ಮದ್ಯದ ಅಮಲಿನಲ್ಲಿ ಕಾರ್ ಸ್ಟಂಟ್ ಮಾಡಿದ ಯುವಕರು, ಓರ್ವ ಮೃತ್ಯು, ಇಬ್ಬರಿಗೆ ಗಾಯ
![ಮದ್ಯದ ಅಮಲಿನಲ್ಲಿ ಕಾರ್ ಸ್ಟಂಟ್ ಮಾಡಿದ ಯುವಕರು, ಓರ್ವ ಮೃತ್ಯು, ಇಬ್ಬರಿಗೆ ಗಾಯ ಮದ್ಯದ ಅಮಲಿನಲ್ಲಿ ಕಾರ್ ಸ್ಟಂಟ್ ಮಾಡಿದ ಯುವಕರು, ಓರ್ವ ಮೃತ್ಯು, ಇಬ್ಬರಿಗೆ ಗಾಯ](https://www.varthabharati.in/sites/default/files/images/articles/2022/11/8/355638-1667883732.jpg)
ಗುರುಗ್ರಾಮ್: ಇಲ್ಲಿನ ಉದ್ಯೋಗ್ ವಿಹಾರ್ ಹಂತ-4ರಲ್ಲಿ ಮದ್ಯದ ಅಮಲಿನಲ್ಲಿ ತನ್ನ ಕಾರಿನೊಂದಿಗೆ ಸ್ಟಂಟ್ ಮಾಡುತ್ತಿದ್ದ ಯುವಕನೊಬ್ಬ 50 ವರ್ಷದ ವ್ಯಕ್ತಿಯೊಬ್ಬನಿಗೆ ಢಿಕ್ಕಿ ಹೊಡೆದು ಸಾಯಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಎಂಟು ಜನರನ್ನು ಸೋಮವಾರ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. .
ಆರೋಪಿಗಳಿಂದ ನಾಲ್ಕು ಚಕ್ರದ 2 ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಪೊಲೀಸರ ಪ್ರಕಾರ, ಸೌರಭ್ ಶರ್ಮಾ ಅಲಿಯಾಸ್ ಸೈಬಿ, ರಾಹುಲ್, ರವಿ ಸಿಂಗ್ ಅಲಿಯಾಸ್ ರವೀಂದರ್, ವಿಕಾಸ್ ಅಲಿಯಾಸ್ ವಿಕ್ಕಿ, ಮೋಹಿತ್, ಮುಕುಲ್ ಸೋನಿ ಮತ್ತು ಲವ್ ಅವರನ್ನು ಬೆಳಿಗ್ಗೆ ಬಂಧಿಸಲಾಗಿದ್ದು, ಅಶೋಕ್ ಎಂಬಾತನನ್ನು ತಡರಾತ್ರಿ ಬಂಧಿಸಲಾಗಿದೆ.
ಅಶೋಕ್ ಹೊರತುಪಡಿಸಿ ಉಳಿದವರೆಲ್ಲರನ್ನು ನಗರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಅವರು ಹೇಳಿದರು.
"ಸೌರಭ್ ಶರ್ಮಾ, ಮುಕುಲ್ ಸೋನಿ ಹಾಗೂ ಲವ್ ಟೂರ್ ಮತ್ತು ಟ್ರಾವೆಲ್ ಏಜೆನ್ಸಿಯಲ್ಲಿ ಕೆಲಸ ಮಾಡುತ್ತಿದ್ದರು. ರಾಹುಲ್ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ, ಮೋಹಿತ್ ಹೆಚ್ಚುವರಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕಂಪ್ಯೂಟರ್ ಆಪರೇಟರ್ ಆಗಿದ್ದಾನೆ. ರವಿ ಮತ್ತು ವಿಕಾಸ್ ಸಹೋದರರು" ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ರವಿವಾರ ನಡೆದ ಘಟನೆಯಲ್ಲಿ ಓರ್ವ ವ್ಯಕ್ತಿಯ ಸಾವಿನ ಜೊತೆಗೆ ಇಬ್ಬರು ಗಾಯಗೊಂಡಿದ್ದಾರೆ.
#gurugram उद्योग विहार एरिया में कार से स्टंट दिखाने के दौरान 1 व्यक्ति को कुचलकर मारने व 2 को घायल करने के मामले का सीसीटीवी फुटेज। 7 आरोपियों को पुलिस ने अरेस्ट कर लिया है @NBTDilli pic.twitter.com/BSklVtqmVX
— Sonu Yadav (@SonuYadavNBT) November 7, 2022
#Gurugram में मौत की स्टंटबाज़ी, Wine Shop के बाहर स्टंट करते हुए तीन लोगों को मारी टक्कर एक बेगुनाह की मौत @gurgaonpolice pic.twitter.com/edZYWDB39e
— Sunil K Yadav (@SunilYadavRao) November 7, 2022