11 IPS ಅಧಿಕಾರಿಗಳ ವರ್ಗಾವಣೆ ಮಾಡಿ ಸರ್ಕಾರದ ಆದೇಶ

ಬೆಂಗಳೂರು, ಅ.31: ರಾಜ್ಯ ಸರಕಾರವು 11 ಐಪಿಎಸ್ ಅಧಿಕಾರಿ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಸೋಮವಾರ ಆದೇಶ ಹೊರಡಿಸಿದೆ.
ಬೆಂಗಳೂರು ಅಂತರಿಕ ಭದ್ರತಾ ವಿಭಾಗದ ಎಡಿಜಿಪಿ-ಮಾಲಿನಿ ಕೃಷ್ಣಮೂರ್ತಿ, ಬೆಂಗಳೂರು ಕೆಎಸ್ಆರ್ಪಿ ಎಡಿಜಿಪಿ-ಸೀಮಂತ್ ಕುಮಾರ್ ಸಿಂಗ್, ಐಜಿಪಿ ಹಾಗೂ ಸರಕಾರ ಕಾರ್ಯದರ್ಶಿ(ಪಿಸಿಎಎಸ್)ಯಾಗಿ ರವಿ ಎಸ್. ಅವರನ್ನು ವರ್ಗಾವಣೆ ಮಾಡಲಾಗಿದೆ.
ಡಿಸಿಆರ್ ಇ ಪೊಲೀಸ್ ವರಿಷ್ಠಾಧಿಕಾರಿ-ಅಜಯ್ ಹಿಲೋರಿ, ಅಪರಾಧ ವಿಭಾಗ-2ರ ಡಿಸಿಪಿ-ಯತೀಶ್ ಚಂದ್ರ ಜಿ.ಎಚ್., ಕಲಬುರಗಿ ಗುಪ್ತಚರ ವಿಭಾಗದ ಪೊಲೀಸ್ ವರಿಷ್ಠಾಧಿಕಾರಿ-ಅಮರನಾಥ್ ರೆಡ್ಡಿ ವೈ., ರಾಜ್ಯ ಲೋಕಾಯುಕ್ತ ಪೊಲೀಸ್ ವರಿಷ್ಠಾಧಿಕಾರಿಯಾಗಿ ಶ್ರೀಹರಿ ಬಾಬು ಬಿ.ಎಲ್.ಅವರನ್ನು ವರ್ಗಾವಣೆ ಮಾಡಲಾಗಿದೆ.
ಬೆಂಗಳೂರು ಮೆಟ್ರೋಪಾಲಿಟಿನ್ ಕಾರ್ಯಪಡೆ(ಬಿಎಂಟಿಎಫ್)ಯ ಪೊಲೀಸ್ ವರಿಷ್ಠಾಧಿಕಾರಿ-ಡಾ.ಶೋಭಾ ರಾಣಿ ವಿ.ಜೆ., ರಾಜ್ಯ ಲೋಕಾಯುಕ್ತ ಪೊಲೀಸ್ ವರಿಷ್ಠಾಧಿಕಾರಿ-ಸಜೀತ್ ವಿ.ಜೆ. ಹಾಗೂ ರಾಮ್ ಎಲ್.ಅರಸಿದ್ದಿ, ಬೆಳಗಾವಿ ಗುಪ್ತಚರ ವಿಭಾಗದ ಪೊಲೀಸ್ ವರಿಷ್ಠಾಧಿಕಾರಿಯಾಗಿ ಬಾಬಾಸಾಬ್ ನೇಮಗೌಡ್ ಅವರನ್ನು ವರ್ಗಾವಣೆ ಮಾಡಲಾಗಿದೆ.





