ಒಡೆದಿರುವ ಬಿಜೆಪಿಯನ್ನು ಜೋಡಿಸಲು ಫೆವಿಕಾಲ್ ಫ್ಯಾಕ್ಟರಿಯೇ ಸಾಲುವುದಿಲ್ಲ: ಕಾಂಗ್ರೆಸ್ ವ್ಯಂಗ್ಯ
ಬೆಂಗಳೂರು: 'ನಮ್ಮದು ಶಿಸ್ತಿನ ಪಕ್ಷ ಎಂದುಕೊಳ್ಳುವ ರಾಜ್ಯ ಬಿಜೆಪಿಯ (BJP) ಸ್ಥಿತಿ ಈಗ ಜಗಳದ ಪಕ್ಷವಾಗಿದೆ. ಸಚಿವರು, ನಾಯಕರಿಂದ ಹಿಡಿದು ಕಾರ್ಯಕರ್ತರವರೆಗೆ ಕಿತ್ತಾಟಕ್ಕೆ ಇಳಿದಿದ್ದಾರೆ' ಎಂದು ಕಾಂಗ್ರೆಸ್ (Karnataka Congress) ಟೀಕಿಸಿದೆ.
ಈ ಸಂಬಂಧ ಟ್ವೀಟ್ ಮಾಡಿರುವ ಕಾಂಗ್ರೆಸ್, 'ನಳಿನ್ ಕುಮಾರ್ ಕಟೀಲ್ ಅವರು ಅದೇನೋ ಕಾಂಗ್ರೆಸ್ ಜೋಡೊ ಎಂದು ಟೀಕಿಸುತ್ತಿದ್ದರು. ಈಗ ಒಡೆದಿರುವ ನಿಮ್ಮ ಬಿಜೆಪಿಯನ್ನು ಜೋಡಿಸಲು ಫೆವಿಕಾಲ್ ಫ್ಯಾಕ್ಟರಿಯೇ ಸಾಲುವುದಿಲ್ಲ' ಎಂದು ಬಿಜೆಪಿ ರಾಜ್ಯಾಧ್ಯಕ್ಷರಿಗೆ ತಿರುಗೇಟು ನೀಡಿದೆ.
'ಅಕ್ರಮಗಳನ್ನು ಮುಚ್ಚಿಕೊಳ್ಳುವ ಹುನ್ನಾರ':
'ನಾವು ಸುಮ್ಮನೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಪೇ ಸಿಎಂ ಎಂದಿಲ್ಲ! ಈ ಸರ್ಕಾರ ಲಂಚವನ್ನು ಪಡೆಯುತ್ತದೆ, ಲಂಚವನ್ನು ನೀಡುತ್ತದೆ! ಇವೆಲ್ಲವೂ #PayCM ಮೂಲಕವೇ ನಡೆಯುತ್ತದೆಯೇ ಮುಖ್ಯಮಂತ್ರಿಗಳೇ!? ಶಾಸಕರನ್ನು ಖರೀದಿಸಿ ಸರ್ಕಾರ ಮಾಡಿದಂತೆ ಮಾದ್ಯಮಗಳನ್ನೂ ಖರೀದಿಸಿ ಅಕ್ರಮಗಳನ್ನು ಮುಚ್ಚಿಕೊಳ್ಳುವ ಹುನ್ನಾರವೇ?' ಎಂದು ಕಾಂಗ್ರೆಸ್ ಮತ್ತೊಂದು ಟ್ವೀಟ್ ನಲ್ಲಿ ಪ್ರಶ್ನೆ ಮಾಡಿದೆ.
ನಮ್ಮದು ಶಿಸ್ತಿನ ಪಕ್ಷ ಎಂದುಕೊಳ್ಳುವ @BJP4Karnataka ಸ್ಥಿತಿ ಈಗ ಜಗಳದ ಪಕ್ಷವಾಗಿದೆ!
— Karnataka Congress (@INCKarnataka) October 28, 2022
ಸಚಿವರು, ನಾಯಕರಿಂದ ಹಿಡಿದು ಕಾರ್ಯಕರ್ತರವರೆಗೆ ಕಿತ್ತಾಟಕ್ಕೆ ಇಳಿದಿದ್ದಾರೆ!
ಅದೇನೋ ಕಾಂಗ್ರೆಸ್ ಜೋಡೊ ಎಂದು ಟೀಕಿಸುತ್ತಿದ್ದ @nalinkateel ಅವರೇ, ಒಡೆದಿರುವ ನಿಮ್ಮ ಬಿಜೆಪಿಯನ್ನು ಜೋಡಿಸಲು ಫೆವಿಕಾಲ್ ಫ್ಯಾಕ್ಟರಿಯೇ ಸಾಲುವುದಿಲ್ಲ!#BJPvsBJP pic.twitter.com/ZVvskptb3R