ಕೆಮ್ಮಾರ: ಶಂಸುಲ್ ಉಲಮಾ ಅನುಸ್ಮರಣೆ, ಮೌಲಿದ್ ಗ್ರಂಥ ಬಿಡುಗಡೆ, ಮುಶಾವರ ಸದಸ್ಯರಿಗೆ ಸನ್ಮಾನ

ಪುತ್ತೂರು, ನ.4: 'ಸಮಸ್ತ' ಉಲಮಾ ಒಕ್ಕೂಟದ ಶಿಲ್ಪಿ ಶಂಸುಲ್ ಉಲಮಾ ಮತ್ತು ಅಗಲಿದ ಉಲಮಾ ಉಮರಾ ನಾಯಕರ ಅನುಸ್ಮರಣೆ, ಮೌಲಾನ ಅಜ್ಜಕಟ್ಟೆ ಆದಂ ದಾರಿಮಿ ರಚಿಸಿದ ಶಂಸುಲ್ ಉಲಮಾ ಮೌಲಿದ್ ಗ್ರಂಥ ಬಿಡುಗಡೆ ಹಾಗೂ ಸಮಸ್ತದ ಕೇಂದ್ರೀಯ ಮುಶಾವರ ಸದಸ್ಯರಾಗಿ ಆಯ್ಕೆಗೊಂಡ ಉಳ್ಳಾಲ ಸೈಯದ್ ಮದನಿ ಅರಬಿಕ್ ಕಾಲೇಜಿನ ಪ್ರಾಂಶುಪಾಲ ಶೈಖುನಾ ಉಸ್ಮಾನ್ ಫೈಝಿಯವರಿಗೆ ಸನ್ಮಾನ ಕಾರ್ಯಕ್ರಮ ಕೆಮ್ಮಾರ ಶಕ್ತಿನಗರದ ಶಂಸುಲ್ ಉಲಮಾ ಮೆಮೋರಿಯಲ್ ದಅವಾ ಶರೀಅತ್ ಕಾಲೇಜಿನಲ್ಲಿ ನಡೆಯಿತು.
ಮೌಲಾನ ಅಜ್ಜಕಟ್ಟೆ ಆದಂ ದಾರಿಮಿ ಕಾರ್ಯಕ್ರಮ ಉದ್ಘಾಟಿಸಿದರು. ಶೈಖುನಾ ಉಸ್ಮಾನ್ ಫೈಝಿ ಮಾತನಾಡಿದರು.
ಸಂಸ್ಥೆಯ ಅಧ್ಯಕ್ಷ ಎಸ್.ಬಿ.ದಾರಿಮಿ ಅಧ್ಯಕ್ಷತೆ ವಹಿಸಿದ್ದರು.
ಪುತ್ತೂರು ಅನ್ಸಾರುದ್ದೀನ್ ಜಮಾಅತ್ ಸಮಿತಿ ಅಧ್ಯಕ್ಷ ಎಲ್.ಟಿ.ರಝಾಕ್ ಹಾಜಿ ಪುತ್ತೂರು, ಉದ್ಯಮಿಗಳಾದ ಉಮರ್ ಹಾಜಿ ಕೋಡಿಂಬಾಡಿ, ಬಶೀರ್ ಹಾಜಿ ದಾರಂದಕುಕ್ಕು, ಬದ್ರುದ್ದೀನ್ ಹೇಂತಾರ್, 'ಸಮಸ್ತ' ವಿದ್ಯಾಭ್ಯಾಸ ಬೋರ್ಡ್ ಸದಸ್ಯ ಅಬ್ದುರ್ರಶೀದ್ ಹಾಜಿ ಪರ್ಲಡ್ಕ,ರಹ್ಮತುಲ್ಲಾ ಹಾಜಿ ಪಾಟ್ರಕೋಡಿ, ಹಸೈನಾರ್ ಹಾಜಿ ಕೊಯಿಲ, ಎನ್.ಇಸಾಕ್ ಕೆಮ್ಮಾರ, ಹನೀಪ್ ದಾರಿಮಿ ಸವಣೂರು, ಎನ್.ಇಸ್ಮಾಯೀಲ್ ಕೆಮ್ಮಾರ, ಹನೀಫ್ ದಾರಿಮಿ ನೆಕ್ಕಿಲಾಡಿ, ಅಬ್ದುರ್ರಝಾಕ್ ದಾರಿಮಿ ಮೇನಾಲ, ಬಾಅಸನಿ ಕೆಮ್ಮಾರ ಮೊದಲಾದವರು ಉಪಸ್ಥಿತರಿದ್ದರು.
ಮ್ಯಾನೇಜರ್ ಕೆಎಂಎ ಕೊಡುಂಗಾಯಿ ಸ್ವಾಗತಿಸಿದರು. ಯೂನಿಕ್ ಅಬ್ದುರ್ರಹ್ಮಾನ್ ವಂದಿಸಿದರು.
