ಮಂಗಳೂರು ಕಾರಾಗೃಹದಲ್ಲಿ ಕಾನೂನು ನೆರವು, ನಾಗರಿಕ ಸಬಲೀಕರಣ ಅಭಿಯಾನ

ಮಂಗಳೂರು: ದೇಶದ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಸೋಮವಾರ ನಗರದ ಜಿಲ್ಲಾ ಕಾರಾಗೃಹದಲ್ಲಿ ನಡೆದ ಕಾನೂನು ನೆರವು ಮತ್ತು ನಾಗರಿಕ ಸಬಲೀಕರಣ ಅಭಿಯಾನವನ್ನು ದ.ಕ.ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ನ್ಯಾಯಾಧೀಶೆ ಬಿ.ಜಿ. ಶೋಭಾ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರದ ನೇತೃತ್ವದಲ್ಲಿ ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಜೈಲುಗಳಲ್ಲಿ ಕೈದಿಗಳಾಗಿರುವವರನ್ನು ವೈಯಕ್ತಿಕವಾಗಿ ಭೇಟಿ ಮಾಡಿ ಅವರಿಗೆ ಕಾನೂನು ನೆರವನ್ನು ನೀಡುವ ಉದಾತ್ತ ಅಭಿಯಾನ ಇದಾಗಿದೆ. ದ.ಕ.ಜಿಲ್ಲೆಯಲ್ಲೂ ಇದು ಯಶಸ್ವಿಯಾಗಿ ನಡೆದಿದ್ದು ಎಲ್ಲ ಕೈದಿಗಳಲ್ಲೂ ನ್ಯಾಯದಾನ ವ್ಯವಸ್ಥೆ ಬಗ್ಗೆ ವಿಶ್ವಾಸ ಮೂಡಿಸಲಾಗಿದೆ ಎಂದರು.
ಜಿಲ್ಲಾ ಕಾರಾಗೃಹದ ಅಧಿಕಾರಿ ಓಬಳೇಶಪ್ಪ, ಕಾನೂನು ಸೇವೆಗಳ ಪ್ರಾಧಿಕಾರದ ಪ್ಯಾನೆಲ್ ವಕೀಲರಾದ ಪ್ರಫುಲ್ಲಾ, ಅರವಿಂದ ಎ., ಶುಕರಾಜ ಕೊಟ್ಟಾರಿ, ಸುಕೇಶ್ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.
Next Story





