Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಈ ಹೊತ್ತಿನ ಹೊತ್ತಿಗೆ
      • ಜನಚರಿತೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಅಂತಾರಾಷ್ಟ್ರೀಯ
  4. ಡಿಸೆಂಬರ್ ನಲ್ಲಿ ಐಎಂಫ್ ಸಾಲ ಪಡೆಯುವ...

ಡಿಸೆಂಬರ್ ನಲ್ಲಿ ಐಎಂಫ್ ಸಾಲ ಪಡೆಯುವ ಶ್ರೀಲಂಕಾದ ಆಶಯಕ್ಕೆ ಹಿನ್ನಡೆ

3 Nov 2022 10:55 PM IST
share
ಡಿಸೆಂಬರ್ ನಲ್ಲಿ ಐಎಂಫ್ ಸಾಲ ಪಡೆಯುವ ಶ್ರೀಲಂಕಾದ ಆಶಯಕ್ಕೆ ಹಿನ್ನಡೆ

ಕೊಲಂಬೊ, ನ.3: ಶ್ರೀಲಂಕಾ(Sri Lanka)ದ ಪ್ರಮುಖ ಮಿತ್ರ ಹಾಗೂ ಸಾಲಗಾರ(ಆರ್ಥಿಕ ನೆರವು ಒದಗಿಸಿದ) ದೇಶವಾದ ಚೀನಾವು ಸಾಲವನ್ನು ಪುನರ್ರಚನೆ ಮಾಡದ ಕಾರಣ ಈ ಡಿಸೆಂಬರ್ ನಲ್ಲಿ ಐಎಂಎಫ್(IMF) ನಿಂದ 2.9 ಶತಕೋಟಿ ಡಾಲರ್ ಸಾಲ ಪಡೆಯಲು ಶ್ರೀಲಂಕಾಕ್ಕೆ ಸಾಧ್ಯವಾಗದು ಎಂದು ಜಾಗತಿಕ ಆರ್ಥಿಕ ತಜ್ಞರು ಹೇಳಿದ್ದಾರೆ.

    ಚೀನಾದಲ್ಲಿ ಕಳೆದ ತಿಂಗಳು ಕಮ್ಯುನಿಸ್ಟ್ ಪಕ್ಷದ 20ನೇ ರಾಷ್ಟ್ರೀಯ ಅಧಿವೇಶನ ನಡೆದ ಕಾರಣ ಸಾಲ ಪುನರ್ರಚನೆಯ ಮಾತುಕತೆಯನ್ನು ಚೀನಾ ಮುಂದೂಡಿತ್ತು. ಪ್ರಮುಖ ಸಾಲಗಾರರಿಂದ ( ಆರ್ಥಿಕ ನೆರವು ಒದಗಿಸುವ ದೇಶಗಳು) ಸಾಲದ ಸಮನ್ವಯ ಮತ್ತು ಪುನರ್ರಚನೆಯ ಖಾತರಿಯನ್ನು ಒದಗಿಸುವಂತೆ ಅಂತರಾಷ್ಟ್ರೀಯ ಹಣಕಾಸು ಸಂಸ್ಥೆ(ಐಎಂಎಫ್) ಶ್ರೀಲಂಕಾಕ್ಕೆ ಸೂಚಿಸಿತ್ತು.

ಈ ಖಾತರಿಯನ್ನು ಸಲ್ಲಿಸಿದ ಬಳಿಕ ಶ್ರೀಲಂಕಾಕ್ಕೆ 2.9 ಶತಕೋಟಿ ಡಾಲರ್ ಆರ್ಥಿಕ ನೆರವು ಒದಗಿಸುವ ಮುಂದಿನ ಹಂತದ ಪರಿಶೀಲನೆಯನ್ನು ಐಎಂಎಫ್ ನಡೆಸುತ್ತದೆ. ಭಾರತ, ಜಪಾನ್ ಮತ್ತು ಚೀನಾ ದೇಶಗಳು ಶ್ರೀಲಂಕಾಕ್ಕೆ ಆರ್ಥಿಕ ನೆರವು ಒದಗಿಸುವ ಪ್ರಮುಖ ದೇಶಗಳಾಗಿವೆ. ಇದರಲ್ಲಿ ಭಾರತ ಮತ್ತು ಜಪಾನ್ ) ಸಾಲದ ಸಮನ್ವಯ ಮತ್ತು ಪುನರ್ರಚನೆಯ ಕುರಿತು ಶ್ರೀಲಂಕಾದೊಂದಿಗೆ ಮಾತುಕತೆ ಆರಂಭಿಸಿವೆ. ಆದರೆ ಚೀನಾ ಇನ್ನೂ ಈ ವಿಷಯದಲ್ಲಿ ಆಸಕ್ತಿ ತೋರಿಲ್ಲ. ಆದ್ದರಿಂದ ಡಿಸೆಂಬರ್ನಲ್ಲಿ ನಡೆಯುವ ಐಎಂಎಫ್ ಆಡಳಿತ ಮಂಡಳಿ ಸಭೆಗೂ ಮುನ್ನ ಚೀನಾದಿಂದ ಖಾತರಿ ಲಭಿಸುವ ಸಾಧ್ಯತೆ ಕ್ಷೀಣಿಸಿದ್ದು ಸಾಲಕ್ಕಾಗಿ 2023ರ ಮಾರ್ಚ್ನಲ್ಲಿ ನಡೆಯುವ ಐಎಂಎಫ್ ಆಡಳಿತ ಮಂಡಳಿ ಸಭೆಯವರೆಗೆ ಶ್ರೀಲಂಕಾ ಕಾಯಬೇಕಾಗುತ್ತದೆ.

    

 ಈ ಮಧ್ಯೆ, ವಿದೇಶಿ ವಿನಿಮಯ ಸವಕಳಿ, ತೀವ್ರ ಆರ್ಥಿಕ ಹಿಂಜರಿತ ಮತ್ತು ಹೆಚ್ಚುತ್ತಿರುವ ಹಣಕಾಸಿನ ಕೊರತೆಯಿಂದಾಗಿ ಶ್ರೀಲಂಕಾದ ಸಾಲದ ಹೊರೆ ಮತ್ತಷ್ಟು ಹೆಚ್ಚಲಿದೆ. 2021ರ ಅಂತ್ಯಕ್ಕೆ ಶ್ರೀಲಂಕಾದ ಒಡ್ಡು ಸಾಲದ ಪ್ರಮಾಣ 36 ಶತಕೋಟಿ ಡಾಲರ್ ಆಗಿದ್ದು ಇದರಲ್ಲಿ 20%ದಷ್ಟು ಅಂದರೆ 7.1 ಶತಕೋಟಿ ಡಾಲರ್ನಷ್ಟು(ಜಿಡಿಪಿಯ 115.3%ದಷ್ಟು) ಸಾಲವನ್ನು 2021ರ ಡಿಸೆಂಬರ್ ಅಂತ್ಯಕ್ಕೆ ಚೀನಾಕ್ಕೆ ಮರುಪಾವತಿಸಬೇಕಿತ್ತು.

ಆದರೆ ತೀವ್ರ ಆರ್ಥಿಕ ಬಿಕ್ಕಟ್ಟಿನಿಂದ ಶ್ರೀಲಂಕಾ ಸಾಲ ಪಾವತಿ ಬಾಕಿಯಿರಿಸಿದ್ದು 2022ರ ಜೂನ್ ವೇಳೆಗೆ ಚೀನಾಕ್ಕೆ ಪಾವತಿಸಬೇಕಿರುವ ಬಾಕಿ ಸಾಲದ ಮೊತ್ತ ಜಿಡಿಪಿಯ 143.7%ಕ್ಕೆ ಹೆಚ್ಚಿದೆ. ಭಾರತದಿಂದ ಸುಮಾರು 1.7 ಶತಕೋಟಿ ಡಾಲರ್ನಷ್ಟು ದ್ವಿಪಕ್ಷೀಯ ಸಾಲ ಹಾಗೂ 4 ಶತಕೋಟಿ ಡಾಲರ್ ತುರ್ತು ಸಾಲದ ನೆರವನ್ನು ಶ್ರೀಲಂಕಾ ಪಡೆದಿದೆ.

 ಐಎಂಎಫ್ ಸಾಲ ಪಡೆಯುವಲ್ಲಿ ವಿಳಂಬವಾದಷ್ಟೂ ಶ್ರೀಲಂಕಾದ ಸಾಲದ ಹೊರೆ ಹೆಚ್ಚಲಿದೆ. ಅಕ್ಟೋಬರ್ 31ರಂದು ಸಂಸತ್ತಿನಲ್ಲಿ ಮಾತನಾಡಿದ್ದ ಅಧ್ಯಕ್ಷ ರನಿಲ್ ವಿಕ್ರಮಸಿಂಘೆ ‘ ಈ ಪ್ರಕ್ರಿಯೆಯೊಂದಿಗೆ ನಾವು ಮುಂದುವರಿಯಬೇಕಿದೆ. ನವೆಂಬರ್ ಮಧ್ಯಭಾಗದೊಳಗೆ ನಮ್ಮ ಮಿತ್ರರೊಂದಿಗೆ ಒಂದು ಒಪ್ಪಂದಕ್ಕೆ ಬಂದರೆ ಅದನ್ನು ಡಿಸೆಂಬರ್ ಮಧ್ಯಭಾಗದಲ್ಲಿ ನಡೆಯುವ ಐಎಂಎಫ್ ಆಡಳಿತ ಮಂಡಳಿ ಸಭೆಗೆ ಒಪ್ಪಿಸಬಹುದು. ಆಗ ನಮಗೆ ದೊಡ್ಡ ಲಾಭ ಸಿಗುತ್ತದೆ.

ಆದರೆ ಚೀನಾವು ಪಕ್ಷದ ಅಧಿವೇಶನದ ಬಳಿಕ ಈ ಕುರಿತು ಗಮನ ಹರಿಸಲಿದೆ ಎಂಬ ಸರಳ ಕಾರಣದಿಂದಾಗಿ ನಾವು ಇದನ್ನು ಸಾಧಿಸುವ ಬಗ್ಗೆ ಅನುಮಾನವಿದೆ. ಆದರೂ, ಜನವರಿಯೊಳಗೆ ಐಎಂಎಫ್ ಗೆ ಸಲ್ಲಿಸುವತ್ತ ಗಮನ ಹರಿಸಲಾಗುವುದು’ ಎಂದು ಹೇಳಿದ್ದಾರೆ. ಇದೀಗ ಐಎಂಎಫ್ ಸಾಲಕ್ಕಾಗಿ 2023ರ ಮಾರ್ಚ್ವರೆಗೆ ಶ್ರೀಲಂಕಾ ಕಾಯಬೇಕಿದೆ.

ಆದರೆ ಅದುವರೆಗೆ ದೇಶದ ವೆಚ್ಚವನ್ನು ನಿರ್ವಹಿಸಲು 850 ದಶಲಕ್ಷ ಡಾಲರ್ಗಳಷ್ಟು ‘ಮಧ್ಯಂತರ ಸಾಲದ ನೆರವು’ ಪಡೆಯುವುದು ವಿಕ್ರಮಸಿಂಘೆ ಆಡಳಿತಕ್ಕೆ ಅನಿವಾರ್ಯವಾಗಿದೆ. ಆದರೆ ಇಷ್ಟು ಮೊತ್ತದ ಸಾಲ ನೀಡುವವರು ಯಾರು ಎಂಬುದು ಇಲ್ಲಿನ ಯಕ್ಷಪ್ರಶ್ನೆಯಾಗಿದೆ.

 ಈ ಮಧ್ಯೆ, ಖಾತರಿ ಪ್ರಕ್ರಿಯೆ ತ್ವರಿತಗೊಳಿಸುವಂತೆ ಚೀನಾಕ್ಕೆ ಮನವಿ ಮಾಡಲು ಶ್ರೀಲಂಕಾ ಅಧ್ಯಕ್ಷ ರನಿಲ್ ವಿಕ್ರಮಸಿಂಘೆ ಚೀನಾಕ್ಕೆ ಭೇಟಿ ನೀಡಿದ್ದಾರೆ ಎಂದು ಮೂಲಗಳು ಹೇಳಿವೆ.

share
Next Story
X