“ಮದ್ಯ ಸೇವಿಸಿ, ಗುಟ್ಕಾ ತಿನ್ನಿ": ನೀರಿನ ಸಂರಕ್ಷಣೆ ಕುರಿತು ಬಿಜೆಪಿ ಸಂಸದರ ವಿಚಿತ್ರ ಸಲಹೆ!
![“ಮದ್ಯ ಸೇವಿಸಿ, ಗುಟ್ಕಾ ತಿನ್ನಿ: ನೀರಿನ ಸಂರಕ್ಷಣೆ ಕುರಿತು ಬಿಜೆಪಿ ಸಂಸದರ ವಿಚಿತ್ರ ಸಲಹೆ! “ಮದ್ಯ ಸೇವಿಸಿ, ಗುಟ್ಕಾ ತಿನ್ನಿ: ನೀರಿನ ಸಂರಕ್ಷಣೆ ಕುರಿತು ಬಿಜೆಪಿ ಸಂಸದರ ವಿಚಿತ್ರ ಸಲಹೆ!](https://www.varthabharati.in/sites/default/files/images/articles/2022/11/8/355641-1667888568.jpg)
ರೇವಾ (ಮಧ್ಯಪ್ರದೇಶ): ರೇವಾ ಕ್ಷೇತ್ರದ ಭಾರತೀಯ ಜನತಾ ಪಕ್ಷದ (ಬಿಜೆಪಿ) ಸಂಸದ (ಎಂಪಿ) ಜನಾರ್ದನ್ ಮಿಶ್ರಾ ಅವರು ರೇವಾದಲ್ಲಿನ ನೀರಿನ ಸಂರಕ್ಷಣೆ ಕುರಿತು ವಿಚಿತ್ರವಾದ ಹೇಳಿಕೆ ನೀಡಿದ್ದಾರೆ.
"ನೀರು ಸಿಗದೆ ಭೂಮಿ ಬರಡಾಗುತ್ತಿದೆ, ನಾವು ಅದನ್ನು ಉಳಿಸಬೇಕು. ಒಂದೋ ಗುಟ್ಕಾ ತಿನ್ನಿರಿ, ಮದ್ಯವನ್ನು ಸೇವಿಸಿ, ಸಲ್ಯೂಷನ್ (ಒಂದು ರೀತಿಯ ಅಂಟು) ಸೇವಿಸಿ ಅಥವಾ ಅಯೋಡೆಕ್ಸ್ ತಿನ್ನಿರಿ. ಆದರೆ ನೀರಿನ ಮಹತ್ವವನ್ನು ಅರ್ಥಮಾಡಿಕೊಳ್ಳಿ" ಎಂದು ಜನಾರ್ದನ್ ಮಿಶ್ರಾ ಜಲ ಸಂರಕ್ಷಣಾ ಕಾರ್ಯಾಗಾರದಲ್ಲಿ ಹೇಳಿದರು.
ರವಿವಾರ ಜಿಲ್ಲೆಯ ರೇವಾದ ಕೃಷ್ಣರಾಜ್ ಕಪೂರ್ ಸಭಾಂಗಣದಲ್ಲಿ ಕಾರ್ಯಾಗಾರ ಆಯೋಜಿಸಲಾಗಿತ್ತು. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮಿಶ್ರಾ ಅವರು ಈರೀತಿಯ ಹೇಳಿಕೆಯಿಂದ ಸುದ್ದಿಯಾಗುತ್ತಿರುವುದು ಇದೇ ಮೊದಲಲ್ಲ. ಅವರು ಯಾವಾಗಲೂ ತಮ್ಮ ಅನಿರೀಕ್ಷಿತ ವಿಚಿತ್ರ ಹೇಳಿಕೆಗಳ ಮೂಲಕ ಸುದ್ದಿಯಾಗುತ್ತಿರುತ್ತಾರೆ. ಇತ್ತೀಚೆಗಷ್ಟೇ ಅವರು ತನ್ನ ಕೈಯಿಂದಲೇ ಶೌಚಾಲಯವನ್ನು ಸ್ವಚ್ಛಗೊಳಿಸುತ್ತಿರುವ ವೀಡಿಯೊವೊಂದು ವೈರಲ್ ಆಗಿತ್ತು.
#WATCH | Rewa, Madhya Pradesh: "Lands are running dry of water, it must be saved... Drink alcohol, chew tobacco, smoke weed or smell thinner and solution but understand the importance of water," says BJP MP Janardan Mishra during a water conservation workshop pic.twitter.com/Nk878A9Jgc
— ANI (@ANI) November 7, 2022