Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಮೊಬೈಲ್ ರಿಪೇರಿಗೆ ಕೊಡುವಾಗ ಎಚ್ಚರವಿರಲಿ

ಮೊಬೈಲ್ ರಿಪೇರಿಗೆ ಕೊಡುವಾಗ ಎಚ್ಚರವಿರಲಿ

ಒಲಿವರ್ ಡಿ' ಸೋಜಾಒಲಿವರ್ ಡಿ' ಸೋಜಾ28 Oct 2022 3:32 PM IST
share
ಮೊಬೈಲ್ ರಿಪೇರಿಗೆ ಕೊಡುವಾಗ ಎಚ್ಚರವಿರಲಿ

ಕೇಂದ್ರ ಸರಕಾರದ 'ಮಾಹಿತಿ ತಂತ್ರಜ್ಞಾನ' ನಿಯಮಾವಳಿಗಳ ಪ್ರಕಾರ ಪ್ರಜೆಗಳು ರಿಪೇರಿಗೋಸ್ಕರ ಮೊಬೈಲನ್ನು ಅಂಗಡಿಗೆ ಕೊಡುವಾಗ ತಮ್ಮ ಸಿಮ್ ಹಾಗೂ ಬ್ಯಾಟರಿಯನ್ನು ತಮ್ಮಲ್ಲಿ ಇಟ್ಟುಕೊಂಡು ಕೇವಲ ಮೊಬೈಲ್ ಅನ್ನು ಮಾತ್ರ ಅವರಿಗೆ ನೀಡಬೇಕು. ಸಿಮ್ ಹಾಗೂ ಬ್ಯಾಟರಿಯನ್ನು ರಿಪೇರಿ ಮಾಡುವವರಿಗೆ ನೀಡಿದ್ದಲ್ಲಿ, ಅವರು ನಿಮ್ಮ ತೀರಾ ಖಾಸಗಿ ವಿಷಯಗಳನ್ನು ಕೂಡ ತಿಳಿದುಕೊಳ್ಳಬಹುದು; ಬ್ಲ್ಲಾಕ್‌ಮೇಲ್ ಮಾಡಬಹುದು ಅಥವಾ ಅದೇ ಮೊಬೈಲ್‌ನಿಂದ ಗಣ್ಯಾತಿಗಣ್ಯ ವ್ಯಕ್ತಿಗಳಿಗೆ ಅಥವಾ ಶ್ರೀಮಂತರಿಗೆ ಬೆದರಿಕೆಯ ಫೋನ್ ಕರೆ ಅಥವಾ ಮೆಸೇಜುಗಳನ್ನು ಕಳುಹಿಸಬಹುದು.

ಅಕ್ಟೋಬರ್ 7ರಂದು ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ ವ್ಯಕ್ತಿಯೊಬ್ಬರು ತಮ್ಮ ಮೊಬೈಲ್‌ನ ಮೈಕ್ ಸರಿಯಾಗಿ ಕೆಲಸ ಮಾಡದಿದ್ದುದರಿಂದ ರಿಪೇರಿಗೆ ಕೊಟ್ಟರು.
ಆಗ ರಿಪೇರಿ ಅಂಗಡಿಯವನು ನಿಮ್ಮ ಸಿಮ್ ಕಾರ್ಡ್ ಅನ್ನು ಅದರಲ್ಲಿ ಇಟ್ಟುಕೊಡಿ ಎಂದ. ಇದು ಕೇಂದ್ರ ಸರಕಾರದ ಮಾಹಿತಿ ತಂತ್ರಜ್ಞಾನ ನಿಯಮಾವಳಿಗಳ ವಿರುದ್ಧವಾಗಿದೆ. ಇದನ್ನು ತಿಳಿಯದ ಆ ಗ್ರಾಹಕ ಸಿಮ್‌ಅನ್ನು ಮೊಬೈಲ್‌ನಲ್ಲಿಯೇ ಇಟ್ಟು ಮೊಬೈಲ್ ಮೈಕ್ ರಿಪೇರಿ ಮಾಡಲು ಕೊಟ್ಟನು.
ರಿಪೇರಿ ಮಾಡಿದ ಮೊಬೈಲ್ ಅನ್ನು ತರಲು ಮರುದಿನ ಸಂಜೆ ಅವನು ಅಂಗಡಿಗೆ ಹೋದಾಗ ಅಂಗಡಿಗೆ ಬೀಗ ಹಾಕಿತ್ತು. ಅಲ್ಲದೆ ಅಕ್ಟೋಬರ್ 9 ಹಾಗೂ 10ರಂದು ಕೂಡ ಅಂಗಡಿ ತೆರೆದಿರಲಿಲ್ಲ. ಗ್ರಾಹಕ ತಾನು ರಿಪೇರಿಗೆಂದು ನೀಡಿದ ಅಂಗಡಿಯವನ ಮೊಬೈಲ್ ಸಂಖ್ಯೆ ಹಾಗೂ ಹೆಸರನ್ನೂ ಪಡೆದಿರಲಿಲ್ಲ. ಆದುದರಿಂದ ತನಗೆ, ತನ್ನ ವ್ಯವಹಾರಗಳಿಗೆ ತೀರ ಅಗತ್ಯವಾದ ಮೊಬೈಲನ್ನು ಉಪಯೋಗಿಸಲು ಅವನಿಗೆ ಸಾಧ್ಯವಾಗಲೇ ಇಲ್ಲ.
ಜುಜುಬಿ ಮೊಬೈಲ್ ರಿಪೇರಿಯ ಸಣ್ಣ ಅಂಗಡಿ ಅಕ್ಟೋಬರ್ 8, 9 ಹಾಗೂ 10 ಹೀಗೆ ಮೂರು ದಿನ ನಿರಂತರವಾಗಿ ಬಂದ್ ಇದ್ದರೂ ಗ್ರಾಹಕನಿಗೆ ಸಂಶಯ ಬರಲಿಲ್ಲ.
ಅಕ್ಟೋಬರ್ 11ನೇ ತಾರೀಕು ಮೊಬೈಲ್ ರಿಪೇರಿ ಅಂಗಡಿಗೆ ಹೋದಾಗ ಅಲ್ಲಿ ತಾನು ಮೊಬೈಲ್ ರಿಪೇರಿಗೆ ನೀಡಿದ ವ್ಯಕ್ತಿಯು ಇರಲಿಲ್ಲ. ಅದರ ಬದಲಿಗೆ ಬೇರೆಯೇ ವ್ಯಕ್ತಿಯೊಬ್ಬ ಅಂಗಡಿಯನ್ನು ನಡೆಸುತ್ತಿದ್ದ. ಅವನಲ್ಲಿ ತಾನು ರಿಪೇರಿಗೆಂದು ಕೊಟ್ಟ ಮೊಬೈಲ್ ಹಾಗೂ ಸಿಮ್ ಬಗ್ಗೆ ಕೇಳಿದಾಗ ಅಂಗಡಿಯವನು ಆತನ ಪ್ರಶ್ನೆಯನ್ನು ನಿರ್ಲಕ್ಷಿಸುತ್ತಲೇ ಹೋದ.
ಸಂಶಯಗೊಂಡ ಗ್ರಾಹಕ ಕೂಡಲೇ ತನ್ನ ಮಿತ್ರನ ಇಂಟರ್‌ನೆಟ್ ಅನ್ನು ಉಪಯೋಗಿಸಿ ತನ್ನ ಬ್ಯಾಂಕ್ ವ್ಯವಹಾರಗಳನ್ನು ಪರೀಕ್ಷಿಸಿದಾಗ ಅದರಿಂದ 2.20 ಲಕ್ಷದ ನಿರಖು ಠೇವಣಿಯನ್ನು ಕತ್ತರಿಸಿ ಅದನ್ನು ಬೇರೆ ಬೇರೆ ಉಳಿತಾಯ ಅಕೌಂಟ್‌ಗಳಿಗೆ ವರ್ಗಾಯಿಸಿದ್ದು ಕಂಡು ಹೌಹಾರಿದ.
ಆದುದರಿಂದ ಯಾವಾಗಲೂ ಮೊಬೈಲನ್ನು ರಿಪೇರಿಗೆಂದು ಅಂಗಡಿಯವರಿಗೆ ನೀಡಿದಾಗ ಅದರ ಒಳಗೆ ಇರುವ ಸಿಮ್ ಹಾಗೂ ಬ್ಯಾಟರಿಯನ್ನು ತಮ್ಮಲ್ಲಿಯೇ ಇಟ್ಟುಕೊಂಡು, ಖಾಲಿ ಮೊಬೈಲ್ ಅನ್ನು ರಿಪೇರಿ ಮಾಡುವ ವ್ಯಕ್ತಿಗೆ ಕೊಡಿ. ಹೀಗೆ ಮಾಡುವುದರಿಂದ ನೀವು ಮೋಸ ಹೋಗುವುದರಿಂದ ತಪ್ಪಿಸಬಹುದು.

share
ಒಲಿವರ್ ಡಿ' ಸೋಜಾ
ಒಲಿವರ್ ಡಿ' ಸೋಜಾ
Next Story
X