಗ ಬಂದೀತೆಂಬ ಭಯ ಕಾಡಬಹುದು. ಆದರೆ ಒಳಗಿನವರ ಜೊತೆಯೇ ಅಸಹನೆ ಸರಿಯೇ?

ಈ ನೆಲದ ಕಾನೂನು ಮತ್ತು ಮಾನವತೆಯನ್ನು ಬದಿಗಿಟ್ಟು ‘ನಾವಾಡಿದ್ದೇ ಮಾತು, ಮಾಡಿದ್ದೇ ಕಾನೂನು’ ಎಂಬ ಬಹುಸಂಖ್ಯಾತರ ಅಹಂಕಾರ, ಅವರ ಭುಜಶಕ್ತಿಗೆ ಸದಾ ಅಸುರಕ್ಷಿತತೆಯ ಭಾವದಿಂದ ಬದುಕಿ ಆಗಾಗ ಕೋಪದಿಂದ ಸಿಡಿದೆದ್ದು ಸಾರ್ವಜನಿಕವಾಗಿ ತೋರುವ ಅಲ್ಪಸಂಖ್ಯಾತರ ಪ್ರತಿರೋಧ, ಬಂಡು ಇತ್ಯಾದಿಗಳು ಇಂದಿನ ಸ್ಥಿತಿಗೆ ಕಾರಣವಾಗಿದೆ. ಒಂದು ಸಾಮಾನ್ಯ ಘಟನೆಯನ್ನು ಇಂದಿನ ವೇಗದ ಪ್ರಸಾರ ಮಾಧ್ಯಮಗಳು ‘ತಾನು ಮೊದಲು’ ಎಂಬ ಭರಾಟೆಯಲ್ಲಿ ಸತ್ಯಾಸತ್ಯತೆಯ ಬಗೆಗೆ ವಿಚಾರ ಮಾಡದೆ, ರುಚಿಗೆ ಒಂದಿಷ್ಟು ಉಪ್ಪುಖಾರ ಮಸಾಲೆಗಳನ್ನು ಸೇರಿಸಿ ಕ್ಷಣದಲ್ಲಿ ಊದಿಬಿಡುವುದರಿಂದ ಈಗಿನ ಒತ್ತಡದ ಜೀವನಕ್ರಮದಿಂದ ಆ ಕ್ಷಣ ವಿವೇಕಶೂನ್ಯತೆಗೊಳಗಾಗುವ ಜನ ರೊಚ್ಚಿಗೆದ್ದು ರೋಸಿ ತೀಕ್ಷ್ಣವಾದ-ಪ್ರತಿವಾದದಿಂದ ಹಿಂಸೆಗೆ ತೊಡಗುತ್ತಾರೆ. ಜಾತಿ-ಧರ್ಮಗಳೊಳಗೆ ಅಸಹನೆ ಬಿರುಕುಗಳುಂಟಾಗುತ್ತವೆ. ಅಖಂಡತೆ ಸಹೋದರ ಭಾವನೆಗಳಿಗೆ ಕುತ್ತು ಬರುತ್ತದೆ. ಇಂತಹವುಗಳಿಗಾಗಿಯೇ ಕಾಯುವ ಸಮಾಜಕಂಟಕರು, ಮುಖವಾಡ ತೊಟ್ಟ ಕೆಲವು ರಾಜಕೀಯ ನೇತಾರರು ಮಧ್ಯೆ ತೂರಿಬಂದು ಏನೇನೆಲ್ಲ ಬಹುರೂಪೀ ಪ್ರದರ್ಶನವೀಯುತ್ತಾ ರಕ್ಷಕನಂತೆ ನಟಿಸಿ ನಂಬಿಸುತ್ತಾರೆ, ಲಾಭ ಪಡೆಯುತ್ತಾರೆ. 

ಒಂದು ಪ್ರಾಂತ, ದೇಶದ ವಿಭಿನ್ನ ಪಂಗಡ ಗುಂಪುಗಳ ಜನಾಂಗೀಯ ಇತಿಹಾಸ, ಗುರುಪರಂಪರೆ, ಸಂಸ್ಕೃತಿ, ಶಿಕ್ಷಣ ಪದ್ಧತಿ, ಜಾತಿ-ಧರ್ಮಗಳ ಬಗೆಗಿನ ಮತಾಂಧತೆ ಮೌಢ್ಯತೆಗಳು, ಅಂಧಾನುಕರಣೆಗಳು ಯಾವುದೇ ಸಮಯದಲ್ಲಿ ಯಾವುದೇ ದೇಶದ ಅಖಂಡಭಾವ ಸಾಮರಸ್ಯದ ಸ್ಥಿತಿಗತಿಗಳನ್ನು ನಿರ್ಧರಿಸುತ್ತವೆ ಅನ್ನುವುದನ್ನು ನಾವು ಸದಾ ನೆನಪಿಡಬೇಕಿದೆ.

share
ಶೇಖರ ಚಿತ್ರಾಪು, ಮುಂಬೈ
ಶೇಖರ ಚಿತ್ರಾಪು, ಮುಂಬೈ
Next Story
X